ಕನ್ನಡಪ್ರಭ ವಾರ್ತೆ ಮಂಡ್ಯ
ಗ್ರಾಮದ ದೇವಾಲಯಕ್ಕೆ ತಮಟೆ ನಗಾರಿ ಸದ್ದಿನಲ್ಲಿ ಸಾಮೂಹಿಕವಾಗಿ ಮಹಿಳೆಯರು ತಂಬಿಟ್ಟಿನ ಆರತಿಯೊಂದಿಗೆ ಮೆರವಣಿಗೆ ಸಾಗಿದರು. ದೇವಾಲಯದಲ್ಲಿ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥನೆ ಸಲ್ಲಿಸಿ, ಪೂಜಾ ವಿಧಿವಿಧಾನಗಳನ್ನು ಮುಗಿಸಿದರು.
ಸ್ಥಳೀಯ ಯಜಮಾನರು ಪೂಜೆ ಕೈಂಕರ್ಯಗಳನ್ನು ನೆರವೇರಿಸಿದರು. ಬಳಿಕ ದೇವಾಯದ ಸುತ್ತ ಪ್ರದಕ್ಷಿಣೆ ಹಾಕಿದರು. ಅರ್ಚಕರು ಪೂಜೆ ಸಲ್ಸಿಸಿದರು. ದೇವಾಲಯ ಮತ್ತು ದೇವತೆ ಮೂರ್ತಿಗೆ ವಿಶೇಷ ಹೂವುಗಳಿಂದ ಅಲಂಕಾರ ಮಾಡಲಾಗಿತ್ತು. ನಂತರ ಮೆರವಣಿಗೆ ಮೂಲಕ ಮನೆ ಮನಗೆ ತೆರಳಿದರು.ಈ ವೇಳೆ ಸ್ಥಳೀಯ ಯಜಮಾನರಾದ ಪಾಪೇಗೌಡ, ಎಚ್.ಎಂ.ಸುರೇಶ್, ನಿಂಗಣ್ಣ, ಜೋಗಪ್ಪ, ರಾಮಣ್ಣ, ಶಿವಲಿಂಗು,ಚಿಕ್ಕಮಾದು, ನಾಗರಾಜು, ಪಿಎಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಶಿವಲಿಂಗೇಗೌಡ, ಯುವ ಮುಖಂಡರಾದ ಹೊಸಹಳ್ಳಿಶಿವು, ಶೇಖರ್, ಶ್ರೀಕಾಂಕ್ ಜೆಕೆ, ರವಿಕುಮಾರ್, ಮಾಧು ಮತ್ತಿತರರಿದ್ದರು.
ಮಂಡ್ಯ:
ಗ್ರಾಮದ ಮಹಿಳೆಯರು ಪೂಜಾ ಸಾಮಗ್ರಿ ಇರುವ ತಂಬಿಟ್ಟು ಆರತ ಸಮೇತವಿರುವ ಬುಟ್ಟಿಯನ್ನು ತಲೆ ಮೇಲೆ ಹೊತ್ತುಕೊಂಡು ಗ್ರಾಮದ ಹೊರವಲಯದ ಜಮೀನಿನಲ್ಲಿ ಸಂಪ್ರದಾಯದಂತೆ ಪೂಜಾ ವಿವಿಧಾನಗಳನ್ನು ಬಿಸಿಲ ಮಾರಮ್ಮ ದೇವಿಗೆ ನೆರವೇರಿಸಲಾಯಿತು.