ಕನ್ನಡಪ್ರಭ ವಾರ್ತೆ ಕಲಬುರಗಿ
ಇಲ್ಲಿನ ಡಿ.ಸಿ ಕಚೇರಿ ಸಭಾಂಗಣದಲ್ಲಿ ಪ್ರಸಕ್ತ 2024-25ನೇ ಸಾಲಿನ ಮುಂಗಾರು ಸಿದ್ಧತೆ ಕುರಿತು ಚರ್ಚಿಸಲು ಕೃಷಿ, ತೋಟಗಾರಿಕೆ ಹಾಗೂ ಇತರೆ ಸಂಬಂಧಿತ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕ ದಾಸ್ತಾನು, ಖರ್ಚು ಬಗ್ಗೆ ರೈತರಿಗೆ ಆಗಾಗ ಮಾಹಿತಿ ನೀಡಬೇಕು. ರೈತರು ಅತಂಕ ಪಡುವಂತಹ ಸ್ಥಿತಿ ಎಲ್ಲಿಯೂ ನಿರ್ಮಾಣವಾಗಬಾರದು. ತಾಲೂಕಿನ ಬೇಡಿಕೆಯಂತೆ ಹಂಚಿಕೆ ಮಾಡಬೇಕೆಂದರು.
2023-24 ನೇ ಸಾಲಿನಲ್ಲಿ ಬೆಳೆ ವಿಮೆಗೆ ಸಂಬಂಧಿಸಿದಂತೆ ತೊಗರಿ ಬೆಳೆಯ ಮಧ್ಯಂತರ ಪರಿಹಾರದ ಹಣ ರೈತರ ಖಾತೆಗೆ ಜಮೆಯಾಗಿರುತ್ತದೆ. ಉಳಿದ ಸ್ಥಳಿಯ ಪ್ರಕೃತಿ ವಿಕೋಪದಡಿ ಹಾಗೂ ಬೆಳೆ ಕಟಾವು ಪ್ರಯೋಗದ ಆಧಾರದ ಬೆಳೆ ವಿಮೆ ಹಣವನ್ನು ಒಂದು ವಾರದೂಳಗೆ ರೈತರ ಖಾತೆಗೆ ಜಮೆ ಮಾಡಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ ಡಿ.ಸಿ. ಅವರು, ಮುಂಗಾರು ಸಿದ್ಧತೆ ಕುರಿತ ಕರೆಯಲಾದ ಪ್ರಮುಖ ಸಭೆಗೆ ಯೂನಿವರ್ಸಲ್ ಸೊಂಪು ಜನರಲ್ ಇನ್ಶುರೆನ್ಸ್ ವಿಮಾ ಸಂಸ್ಥೆಯ ರಾಜ್ಯ ಪ್ರತಿನಿಧಿ ಗೈರಾಗಿದಕ್ಕೆ ಅತೃಪ್ತಿ ಹೊರಹಾಕಿದ ಜಿಲ್ಲಾಧಿಕಾರಿಗಳು ಈ ರೀತಿಯ ನಿಷ್ಕಾಳಜಿ ಸಹಿಸಿವುದಿಲ್ಲ. ಇದನ್ನು ಮುಂದುವರೆಸಿದಲ್ಲಿ ಸಂಸ್ಥೆಯನ್ನು ಕಪ್ಪು ಪಟ್ಟಿಗೆ ಸೇರಿಸಲಾಗುವುದು ಎಂದು ಸಂಸ್ಥೆಯ ಜಿಲ್ಲಾ ಪ್ರತಿನಿಧಿಗಳನ್ನು ತರಾಟೆಗೆ ತೆಗೆದುಕೊಂಡರು.8.65 ಲಕ್ಷ ಬಿತ್ತನೆ ಗುರಿ:
ಪ್ರಸ್ತುತ ಸಾಲಿನಲ್ಲಿ 19,461.29 ಕ್ವಿಂಟಲ್ ಬೀಜ ವಿತರಣೆ ಕಾರ್ಯಕ್ರಮವಿದ್ದು, ಪ್ರಮುಖ ಬೆಳೆಗಳಾದ ತೊಗರಿ 6,801.74 ಕ್ವಿಂಟಲ್, ಹೆಸರು 642.13 ಕ್ವಿಂಟಲ್, ಉದ್ದು 413.07 ಕ್ವಿಂಟಲ್, ಸೋಯಾಬೀನ್ 11,255.05 ಕ್ವಿಂಟಲ್ ಬೀಜ ವಿತರಣೆ ಗುರಿ ಇದೆ. ಜಿಲ್ಲೆಯಲ್ಲಿ ಪ್ರಸ್ತುತ ಒಟ್ಟಾರೆ 21,021.53 ಕ್ವಿಂಟಲ್ ಬೀಜ ದಾಸ್ತಾನು ಇದ್ದು, ಅದರಲ್ಲಿ 5,459 ಕ್ವಿಂಟಲ್ ಬೀಜ ಜಿಲ್ಲೆಯ ಎಲ್ಲ ರೈತ ಸಂಪರ್ಕ ಕೇಂದ್ರಗಳಲ್ಲಿ ದಾಸ್ತಾನಿಕರಿಸಲಾಗಿದೆ. ಜಿಲ್ಲೆಯಲ್ಲಿ ಯಾವುದೇ ಬೀಜದ ಕೊರತೆ ಇರುವುದಿಲ್ಲ ಎಮದು ಸಮದ್ ಪಟೇಲ್ ಸಭೆಗೆ ತಿಳಿಸಿದರು.
ತೋಟಗಾರಿಕೆ ಉಪ ನಿರ್ದೇಶಕ ಸಂತೋಷ ಇನಾಂದಾರ್ ಅವರು 2024-25ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ತೋಟಗಾರಿಕೆ ಬೆಳೆ ಬಿತ್ತನೆ ಗುರಿ ಬಗ್ಗೆ ವಿವರಿಸಿದರು.