- ರಾಜ್ಯ ಬಜೆಟ್ನಲ್ಲಿ ಕೊಟ್ಟರೂ ಜಾರಿಯಾಗೋದಿಲ್ಲ, ಸಂಪ್ರದಾಯವಾಗಿರೋ ನಿರೀಕ್ಷೆ,
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು
ಜಿಲ್ಲೆಗೆ ಕಿರು ವಿಮಾನ ನಿಲ್ದಾಣ, ಪ್ರವಾಸಿ ತಾಣಗಳ ಅಭಿವೃದ್ಧಿಗೆ ಆದ್ಯತೆ, ಕಾಫಿಗೆ ಅಂತಾರಾಷ್ಟ್ರೀಯ ಬ್ರಾಂಡ್, ಟೆಕ್ಸ್ಟೈಲ್, ಸ್ಪೈಸ್ ಪಾರ್ಕ್ ಹಾಗೂ ವಿಜ್ಞಾನ ಕೇಂದ್ರ ನಿರ್ಮಾಣ. ಪ್ರತ್ಯೇಕ ಹಾಲು ಒಕ್ಕೂಟ ಸ್ಥಾಪನೆಯನ್ನು ಕಳೆದ ಎರಡು ದಶಕ ಗಳಿಂದ ಪ್ರತಿ ಬಜೆಟ್ನಲ್ಲೂ ನಿರೀಕ್ಷಿಸಲಾಗಿದೆ.ಆದರೆ, ಇವುಗಳಲ್ಲಿ ಕೆಲವು ಘೋಷಣೆಯಾಗಿದ್ದರೆ ಮತ್ತೆ ಕೆಲವು ಘೋಷಣೆ ಆಗಬೇಕಾಗಿದೆ. ದುರ್ದೈವದ ಸಂಗತಿ ಎಂದರೆ, ಘೋಷಣೆಯಾಗಿದ್ದರೂ ಕೆಲವು ಕಾರ್ಯರೂಪಕ್ಕೇ ಬಂದಿಲ್ಲ.
ರಾಜ್ಯದ ಪ್ರವಾಸಿ ತಾಣಗಳ ಪ್ರಮುಖ ಸಾಲಿನಲ್ಲಿರುವ ಕಾಫಿ ನಾಡು ಚಿಕ್ಕಮಗಳೂರಿಗೆ ಪ್ರತಿ ವರ್ಷ ವಿದೇಶಿಗರು ಸೆರಿದಂತೆ ಲಕ್ಷಾಂತರ ಮಂದಿ ಪ್ರವಾಸಿಗರು ಆಗಮಿಸುತ್ತಾರೆ. 2023-24 ನೇ ಸಾಲಿನ ಬಜೆಟ್ನಲ್ಲಿ ಘೋಷಣೆಯಾಗಿದ್ದಂತೆ ಕಿರು ವಿಮಾನ ನಿಲ್ದಾಣವನ್ನು ಗೌಡನಹಳ್ಳಿ ರಸ್ತೆಯಲ್ಲಿ ಚಾಲನೆ ನೀಡಲಾಗಿದೆ. 1,200 ಮೀಟರ್ ರನ್ ವೇ ನಿರ್ಮಿಸಬೇಕಾಗಿದೆ. ಇದಕ್ಕೆ ಅವಶ್ಯಕತೆ ಇರುವ 140 ಎಕರೆ ಜಾಗಕ್ಕೆ ಸದ್ಯ ಇರುವ ಸರ್ಕಾರಿ ಭೂಮಿ ಜತೆಗೆ 19 ಎಕರೆ ಪ್ರದೇಶವನ್ನು ರೈತರಿಂದ ಸ್ವಾಧೀನ ಪಡಿಸಬೇಕಾಗಿದೆ. ಉಳಿದ ₹24 ಕೋಟಿ ಅವಶ್ಯಕತೆ ಇದೆ. ಆದರೆ, ಜಿಲ್ಲಾಡಳಿತಕ್ಕೆ ಸರ್ಕಾರ ₹7 ಕೋಟಿ ಮಾತ್ರ ಬಿಡುಗಡೆ ಮಾಡಿದೆ. ಇನ್ನುಳಿದ ಹಣ ಬಿಡುಗಡೆಯಾಗಬೇಕಾಗಿದೆ. ಹಾಗಾಗಿ ಈ ಕೆಲಸ ನೆನೆಗುದಿಗೆ ಬಿದ್ದಿದೆ.ಪ್ರತ್ಯೇಕ ಹಾಲು ಒಕ್ಕೂಟ:
ಚಿಕ್ಕಮಗಳೂರು ಪ್ರಾಕೃತಿಕವಾಗಿ ಸಂಪದ್ಭರಿತ ಜಿಲ್ಲೆ. ಹೀಗಾಗಿಯೇ ಪ್ರಕೃತಿ ಸೌಂದರ್ಯ ಕಣ್ತುಂಬಿಕೊಳ್ಳಲು ಪ್ರತಿ ವರ್ಷ ಬರೋಬ್ಬರಿ 80 ಲಕ್ಷ ಪ್ರವಾಸಿಗರು ಜಿಲ್ಲೆಗೆ ಭೇಟಿ ನೀಡುತ್ತಾರೆ. ಅದರಲ್ಲೂ ಚಂದ್ರದ್ರೋಣ ಪರ್ವತ ಶ್ರೇಣಿ, ಮಲೆನಾಡು ಭಾಗಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಾರೆ. ಪ್ರವಾಸೋದ್ಯಮ ಅಭಿವೃದ್ಧಿಗೆ ಇಲ್ಲಿ ವಿಫುಲ ಅವಕಾಶಗಳಿವೆ. ಈ ನಿಟ್ಟಿನಲ್ಲಿ ಬಜೆಟ್ನಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಅನುದಾನ ಮೀಸಲಿಡಬೇಕು ಎಂಬುದು ಕಾಫಿನಾಡಿನ ಜನರ ಒತ್ತಾಯವಾಗಿದೆ.
ಪಶ್ಚಿಮಘಟ್ಟದ ಸಾಲಿನ ಬೆಟ್ಟಗಳಲ್ಲಿ ಬೆಳೆಯುವ ಕಾಫಿಗೆ ತನ್ನದೇ ಆದ ಸ್ವಾದವಿದೆ. ಮರಗಳ ನೆರಳಿನಲ್ಲಿ ಈ ಹವಾಮಾನದಲ್ಲಿ ಬೆಳೆದು, ಯಂತ್ರಗಳ ಬಳಕೆ ಇಲ್ಲದೆ ಬಿಸಿಲಿನಲ್ಲೇ ಒಣಗಿಸಿ ಹದ ಮಾಡುವ ಪದ್ಧತಿ ಬೆಳೆಗಾರರು ಇಂದಿಗೂ ಅನುಸರಿಸುತ್ತಿದ್ದಾರೆ. ಈ ಎಲ್ಲಾ ಕಾರಣಗಳಿಂದ ಕರ್ನಾಟಕದ ಕಾಫಿಗೆ ಯುರೋಪಿಯನ್ ದೇಶಗಳಲ್ಲಿ ಬೇಡಿಕೆ ಹೆಚ್ಚಿದೆ. ಈ ಕಾಫಿಯನ್ನು ಇನ್ನಷ್ಟು ಮೌಲ್ಯವರ್ಧಿಸಿ ಬ್ಯಾಂಡಿಂಗ್ ರೂಪ ನೀಡಿದರೆ ಬೇಡಿಕೆ ಹೆಚ್ಚಾಗುವುದರಲ್ಲಿ ಅನುಮಾನ ಇಲ್ಲ. -- ಬಾಕ್ಸ್---ಘೋಷಿಸಿದ್ದು 4, ಕಾರ್ಯರೂಪಕ್ಕೆ ಬಂದಿದ್ದು 2ಚಿಕ್ಕಮಗಳೂರು: ಕಳೆದ 2024-25ನೇ ಸಾಲಿನ ರಾಜ್ಯ ಬಜೆಟ್ನಲ್ಲಿ ಸರ್ಕಾರ ಚಿಕ್ಕಮಗಳೂರು ಜಿಲ್ಲೆಗೆ ಘೋಷಣೆ ಮಾಡಿದ್ದ ನಾಲ್ಕು ಕಾರ್ಯಕ್ರಮಗಳಲ್ಲಿ ಜಾರಿಗೆ ಬಂದಿದ್ದು ಎರಡು ಮಾತ್ರ.
2014ರ ವರ್ಷದಲ್ಲೇ ಮೊದಲ ಬಾರಿಗೆ ಘೋಷಣೆಯಾಗಿದ್ದ ವಿಜ್ಞಾನ ಕೇಂದ್ರ ಸ್ಥಾಪನೆ ಕಳೆದ ಬಜೆಟ್ನಲ್ಲಿ ಮರು ಘೋಷಣೆ ಯಾಗಿತ್ತು. ಕೇಂದ್ರ ಸ್ಥಾಪನೆಗೆ ಗುರುತು ಮಾಡಿದ್ದ ಜಾಗ ಡೀಮ್ಡ್ ಫಾರೆಸ್ಟ್ ಆಗಿದ್ದರಿಂದ ಮೊದಲ ಹಂತದಲ್ಲೇ ಇದಕ್ಕೆ ತೊಡಕಾದರೂ ಗೊಂದಲ ಬಗೆಹರಿದು ಕಾಮಗಾರಿ ಆರಂಭಿಸಬೇಕಿದ್ದ ಹಂತದಲ್ಲಿ ರಾಜಕೀಯ ಪಕ್ಷಗಳ ಸ್ವಪ್ರತಿಷ್ಟೆ ಯಿಂದ ಈ ಪ್ರಕ್ರಿಯೆ ಅರ್ಧಕ್ಕೆ ನಿಂತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಮಪಾಲು ಅನುದಾನದಲ್ಲಿ ಈ ಕಾಮಗಾರಿ ಆಗ ಬೇಕಾಗಿದೆ. ಯಾವುದೇ ರಾಜಕೀಯ ಪಕ್ಷಗಳ ನಾಯಕರು ಇಚ್ಛಾಶಕ್ತಿ ತೋರದೆಗೆ ಬಜೆಟ್ನಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ನುಣುಚಿಕೊಳ್ಳುವ ಪ್ರಯತ್ನ ಮಾಡುತ್ತಲೇ ಬಂದಿವೆ. ಈ ಬಾರಿಯೂ ಕೂಡ ಹೀಗೆ ಆಗದಿರಲಿ ಎಂಬುದೆ ಎಲ್ಲರ ಆಶಯ.
-- 6 ಕೆಸಿಕೆಎಂ 2 - 3ಚಿಕ್ಕಮಗಳೂರಿನ ಗಿರಿ ಪ್ರದೇಶದಲ್ಲಿ ಸಾಲುಗಟ್ಟಿ ನಿಂತಿರುವ ಪ್ರವಾಸಿಗರ ಕಾರುಗಳು.