ಚಂದ್ರಗ್ರಹಣ ಬಳಿಕ ಘಾಟಿ ಸುಬ್ರಹ್ಮಣ್ಯದಲ್ಲಿ ವಿಶೇಷ ಪೂಜೆ

KannadaprabhaNewsNetwork |  
Published : Sep 09, 2025, 01:00 AM IST
ಚಂದ್ರಗ್ರಹಣ ಮೋಕ್ಷವಾದ ಹಿನ್ನಲೆ ಸೋಮವಾರ ಬೆಳಗ್ಗೆ ಘಾಟಿ ಸುಬ್ರಹ್ಮಣ್ಯ ದೇವರಿಗೆ ವಿಶೇಷ ಅಲಂಕಾರ ಮಾಡಿ ಪೂಜಿಸಲಾಯಿತು. | Kannada Prabha

ಸಾರಾಂಶ

ದೊಡ್ಡಬಳ್ಳಾಪುರ: ಚಂದ್ರಗ್ರಹಣ ಮೋಕ್ಷವಾದ ಬಳಿಕ ತಾಲೂಕಿನ ಪ್ರಸಿದ್ದ ಯಾತ್ರಾಸ್ಥಳ ಹಾಗೂ ರಾಜ್ಯದ ಪ್ರಮುಖ ನಾಗಾರಾಧನಾ ಕ್ಷೇತ್ರಗಳಲ್ಲಿ ಒಂದಾದ ಘಾಟಿ ಸುಬ್ರಹ್ಮಣ್ಯ ದೇವಾಲಯದಲ್ಲಿ ಸೋಮವಾರ ಬೆಳಗ್ಗೆ ವಿಶೇಷ ಪೂಜೆ ಬಳಿಕ ಭಕ್ತಾದಿಗಳಿಗೆ ದರ್ಶನದ ಅವಕಾಶ ಮಾಡಿಕೊಡಲಾಯಿತು.

ದೊಡ್ಡಬಳ್ಳಾಪುರ: ಚಂದ್ರಗ್ರಹಣ ಮೋಕ್ಷವಾದ ಬಳಿಕ ತಾಲೂಕಿನ ಪ್ರಸಿದ್ದ ಯಾತ್ರಾಸ್ಥಳ ಹಾಗೂ ರಾಜ್ಯದ ಪ್ರಮುಖ ನಾಗಾರಾಧನಾ ಕ್ಷೇತ್ರಗಳಲ್ಲಿ ಒಂದಾದ ಘಾಟಿ ಸುಬ್ರಹ್ಮಣ್ಯ ದೇವಾಲಯದಲ್ಲಿ ಸೋಮವಾರ ಬೆಳಗ್ಗೆ ವಿಶೇಷ ಪೂಜೆ ಬಳಿಕ ಭಕ್ತಾದಿಗಳಿಗೆ ದರ್ಶನದ ಅವಕಾಶ ಮಾಡಿಕೊಡಲಾಯಿತು.

ಭಾನುವಾರ ಸಂಜೆ 4.30ಕ್ಕೆ ಸರಿಯಾಗಿ ದೇವಾಲಯದ ಸಿಬ್ಬಂದಿ ದೇಗುಲದ ಗರ್ಭಗುಡಿ, ಪ್ರವೇಶ ದ್ವಾರ ಹಾಗೂ ಮಹಾದ್ವಾರಗಳಿಗೆ ಬೀಗ ಹಾಕಿ, ಅರ್ಚಕರಿಗೆ ಬೀಗದ ಕೈಯನ್ನು ಹಸ್ತಾಂತರಿಸಿದ್ದರು. ಸೋಮವಾರ ಬೆಳಗಿನಜಾವ ದೇವಾಲಯದ ಬಾಗಿಲು ತೆರೆದು ಉತ್ಸವ ಮೂರ್ತಿಗಳು, ದೇವಾಲಯ ಪರಿಕರಗಳು ಹಾಗೂ ಪ್ರಾಂಗಣವನ್ನು ಶುದ್ದೀಕರಣ ಮಾಡಲಾಯಿತು. ದೇವಾಲಯದ ಮೂಲ ದೇವರಿಗೆ ಅಭಿಷೇಕ ನೆರವೇರಿಸಿದ ಬಳಿಕ, ಹೂವಿನ ಅಲಂಕಾರ ಮಾಡಿ ಪೂಜೆ ನೆರವೇರಿಸಲಾಯಿತು. ಆ ಬಳಿಕವಷ್ಟೇ ಭಕ್ತಾದಿಗಳಿಗೆ ದೇವರ ದರ್ಶನ ವ್ಯವಸ್ಥೆ ಕಲ್ಪಿಸಲಾಯಿತು.

. ದೇಶದಲ್ಲಿ ಚಂದ್ರಗ್ರಹಣ ಗೋಚರ ಹಿನ್ನಲೆ ದೇಗುಲಗಳಲ್ಲಿ ಗ್ರಹಣ ವೇಳೆ ಪೂಜೆ ಹಾಗೂ ದರ್ಶನ ಕಾರ್ಯಗಳನ್ನು ಸ್ಥಗಿತಗೊಳಿಸಲಾಗಿತ್ತು. ಗ್ರಹಣ ಮೋಕ್ಷವಾದ ಬಳಿಕ, ಸೋಮವಾರ ನಸುಕಿನ ಜಾವ ದೇವಾಲಯದಲ್ಲಿ ಸ್ವಚ್ಛತಾ ಕಾರ್ಯಗಳು ನಡೆದವು. ನಂತರ ಸ್ವಾಮಿಗೆ ಅಭಿಷೇಕ, ವಿಶೇಷ ಪೂಜೆಗಳು ನಡೆದವು.

ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ:

ಗ್ರಹಣ ಮೋಕ್ಷಗೊಂಡ ಹಿನ್ನಲೆ ದೊಡ್ಡಬಳ್ಳಾಪುರ ತಾಲೂಕಿನ ಪ್ರಮುಖ ದೇಗುಲಗಳಾದ ತೇರಿನಬೀದಿ ಪ್ರಸನ್ನ ವೆಂಕಟರಮಣಸ್ವಾಮಿ ದೇವಾಲಯ, ತೂಬಗೆರೆಯ ವೆಂಕಟರಮಣ ದೇವಾಲಯ, ಕಾಡನೂರು ಚನ್ನಕೇಶವ ದೇವಾಲಯ, ಚಿಕ್ಕಮಧುರೆ ಶನೇಶ್ವರ ದೇವಾಲಯ, ಹುಲುಕುಡಿ ವೀರಭದ್ರೇಶ್ವರ ದೇವಾಲಯ, ದೊಡ್ಡಬಳ್ಳಾಪುರ ನಗರದ ನೆಲದಾಂಜನೇಯಸ್ವಾಮಿ ದೇವಾಲಯ, ಮುತ್ಯಾಲಮ್ಮ ದೇವಾಲಯ, ನಗರೇಶ್ವರ ದೇವಾಲಯ, ಕಾಳಿಕ ಕಮಟೇಶ್ವರ ದೇಗುಲ, ಅರುಣಾಚಲೇಶ್ವರ ದೇವಾಲಯ ಸೇರಿದಂತೆ ವಿವಿಧ ದೇಗುಲಗಳಲ್ಲಿ ಶುದ್ದೀಕರಣ ಮತ್ತು ವಿಶೇಷ ಪೂಜಾ ಕಾರ್ಯಕ್ರಮಗಳು ಸೋಮವಾರ ನಡೆದವು.

8ಕೆಡಿಬಿಪಿ6-ಚಂದ್ರಗ್ರಹಣ ಮೋಕ್ಷವಾದ ಹಿನ್ನಲೆ ಸೋಮವಾರ ಬೆಳಗ್ಗೆ ಘಾಟಿ ಸುಬ್ರಹ್ಮಣ್ಯ ದೇವರಿಗೆ ವಿಶೇಷ ಅಲಂಕಾರ ಮಾಡಿ ಪೂಜಿಸಲಾಯಿತು.

PREV

Recommended Stories

ಧರ್ಮಸ್ಥಳ: ಬಂಗ್ಲೆಗುಡ್ಡದಲ್ಲಿ ಮತ್ತೆರಡು ತಲೆಬುರುಡೆ ಪತ್ತೆ
ದಸರಾ : ಬೆಂಗಳೂರು ನಗರದಿಂದ ವಿವಿಧೆಡೆ ವಿಶೇಷ ರೈಲು