ಎಸ್ಸೆಸ್ಸೆಲ್ಸಿ ಪರೀಕ್ಷೆ: ಭೂಮಿಕಾ ಹೆಗಡೆ ರಾಜ್ಯಕ್ಕೆ ದ್ವಿತೀಯ

KannadaprabhaNewsNetwork |  
Published : May 03, 2025, 12:18 AM IST
ಫೋಟೋ : ೨ಕೆಎಂಟಿ_ಎಂಎವೈ_ಕೆಪಿ೧ : ಭೂಮಿಕಾ ಹೆಗಡೆಫೋಟೋ : ೨ಕೆಎಂಟಿ_ಎಂಎವೈ_ಕೆಪಿ೧ಎ : ಯಶಿಕಾ ಗುರುಪ್ರಸಾದ ಫೋಟೋ : ೨ಕೆಎಂಟಿ_ಎಂಎವೈ_ಕೆಪಿ೧ಬಿ : ಶ್ರೀಲಕ್ಷ್ಮೀ ನಾಗೇಶ ಪೈ ಫೋಟೋ : ೨ಕೆಎಂಟಿ_ಎಂಎವೈ_ಕೆಪಿ೧ಸಿ : ಪನ್ನಗ ಪ್ರಕಾಶ ಶಾನಭಾಗಫೋಟೋ : ೨ಕೆಎಂಟಿ_ಎಂಎವೈ_ಕೆಪಿ೧ಡಿ : ಅನೀಶ ಬುದವಂತ ಹರಿಕಂತ್ರ ಫೋಟೋ : ೨ಕೆಎಂಟಿ_ಎಂಎವೈ_ಕೆಪಿ೧ಇ : ಶ್ರೇಯಾ ಸುಬ್ರಹ್ಮಣ್ಯ ನಾಯ್ಕ  | Kannada Prabha

ಸಾರಾಂಶ

ಕೆನರಾ ಎಜ್ಯಕೇಶನ್ ಸೊಸೈಟಿಯ ಗಿಬ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿ ಭೂಮಿಕಾ ನಾಗರಾಜ ಹೆಗಡೆ ಶೇ.೯೯.೮೪ ಅಂಕದೊಂದಿಗೆ ರಾಜ್ಯಕ್ಕೆ ದ್ವಿತೀಯ ಹಾಗೂ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ್ದಾಳೆ.

ಕುಮಟಾ: ಇಲ್ಲಿನ ಕೆನರಾ ಎಜ್ಯಕೇಶನ್ ಸೊಸೈಟಿಯ ಗಿಬ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿ ಭೂಮಿಕಾ ನಾಗರಾಜ ಹೆಗಡೆ ಶೇ.೯೯.೮೪ ಅಂಕದೊಂದಿಗೆ ರಾಜ್ಯಕ್ಕೆ ದ್ವಿತೀಯ ಹಾಗೂ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ್ದಾಳೆ.

ಗಿಬ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯು ಎಸ್‌ಎಸ್‌ಎಲ್‌ಸಿಯಲ್ಲಿ ಒಟ್ಟು ಶೇ.೯೮.೧೪ ಫಲಿತಾಂಶ ದಾಖಲಿಸಿದ್ದು, ೨೫ ಮಂದಿ ಡಿಸ್ಟಿಂಕ್ಷನ್, ೨೫ ಪ್ರಥಮ ದರ್ಜೆ, ೩ ಮಂದಿ ತೃತೀಯ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ.

ಯಶಿಕಾ ಗುರುಪ್ರಸಾದ ಶೇ.೯೮.೨೪ (ದ್ವಿತೀಯ), ಶ್ರೀಲಕ್ಷ್ಮೀ ನಾಗೇಶ ಪೈ ಶೇ.೯೬.೦೮ (ತೃತೀಯ), ಪನ್ನಗ ಪ್ರಕಾಶ ಶಾನಭಾಗ ಶೇ. ೯೪.೫೬, ಅನೀಶ ಬುದವಂತ ಹರಿಕಂತ್ರ ಹಾಗೂ ಶ್ರೇಯಾ ಸುಬ್ರಹ್ಮಣ್ಯ ನಾಯ್ಕ ಶೇ. ೯೩.೯೨ ಅಂಕಗಳಿಸಿ ಸಾಧನೆ ಮಾಡಿದ್ದಾರೆ ಎಂದು ಮುಖ್ಯ ಶಿಕ್ಷಕ ವಿನಾಯಕ ಶಾನಭಾಗ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಗಿಬ್ ಪ್ರೌಢಶಾಲೆಯ ಮುಖ್ಯ ಶಿಕ್ಷಕ ವಿನಾಯಕ ಶಾನಭಾಗ ಮಾತನಾಡಿ, ರಾಜ್ಯಕ್ಕೆ ದ್ವಿತೀಯ ಸ್ಥಾನ ಗಳಿಸಿರುವ ನಮ್ಮ ಶಾಲೆಯ ವಿದ್ಯಾರ್ಥಿನಿ ಭೂಮಿಕಾ ನಾಗರಾಜ ಹೆಗಡೆ ಸಾಧನೆ ನಮ್ಮ ಶಿಕ್ಷಕ ವೃಂದ, ಆಡಳಿತ ಮಂಡಳಿ, ಪಾಲಕರು, ಶಿಕ್ಷಣ ಇಲಾಖೆ ಸಹಿತ ಎಲ್ಲರಿಗೂ ಸಂತಸ ತಂದಿದೆ. ಕಳೆದ ಎರಡು ವರ್ಷಗಳಿಂದ ಪ್ರತಿಭಾ ಕಾರಂಜಿಯಲ್ಲಿ ರಾಜ್ಯಮಟ್ಟದಲ್ಲಿ ವಿಜೇತಳು, ಚೆಸ್‌ನಲ್ಲಿ ರಾಜ್ಯಮಟ್ಟದಲ್ಲಿ ಗೆದ್ದು ರಾಷ್ಟ್ರೀಯ ಮಟ್ಟದಲ್ಲೂ ಭಾಗವಹಿಸಿದ್ದು ಅವಳು ಬಹುಮುಖಿ ಪ್ರತಿಭೆ ಎಂದರು.

ಭೂಮಿಕಾ ಹೆಗಡೆ ತಂದೆ ನೆಲ್ಲಿಕೇರಿ ಬೆಣ್ಣೆ ಸರ್ಕಾರಿ ಪಿಯು ಕಾಲೇಜು ಪ್ರಾಧ್ಯಾಪಕ ನಾಗರಾಜ ಹೆಗಡೆ, ತಾಯಿ ರೇಣುಕಾ ಹೆಗಡೆ, ಶಿಕ್ಷಕರು ಇದ್ದರು.

ಶಾಲೆಯಲ್ಲಿ ಎಲ್ಲ ಶಿಕ್ಷಕರು ಉತ್ತಮ ತರಬೇತಿ ನೀಡಿದ್ದಾರೆ. ಚೆನ್ನಾಗಿ ಪ್ರತಿ ವಿಷಯವನ್ನು ಪುನರಾವಲೋಕನ ಮಾಡಿಸುತ್ತಿದ್ದರು. ಅಪ್ಪ, ಅಮ್ಮ ಬೆಂಬಲ ನೀಡಿದ್ದಾರೆ. ಮನೆಯಲ್ಲಿ ಮುಕ್ತವಾಗಿ ಓದಲು ಸಹಾಯ ಮಾಡಿದ್ದಾರೆ. ನಿನ್ನಿಂದ ಸಾಧ್ಯವಿದೆ, ಓದು ಎಂದು ಪ್ರತಿದಿನ ಹೇಳುತ್ತಿದ್ದ ಅಪ್ಪ, ಅಮ್ಮ ನೈತಿಕ ಬೆಂಬಲ ಕೊಟ್ಟು ಹುರಿದುಂಬಿಸುತ್ತಿದ್ದರು ಎನ್ನುತ್ತಾರೆ ರಾಜ್ಯಕ್ಕೆ ದ್ವಿತೀಯ ಸ್ಥಾನ ಬಂದ ವಿದ್ಯಾರ್ಥಿನಿ ಭೂಮಿಕಾ ಹೆಗಡೆ.

PREV

Recommended Stories

ಮದ್ದೂರು ಗಣೇಶ ಗಲಾಟೆಗೆ ಪೂರ್ಣ ಮುಸ್ಲಿಮರೇ ಕಾರಣ: ಸಚಿವ ಚಲುವ
ಬುರುಡೆ ಕೇಸ್‌ : ಸಾಕ್ಷಿದಾರರ ಬಂಧನ..? ಮಟ್ಟಣ್ಣವರ್‌, ಜಯಂತ್‌, ಅಭಿಷೇಕ್, ಮನಾಫಾ ವಿಠಲಗೆ ಗ್ರಿಲ್