- ಅಡಕೆ, ಬಾಳೆ ಬೆಳೆ, ಪೈಪುಗಳು ಭಸ್ಮ । ಪರಿಹಾರಕ್ಕೆ ಮಾಲೀಕರ ಒತ್ತಾಯ - - -
ಪಟ್ಟಣದ ಕೊಟ್ಟೂರು ರಸ್ತೆಯ ಪಟ್ಟಣದ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಹೊತ್ತಿದ ಬೆಂಕಿಯು ಚಂದೋಡಿ ಲೀಲಾ ನಾಟಕ ಕಂಪನಿ ಮಾಲೀಕ ಶಂಭುಲಿಂಗಪ್ಪ ಅವರ ಅಳಿಯ ಜೆ.ಎಸ್. ಪ್ರಶಾಂತ್ ಕುಮಾರ್ ಅವರಿಗೆ ಸೇರಿದ ಜಮೀನಿಗೆ ತಗುಲಿ, ಸುಮಾರು ೩೦೦ ಅಡಕೆ, ೩೦೦ ಬಾಳೆ ಗಿಡಗಳು, ಲ್ಯಾಟರಲ್ ಪೈಪ್ಗಳು, ಸ್ಪ್ಲಿಂಕ್ಲರ್ ಪೈಪ್ಗಳು ಸುಟ್ಟು ಕರಕಲಾಗಿರುವ ಘಟನೆ ನಡೆದಿದೆ.
ಭಾನುವಾರ ಸಂಜೆ ೪ ಗಂಟೆ ಸುಮಾರಿಗೆ ತೋಟಕ್ಕೆ ಬೆಂಕಿ ಬಿದ್ದಿದೆ. ಪ್ಲಾಸ್ಟಿಕ್, ರಸ್ತೆ ಬದಿ ಕಸ, ಹಸಿಕಸ, ಒಣಕಸ ವಿಂಗಡಿಸುವ ಕಸ ಸಂಸ್ಕರಣ ಮತ್ತು ತ್ಯಾಜ್ಯ ವಿಲೇವಾರಿ ಜಾಗದಲ್ಲಿ ಹೊತ್ತಿಕೊಂಡ ಬೆಂಕಿಯ ಕಿಡಿಗಳು ತೋಟಕ್ಕೂ ತಾಗಿ, ಎರಡು ವರ್ಷದ ಅಡಕೆ, ಬಾಳೆ ಫಸಲು ನಾಶವಾಗಿವೆ.ಕಾಂಪೌಂಡ್ ಇದ್ದರೂ ಬೆಂಕಿಯ ಕಿಡಿಗಳು ಗಾಳಿ ಮೂಲಕ ಒಳಹುಲ್ಲಿನ ಕಿರಿದಾದ ಬೆಟ್ಟಕ್ಕೆ ತಾಗಿ ಉರುದಿದೆ. ಅನಂತರ ಪ್ರಶಾಂತ ಕುಮಾರ್ ಅವರ ತೋಟಕ್ಕೆ ಬೆಂಕಿ ಹರಡಿದೆ. ರೈತರು ಯುಗಾದಿ ಸಂಭ್ರಮದಲ್ಲಿದ್ದರಿಂದ ಬೆಂಕಿ ವ್ಯಾಪಿಸುತ್ತಿರುವುದು ಗಮನಿಸಿಲ್ಲ. ಕೆಲವರು ಹೊಗೆ, ಬೆಂಕಿಯ ಜ್ವಾಲೆ ವೀಕ್ಷಿಸಿ, ಪಕ್ಕದ ಜಮೀನಿನ ರೈತ ಪ್ರಶಾಂತ ಕುಮಾರ್ ಗಮನಕ್ಕೆ ತಂದಾಗಲೇ ತೋಟಕ್ಕೆ ಬೆಂಕಿ ಹಬ್ಬಿರುವುದು ಗೊತ್ತಾಗಿದೆ. ತಕ್ಷಣ ಅಗ್ನಿಶಾಮಕ ಠಾಣಾ ಸಿಬ್ಬಂದಿಗೆ ಕರೆ ಮಾಡಿ ಮಾಹಿತಿ ನೀಡಲಾಯಿತು.
ವರದಿಗೆ ಶಾಸಕ ಸೂಚನೆ:
ಜಮೀನಿನಲ್ಲಿ ೩೦೦ ಅಡಕೆ, 300 ಬಾಳೆ ಗಿಡಗಳು ಸುಟ್ಟು ಕರಕಲಾಗಿವೆ. ಇದಕ್ಕೆ ಕಾರಣ ಪ.ಪಂ. ಘನ ತ್ಯಾಜ್ಯ ನಿರ್ವಹಣೆಯ ಲೋಪವಾಗಿದೆ. ಪ.ಪಂ. ಅಧಿಕಾರಿಗಳು ಮತ್ತು ಸರ್ಕಾರ ನಷ್ಟ ಭರಿಸಿಕೊಡಬೇಕು. ಕಟ್ಟಡದ ಕಾಂಪೌಂಡನ್ನು ಇನ್ನಷ್ಟು ಎತ್ತರಿಸಲು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗೆ ತೋಟದ ಮಾಲೀಕರಾದ ಪ್ರಶಾಂತ ಕುಮಾರ್ ಮತ್ತು ಶಂಭುಲಿಂಗಪ್ಪ ಮನವಿ ಮಾಡಿದರು.
(ಕೋಟ್) ಮೇಲ್ನೋಟಕ್ಕೆ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಹೊತ್ತಿದ್ದ ಬೆಂಕಿಯು ತೋಟಕ್ಕೂ ತಗುಲಿದೆ ಎಂದು ಕಾಣುತ್ತಿದೆ. ಕಾನೂನು ಅನುಸಾರ ನಷ್ಟ ಭರಿಸಲು ಶಾಸಕ ಬಿ.ದೇವೇಂದ್ರಪ್ಪ ಮತ್ತು ಉನ್ನತ ಅಧಿಕಾರಿಗಳಿಗೆ ಗಮನಕ್ಕೆ ತರುತ್ತೇನೆ
-೧ಜೆಎಲ್ಆರ್ಚಿತ್ರ೧: