ಕನ್ನಡಪ್ರಭ ವಾರ್ತೆ ಮೈಸೂರು
ಸಿದ್ದರಾಮಯ್ಯ ಅವರ ಹುಟ್ಟುಹಬ್ಬ ಅಂಗವಾಗಿ ನಗರ ಪಾಲಿಕೆ ಮಾಜಿ ಸದಸ್ಯ ಎಂ. ಶಿವಣ್ಣ ನೇತೃತ್ವದಲ್ಲಿ ಬುಧವಾರ ತಿಲಕನಗರದ ಸರ್ಕಾರಿ ವಿಶೇಷ ಚೇತನ ಮಕ್ಕಳ ಶಾಲೆಯಲ್ಲಿ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣೆ, ಔಷಧ ವಿತರಣೆ ಹಾಗೂ ಅನ್ನ ಸಂತರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಿದ್ದರಾಮಯ್ಯ ಅವರು ನುಡಿದಂತೆ ನಡೆದ ಮುಖ್ಯಮಂತ್ರಿ. ಯಾವುದೇ ವ್ಯಕ್ತಿಗೆ ಹುಟ್ಟು, ಸಾವು ಖಚಿತ. ಹಾಗಾಗಿ ಜೀವಿತಾವಧಿಯಲ್ಲಿ ಏನಾದರೂ ಸಾಧಿಸಬೇಕು. ಒಂದು ವೇಳೆ ಸಾಧ್ಯವಾಗದಿದ್ದರೆ ಯಾರಿಗೂ ತೊಂದರೆ ಆಗಬಾರದು. ಸಿದ್ದರಾಮಯ್ಯ ಅವರಲ್ಲಿ ಇಂತಹ ಮೇರು ವ್ಯಕ್ತಿತ್ವವನ್ನು ಕಾಣಬಹುದು ಎಂದರು.ಸಾಮಾನ್ಯ ಕುಟುಂಬದಿಂದ ಬಂದ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ನಾನಾ ಕೊಡುಗೆಗಳು, ಭಾಗ್ಯಗಳನ್ನು ನೀಡಿದರು. ಅವರಿಗೆ ಬಡವರನ್ನು ಕಂಡರೆ ವಿಶೇಷ ಆಸಕ್ತಿ. ಹಾಗಾಗಿಯೇ ಅವರು ಅವಕಾಶ ವಂಚಿತ ಸಮುದಾಯದ ಏಳಿಗೆಗಾಗಿ ಹೆಚ್ಚು ಶ್ರಮಿಸಿದರು. ಸ್ತ್ರೀ ಶಕ್ತಿಗೆ ನಾನಾ ಯೋಜನೆ ನೀಡಿದ್ದಾಗಿ ಅವರು ಸ್ಮರಿಸಿದರು.
ಅಲ್ಲದೇ, ತಿಲಕನಗರದ ಸರ್ಕಾರಿ ವಿಶೇಷ ಚೇತನ ಶಾಲೆ ಮಕ್ಕಳಿಗೆ ಉಚಿತವಾಗಿ ಆರೋಗ್ಯ ತಪಾಸಣ ಶಿಬಿರ ಆಯೋಜಿಸಲಾಗಿದೆ. ಅಲ್ಲದೇ ಸಮಸ್ಯೆ ಇರುವವರಿಗೆ ಔಷಧವನ್ನೂ ವಿತರಿಸಲಾಗಿದೆ. ಇದಕ್ಕೆ ಮೈಸೂರಿನ ಕೆ.ಆರ್. ಆಸ್ಪತ್ರೆ, ಬಿಜಿಎಸ್ ಅಪೋಲೊ ಆಸ್ಪತ್ರೆ ಇದಕ್ಕೆ ಸಹಕಾರ ನೀಡಿದೆ ಎಂದರು.
ಕಾಂಗ್ರೆಸ್ ನಗರಾಧ್ಯಕ್ಷ ಆರ್. ಮೂರ್ತಿ, ಮಾಜಿ ಮೇಯರ್ ಅನಂತ, ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ರಾಮಪ್ಪ, ಶಾಲೆಯ ಅಧೀಕ್ಷಕ ಸತೀಶ್, ಮುಖಂಡರಾದ ರವಿ, ನಂದಕುಮಾರ್, ಸುರೇಶ್, ಸಿದ್ದಪ್ಪ, ವಿಜಯ್ ಕುಮಾರ್, ಸುರೇಶ್ ಬಾಬು ಮೊದಲಾದವರು ಇದ್ದರು.