- ಪಾಲಿಕೆಗೆ ₹200 ಕೋಟಿ, ದಾವಣಗೆರೆ-ಜಗಳೂರು ಆಸ್ಪತ್ರೆಗಳು, ವೃತ್ತಿ ರಂಗಭೂಮಿ ರಂಗಾಯಣ ಅಭಿವೃದ್ಧಿಗೆ ಅನುದಾನ ಘೋಷಣೆ
- - - ಕನ್ನಡಪ್ರಭ ವಾರ್ತೆ ದಾವಣಗೆರೆ
ದಾವಣಗೆರೆ ಪಾಲಿಕೆಗೆ ₹200 ಕೋಟಿ ವಿಶೇಷ ಅನುದಾನ, ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳಗಳ ಸ್ಥಾಪನೆ, ಕೊಂಡಜ್ಜಿಯ ವೃತ್ತಿ ರಂಗಭೂಮಿ ರಂಗಾಯಣಕ್ಕೆ ಮೂಲಸೌಕರ್ಯ, ಜಗಳೂರು ತಾಲೂಕಿನ ಕೆರೆಗಳನ್ನು ತುಂಬಿಸುವ, ಸೂರಗೊಂಡನಕೊಪ್ಪದಲ್ಲಿ ವಸತಿ ಶಾಲೆ, ಬಂಜಾರ ಕಸೂತಿ ತರಬೇತಿ ಕೇಂದ್ರ,..ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಅಧಿಕಾರವಧಿಯಲ್ಲಿ ದಾಖಲೆಯ 16ನೇ ಬಜೆಟ್ ಶುಕ್ರವಾರ ಮಂಡಿಸಿದ್ದಾರೆ. ಈ ಬಾರಿ ದಾವಣಗೆರೆ ಜಿಲ್ಲೆಯನ್ನು ಕಡೆಗಣಿಸದೇ ಅಷ್ಟೋ ಇಷ್ಟೋ ಸ್ಪಂದಿಸಿದ್ದಾರೆ. ಪ್ರಮುಖ ಬೇಡಿಕೆ, ನಿರೀಕ್ಷೆಗಳನ್ನು ಹುಸಿ ಮಾಡಿದ್ದಾರೆ. ಕೆಲವೊಂದಷ್ಟಾದರೂ ಲಾಭ ಸಿಕ್ಕಿದೆ ಅಂತಾ ಅಂದುಕೊಂಡು ಸುಮ್ಮನಾಗುವ ಪರಿಸ್ಥಿತಿಯಲ್ಲಿ ದಾವಣಗೆರೆ ಜಿಲ್ಲೆಯ ಜನರಿದ್ದಾರೆ. ದಾವಣಗೆರೆ ಪಾಲಿಕೆಗೆ ವಿಶೇಷ ಅನುದಾನ, ಇ-ಆಫೀಸ್ ಸ್ಥಾಪಿಸಲು ಸರ್ಕಾರ ಮುಂದಾಗಿದೆ. ಶಿಕ್ಷಣ, ಆರೋಗ್ಯ, ಕೃಷಿ, ಕಲೆ, ಸುರಕ್ಷತೆ ಹೀಗೆ ಜಿಲ್ಲೆಗೆ ಕೊಟ್ಟಿದ್ದು ಯಾವುದನ್ನೂ ಅಲ್ಲಗೆಳೆಯುವಂತಿಲ್ಲ. ಆದರೆ, ಕೊಡಬೇಕಾಗಿದ್ದ ನಿರೀಕ್ಷೆಗಳ ಮೂಟೆ ಮಾತ್ರ ಇಂದಿಗೂ ಕರಗಿಲ್ಲ ಎಂಬುದು ಅಷ್ಟೇ ಸತ್ಯ.
ಸಿಎಂ ಸಿದ್ದರಾಮಯ್ಯ 2025-26ನೇ ಸಾಲಿನ ಬಜೆಟ್ನಲ್ಲಿ ದಾವಣಗೆರೆ ಜಿಲ್ಲಾಸ್ಪತ್ರೆ, ಜಗಳೂರು ತಾಲೂಕು ಆಸ್ಪತ್ರೆ ಸೇರಿದಂತೆ ಇತರೆ ಜಿಲ್ಲೆಗಳ 8 ತಾಲೂಕು ಆಸ್ಪತ್ರೆಗಳನ್ನು ₹650 ಕೋಟಿ ವೆಚ್ಚದಲ್ಲಿ ನವೀಕರಣ ಮಾಡಲು ಅನುದಾನ ಮೀಸಲಿಟ್ಟಿದ್ದಾರೆ. ಬಂಜಾರ ಸಮುದಾಯದ ಪುಣ್ಯಕ್ಷೇತ್ರವಾದ ನ್ಯಾಮತಿ ತಾಲೂಕಿನ ಸೂರಗೊಂಡನಕೊಪ್ಪದಲ್ಲಿ ಒಂದು ವಸತಿ ಶಾಲೆಯನ್ನು ಕ್ರೈಸ್ಟ್ನಿಂದ ಸ್ಥಾಪಿಸುವುದಾಗಿ ಸಿಎಂ ಬಜೆಟ್ನಲ್ಲಿ ಮೀಸಲಿಟ್ಟಿದ್ದಾರೆ. ಲಂಬಾಣಿ ಜನಾಂಗದ ಕಸೂತಿ ತರಬೇತಿ ಕೇಂದ್ರ ಸ್ಥಾಪಿಸುವ ಘೋಷಣೆ ಮಾಡಿದ್ದಾರೆ. ಹೊಸ ತಾಲೂಕು ಕೇಂದ್ರವಾದರೂ ಸೌಲಭ್ಯಗಳು, ಕಚೇರಿಗಳೇ ಇಲ್ಲದೇ ಎಲ್ಲದಕ್ಕೂ ಬಹುತೇಕ ಹೊನ್ನಾಳಿ ತಾಲೂಕು ಕೇಂದ್ರವನ್ನೇ ಅವಲಂಬಿಸಿರುವ ನ್ಯಾಮತಿಯಲ್ಲಿ ಪ್ರಜಾಸೌಧ ನಿರ್ಮಿಸುವ ಘೋಷಣೆಯಾಗಿದೆ.
ಹರಿಹರ ತಾಲೂಕಿನ ಕೊಂಡಜ್ಜಿ ಪರಿಸರದಲ್ಲಿ ವೃತ್ತಿ ರಂಗಭೂಮಿ ರಂಗಾಯಣದಲ್ಲಿ ₹3 ಕೋಟಿ ವೆಚ್ಚದಲ್ಲಿ ಮೂಲ ಸೌಕರ್ಯ, ವೃತ್ತಿ ರಂಗಾಯಣ ಸಮುಚ್ಛಯ ಹಾಗೂ ಥಿಯೇಟರ್ ಮ್ಯೂಸಿಯಂ ಸ್ಥಾಪಿಸಲುದ್ದೇಶಿಸಲಾಗಿದೆ. ಜಗಳೂರು ತಾಲೂಕಿನ 30 ಕೆರೆಗಳನ್ನು ತುಂಬಿಸುವ ಘೋಷಣೆ ಮಾಡಲಾಗಿದೆ. ಹೊನ್ನಾಳಿ ತಾಲೂಕಿನ ಬೆನಕನಹಳ್ಳಿ, ಗೋವಿನಕೋವಿ, ಹನುಮಸಾಗರ ಕೆರೆಗಳನ್ನು ತುಂಬಿಸಲು ಸಹ ಅನುದಾನ ಕಾಯ್ದಿರಿಸಲಾಗಿದೆ.
ಎಐ ವಿದ್ಯುನ್ಮಾನ ಕ್ಯಾಮರಾ ಅಳವಡಿಕೆ:
- - -
2) ವಿಮಾನ ನಿಲ್ದಾಣ, ಜವಳಿ ಪಾರ್ಕ್, ಟ್ರಕ್ ಟರ್ಮಿನಲ್, ಐಟಿ ಬಿಟಿ, ಜಿಲ್ಲೆಯ ಜೀವನಾಡಿ ಭದ್ರಾ ನಾಲೆಗಳ ಆಧುನೀಕರಣ ಇರಲಿ, ನಾಲೆಯಲ್ಲಿನ ಹೂಳು, ಗಿಡಗಂಟೆ, ಮುಳ್ಳುಗಿಡ ತೆರವಿಗೂ ಅನುದಾನ ಇಟ್ಟಿಲ್ಲ.
4) ಮೂರನೇ ವಿಶ್ವ ಕನ್ನಡ ಸಮ್ಮೇಳನ ದಶಕದಿಂದಲೂ ನನೆಗುದಿಗೆ ಬಿದ್ದಿದ್ದರೂ, ಅದರ ಬಗ್ಗೆಯೂ ಬಜೆಟ್ನಲ್ಲಿ ಚಕಾರ ಎತ್ತಿಲ್ಲ.
5) ದಾವಣಗೆರೆ ಜಿಲ್ಲೆಯಲ್ಲಿ ಐತಿಹಾಸಿಕ, ಪ್ರಾಚೀನ ದೇಗುಲ, ಪುಷ್ಕರಿಣಿ, ಆಧುನಿಕ ಗಾಜಿನ ಮನೆ, ಶತಶತಮಾನಗಳ ಸೂಳೆಕೆರೆ, ಪುಷ್ಕರಿಣಿ, ದೇಗುಲಗಳೇ ಇದೆ. ಆದರೆ, ರಾಜ್ಯ ಪ್ರವಾಸೋದ್ಯಮ ನಕ್ಷೆಯಲ್ಲಿ ದಾವಣಗೆರೆಗೊಂದು ಸ್ಥಾನವೇ ಸಿಕ್ಕಿಲ್ಲವೆಂಬುದು ಸತ್ಯ.- - - (* ಫೋಟೋಗಳು ಬರಬಹುದು)