ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂದಿನ ವೇಗದ ಜೀವನಶೈಲಿಯಲ್ಲಿ ಒತ್ತಡ, ಆತಂಕ, ಮಾನಸಿಕ ಅಶಾಂತಿ ಹಾಗೂ ದೈಹಿಕ ದೌರ್ಬಲ್ಯವು ಸಾಮಾನ್ಯವಾಗುತ್ತಿರುವ ಸಂದರ್ಭದಲ್ಲಿ, ವ್ಯಕ್ತಿಯ ಒಳಗಿನ ಶಾಂತಿ, ಆನಂದ ಮತ್ತು ಸಮತೋಲನವನ್ನು ಪುನಃ ಸ್ಥಾಪಿಸಲು ವಿಶ್ವಪ್ರಸಿದ್ಧ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯು ಮಹತ್ವದ ಹೆಜ್ಜೆಯನ್ನು ಇಟ್ಟಿದೆ. ಈ ಸಂದರ್ಭದಲ್ಲಿ ಜೀವನ ಕಲೆ-ಸುದರ್ಶನ ಕ್ರಿಯಾಶಿಬಿರ ಎಲ್ಲರಿಗೂ ಅವಶ್ಯವಿದೆ ಈ ಹಿನ್ನಲೆಯಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಬೆಂಗಳೂರು ಆಶ್ರಮದ ಸಾಧ್ವಿ ಶುಭಕರಿ ಜೀ ಅವರ ದಿವ್ಯ ಸಾನ್ನಿಧ್ಯ ಮತ್ತು ಮಾರ್ಗದರ್ಶನದಲ್ಲಿ ಈ ಶಿಬಿರವು ನಡೆಯಲಿದ್ದು, ಭಾಗವಹಿಸುವ ಪ್ರತಿಯೊಬ್ಬರ ಜೀವನದಲ್ಲಿ ಹೊಸ ಉತ್ಸಾಹ ಮತ್ತು ಒಳಗಿನ ಶಾಂತಿಯನ್ನು ಉಂಟುಮಾಡುವ ಉದ್ದೇಶವನ್ನು ಹೊಂದಿದೆ. ಇಂದಿನ ಮಾನವನಿಗೆ ಬಾಹ್ಯ ಯಶಸ್ಸಿನ ಜೊತೆಗೆ ಆಂತರಿಕ ಸಂತೋಷವೂ ಅತಿ ಮುಖ್ಯವಾಗಿದೆ. ಅದನ್ನು ಸಾಧಿಸಲು ಸರಳ ಮತ್ತು ಪರಿಣಾಮಕಾರಿ ಮಾರ್ಗವೇ ಸುದರ್ಶನ ಕ್ರಿಯೆ. ಶ್ರೀ ರವಿ ಶಂಕರ್ ಗುರೂಜಿಯವರಿಂದ ಅಭಿವೃದ್ಧಿಪಡಿಸಲ್ಪಟ್ಟ ಈ ವಿಶಿಷ್ಟ ಉಸಿರಾಟ ತಂತ್ರವು ದೇಹ, ಮನಸ್ಸು ಮತ್ತು ಭಾವನೆಗಳನ್ನು ಸಮನ್ವಯಗೊಳಿಸಿ, ಜೀವನವನ್ನು ಸಮೃದ್ಧಗೊಳಿಸುತ್ತದೆ ಎಂದರು.ಬೆಳಗ್ಗೆ 6 ರಿಂದ 8 ಹೊಯ್ಸಳ ಫೌಂಡೇಶನ್ ಕಾರ್ಯಾಲಯ, ದುರ್ಗಿಗುಡಿ, ಬೆಳಗ್ಗೆ 11 ರಿಂದ 1 ಅಮೃತ ಯೋಗ ಕೇಂದ್ರ, ದುರ್ಗಿಗುಡಿ, ಮಧ್ಯಾಹ್ನ 3 ರಿಂದ 5 ಆರ್ಟ್ ಆಫ್ ಲಿವಿಂಗ್ ಜ್ಞಾನಕ್ಷೇತ್ರ, ನವುಲೆ, ಸಂಜೆ 6 ರಿಂದ 8 ಪಿ ಅಂಡ್ ಟಿ ಸಮುದಾಯ ಭವನ, ಪಿ ಅಂಡ್ ಟಿ ಕಾಲೋನಿ, ಶಿವಮೊಗ್ಗ ಇಲ್ಲಿ ಶಿಬಿರ ನಡೆಯಲಿದ್ದು, ಏ.19ರಂದು ಬೆಳಗ್ಗೆ 10 ಗಂಟೆಗೆ ಜ್ಞಾನಕ್ಷೇತ್ರದ ಧ್ಯಾನ ಮಂದಿರದಲ್ಲಿ ಗುರು ಪೂಜೆ ಹಾಗೂ ದಿವ್ಯ ಸತ್ಸಂಗ ನಡೆಯಲಿದೆ. ಇದು ಭಾಗವಹಿಸುವವರಿಗೆ ಆಧ್ಯಾತ್ಮಿಕ ಅನುಭವದ ಮಹೋತ್ಸವವಾಗಲಿದೆ ಎಂದು ಮಾಹಿತಿ ನೀಡಿದರು.
18 ವರ್ಷ ಮೇಲ್ಪಟ್ಟವರು ಈ ಶಿಬಿರದಲ್ಲಿ ಭಾಗವಹಿಸಬಹುದು. ಹೆಚ್ಚಿನ ಮಾಹಿತಿಗೆ ಚಂದ್ರಹಾಸ್, ಮೊ.94482 50026, ಶಬರೀಶ್ ಕಣ್ಣನ್, ಮೊ. 99640 72793ರಲ್ಲಿ ಸಂಪರ್ಕಿಸಬಹುದು ಎಂದು ತಿಳಿಸಿದರು.