ಕಲಬುರಗಿ: ಕಲಬುರಗಿಯ ಐತಿಹಾಸಿಕ ಸಂಪುಟ ಸಭೆಗೆ ಸಿಎಂ ಸಿದ್ದರಾಮಯ್ಯ ಮತ್ತು ಸಂಪುಟದ ಹಿರಿಯ ಸಚಿವರೆಲ್ಲರೂ ಕೆಕೆಆರ್ಟಿಸಿ ಸಾರಿಗೆ ಸಂಸ್ಥೆ ಬಸ್ನಲ್ಲಿ ಬಂದಿಳಿಯುವ ಮೂಲಕ ಗಮನ ಸೆಳೆದರು.
ಕೆಂಪು ಬಸ್ನ ಮುಂದಿನ ಸೀಟ್ನಲ್ಲಿ ಕುಳಿತು ಆಗಮಿಸಿದ ಸಿದ್ದರಾಮಯ್ಯನವರ ಹಿಂಬದಿ ಸೀಟಿನಲ್ಲೇ ಡಿಸಿಎಂ ಡಿಕೆ ಶಿವಕುಮಾರ ಕುಳಿತಿದ್ದರು.
ಸಚಿವರಾದ ಜಿ.ಪರಮೇಶ್ವರ, ಎಚ್.ಕೆ.ಪಾಟೀಲ್, ಡಾ. ಶರಣಪ್ರಕಾಶ ಪಾಟೀಲ್, ಪ್ರಿಯಾಂಕ್ ಖರ್ಗೆ, ಸಂತೋಷ ಲಾಡ್, ದಿನೇಶ್ ಗುಂಡೂರಾವ ಇನ್ನಿತರ ಸಚಿವರೊಂದಿಗೆ ವಿಧಾನ ಸೌಧಕ್ಕೆ ಬಸ್ನಲ್ಲೇ ಬಂದರು. ಎಲ್ಲರೂ ವಿಕಾಸ ಭವನದ ಮೆಟ್ಟಿಲುಗಳ ಮುಂದೆ ನಿಂತು ಕೈ ಬೀಸಿದರು.ಓಡೋಡಿ ಬಂದ ಸಚಿವೆ ಹೆಬ್ಬಾಳ್ಕರ್: ಸಂಪುಟ ಸಭೆಗೆ ಸಿಎಂ ಮತ್ತು ಸಂಪುಟ ದರ್ಜೆ ಸಚಿವರೆಲ್ಲರೂ ವಿಕಾಸಸೌಧದ ಮೆಟ್ಟಿಲ ಮೇಲೆ ನಿಂತು ಕೈ ಬೀಸುತ್ತಿರುವಾಗ ಕಾರಲ್ಲಿ ಬಂದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವಸರದಲ್ಲಿ ಮೆಟ್ಟಿಲು ಹತ್ತಿ ಓಡೋಡಿ ಬಂದು ಎಲ್ಲರ ಜೊತೆ ನಿಂತು ಕೈ ಬೀಸಿದರು.