ಕನ್ನಡಪ್ರಭ ವಾರ್ತೆ ಮಂಡ್ಯ
ತಾಲೂಕಿನ ಹನಕೆರೆ ಗ್ರಾಮದ ರೈತ ಶಿಕ್ಷಣ ಸಂಸ್ಥೆ ಆವರಣದಲ್ಲಿ ನಡೆದ ಹಿಂದೂ ಸಮಾಜೋತ್ಸವ ಉದ್ಘಾಟಿಸಿ ಮಾತನಾಡಿ, ಹಿಂದೂಗಳು ಆಚರಿಸುವ ಗಣೇಶ, ಶಾರದಾ, ದುರ್ಗಾ, ಸೇರಿದಂತೆ ಇತರೆ ಮೆರವಣಿಗೆ ಮೇಲೆ ಕಲ್ಲು ಎಸೆದು ಹಲ್ಲೆ ಮಾಡುವಂತಹ ಪ್ರಕ್ರಿಯೆಗಳು ನಡೆಯುತ್ತಿವೆ. ಇದರಿಂದ ಹಿಂದೂಗಳ ಮೇಲೆ ದೌರ್ಜನ್ಯ ನಡೆಸಿ ಸಾಮರಸ್ಯೆ ಕೆಡಿಸುವ ಸ್ಥಿತಿಗೆ ತಂದು ನಿಲ್ಲಿಸಲಾಗುತ್ತಿದೆ ಎಂದು ಎಚ್ಚರಿಸಿದರು.
ಪಾಕಿಸ್ತಾನ, ಬಾಂಗ್ಲಾದಲ್ಲಿ ಹಿಂದೂಗಳ ಸಂಖ್ಯೆ ಕಡಿಮೆಯಾಯಿತು. ಒಂದು ಪ್ರಾಂತ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದ ಹಿಂದೂಗಳು ಅಲ್ಪಸಂಖ್ಯಾತರಾದರು. ನಂತರದ ದಿನಗಳಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ, ಹತ್ಯೆಯಂತ ಪ್ರಕರಣ ಹೆಚ್ಚಾಯಿತು ಎಂದರು.ಪ್ರಸ್ತುತ ಬೆಂಗಳೂರು, ಮೈಸೂರು ಸೇರಿದಂತೆ ರಾಜ್ಯ ಮತ್ತು ದೇಶದ ಕೆಲ ವಿಧಾನ ಸಭಾ ಕ್ಷೇತ್ರಗಳಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾಗಿರುವ ಕಡೆಗಳಲ್ಲಿ ಹಿಂದೂಗಳು ಗೆಲಲ್ಲು ಸಾಧ್ಯವಾಗುತ್ತಿಲ್ಲ. ಇದು ಕೇವಲ ಒಂದು ಪಕ್ಷ ಮಾತ್ರ ಚಿಂತನೆ ಮಾಡುವಂತಹುದ್ದಲ್ಲ. ಎಲ್ಲ ರಾಜಕೀಯ ಪಕ್ಷಗಳೂ ಈ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸಬೇಕಾಗಿದೆ ಎಂದರು.
ಘಜ್ನಿ ಮೊಹಮ್ಮದ್ ಹಲವು ಬಾರಿ ದಾಳಿ ನಡೆಸಿದಾಗಲೂ ಸೋಮನಾಥನನ್ನು ಏನೂ ಮಾಡಲಾಗಲಿಲ್ಲ. ಅಲ್ಲಿ ಈಗಲೂ ಕೋಟ್ಯಂತರ ಭಕ್ತರು ದರ್ಶನ ಮಾಡುತ್ತಿದ್ದಾರೆ. ಅದೇ ರೀತಿ ಶ್ರೀರಂಗಪಟ್ಟಣದಲ್ಲಿ ಟಿಪ್ಪು ಸುಲ್ತಾನ್ ನಡೆಸಿದ ದೌರ್ಜನ್ಯ, ಅತ್ಯಾಚಾರ, ಅನಾಚಾರಗಳು ಒಂದೇ ಎರಡೇ.., ಆದರೂ ಅಲ್ಲಿ ಶ್ರೀರಂಗನಾಥನ ಪೂಜೆ ತಪ್ಪಲಿಲ್ಲ. ಬೇಲೂರು, ಹಳೇಬೀಡಿನಲ್ಲೂ ಆಕ್ರಮಣ ನಡೆದಿತ್ತು. ಆದರೂ ಅಲ್ಲಿ ಚನ್ನಕೇಶನವನ ಪೂಜೆ ನಿಂತಿಲ್ಲ ಎಂದು ಪ್ರತಿಪಾದಿಸಿದರು.
ಪ್ರಸ್ತುತ ಭಾರತ ವಿಶ್ವಗುರುವಾಗಿದೆ. ಎಲ್ಲ ದೇಶಗಳೂ ಭಾರತದತ್ತ ನೋಡುತ್ತಿವೆ. ಇಲ್ಲಿನ ಸಂಸ್ಕೃತಿ, ಆಚರಣೆ, ಸಂಪ್ರದಾಯ ಎಲ್ಲವನ್ನೂ ಅಳವಡಿಸಿಕೊಳ್ಳುವತ್ತ ದಾಪುಗಾಲು ಇಟ್ಟಿವೆ. ಬೇರೆ ಬೇರೆ ರಾಷ್ಟ್ರಗಳಿಗೆ ಭಾರತ ಅಧ್ಯಯನದ ವಸ್ತುವಾಗುತ್ತಿದೆ. ಕುಂಭ ಮೇಳಕ್ಕೆ 60 ಕೋಟಿ ಜನ ಬಂದಿದ್ದರು. ಇದು ನಮ್ಮ ಸಂಸ್ಕೃತಿಯ ಪ್ರತೀಕವಾಗಿದೆ ಎಂದರು.
ಗೌರಿಗದ್ದೆ ಆಶ್ರಮದ ಅವಧೂತ ಶ್ರೀವಿನಯ್ ಗುರೂಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಹಿಂದೂ ಸಮಾಜೋತ್ಸವ ಒಂದು ಪವಿತ್ರ ಕಾರ್ಯಯಕ್ರಮ. ಮನುಷ್ಯರಲ್ಲಿ ಇರುವ ಆಹಂಕಾರವನ್ನು ಕಡಿಮೆ ಮಾಡುವ ಶಕ್ತಿ ತೀರ್ಥಕ್ಕಿದೆ. ಹಾಗಾಗಿ ಭಾರತ ತೀರ್ಥಕ್ಷೇತ್ರವಾಗಿದೆ. ಅಮೃತ ಕಳಸ ಇರುವುದು ಶ್ರೀರಂಗಪಟ್ಟಣದ ಶ್ರೀರಂಗನಾಥನ ಪಾದದ ಕೆಳಗೆ. ಇಲ್ಲಿ ಕಾವೇರಿ ಹರಿಯುತ್ತಿದ್ದಾಳೆ. ಹನುಮಂತ ದೇವರು ಇರುವುದೂ ಇಲ್ಲಿಯೇ. ಹಾಗಾಗಿ ಇಷ್ಟು ಪವಿತ್ರವಾದ ಮಂಡ್ಯ ಜಿಲ್ಲೆಯಲ್ಲಿ ಪುಣ್ಯದ ಕೆಲಸ ಮಾಡಬೇಕು ಎಂದರು.