ಹುಬ್ಬಳ್ಳಿ:
ನಗರದ ಜ. ಸಿದ್ಧಾರೂಢ ಸ್ವಾಮಿಯವರ ಮಠದಲ್ಲಿ ಸಿದ್ಧಾರೂಢರ 188ನೇ ಜಯಂತ್ಯುತ್ಸವದ ನಿಮಿತ್ತ ಏ. 10ರಿಂದ 15ರ ವರೆಗೆ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಭಜನಾ ಸ್ಪರ್ಧೆಯ ಸಮಾರೋಪ ಹಾಗೂ ಬಹುಮಾನ ಪ್ರಶಸ್ತಿ ವಿತರಣಾ ಸಮಾರಂಭವು ಸೋಮವಾರ ಜರುಗಿತು. ಪ್ರಥಮ ಸ್ಥಾನವನ್ನು ಐದು ತಂಡಗಳು ಹಂಚಿಕೊಂಡಿದ್ದು ವಿಶೇಷ.ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಅಣ್ಣಿಗೇರಿ ದಾಸೋಹ ಮಠದ ಶಿವಕುಮಾರ ಶ್ರೀ, ಗೋಕಾಕಿನ ಆತ್ಮಾನಂದ ಶ್ರೀ ಹಾಗೂ ರಾಜ್ಯಮಟ್ಟದ ಭಜನಾ ಸ್ಪರ್ಧೆಯ ಅಧ್ಯಕ್ಷ, ಶ್ರೀಮಠದ ಧರ್ಮದರ್ಶಿ ಶಾಮಾನಂದ ಪೂಜೇರಿ ಸ್ಪರ್ಧೆಯಲ್ಲಿ ವಿಜೇತರ ಹೆಸರು ಪ್ರಕಟಿಸಿದರು.
ಪ್ರಥಮ ಬಹುಮಾನ ₹1 ಲಕ್ಷ, ದ್ವಿತೀಯ ಬಹುಮಾನ ₹80 ಸಾವಿರ, ತೃತೀಯ ಬಹುಮಾನ ₹70 ಸಾವಿರ, ಸಮಾಧಾನಕರ ₹10 ಸಾವಿರ, ಬಾಲಕರ ತಂಡಕ್ಕೆ ₹10 ಸಾವಿರ, ಬಾಲಕಿಯರ ತಂಡಕ್ಕೆ ₹10 ಸಾವಿರ, ವೈಯಕ್ತಿಕ ವಿಜೇತರಿಗೆ ₹3 ಸಾವಿರ ನಿಗದಿಗೊಳಿಸಲಾಗಿತ್ತು.ಪ್ರಥಮ ಬಹುಮಾನ:
ಬಾಗಲಕೋಟೆ ಜಿಲ್ಲೆಯ ಸನಾಳದ ಶ್ರೀ ಸರ್ಪಭೂಷಣ ಶಿವಯೋಗಿ ಭಜನಾ ಮಂಡಳಿ, ಮುಧೋಳ ತಾಲೂಕಿನ ಬುದ್ನಿಯ ಶ್ರೀ ದಿಗಂಬರೇಶ್ವರ ಭಜನಾ ಮಂಡಳಿ, ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಕಲ್ಲೋಳ್ಳಿಯ ಶ್ರೀಸಿದ್ಧಾರೂಢ ಭಜನಾ ಮಂಡಳಿ, ಗೋಕಾಕ ತಾಲೂಕಿನ ಚಿಗದೊಳ್ಳಿಯ ಶ್ರೀ ಜಡಿ ಸಿದ್ದೇಶ್ವರ ಭಜನಾ ಮಂಡಳಿ, ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಮರಿಚಿಕ್ಕಲಗಿಯ ಶ್ರೀ ಮಲ್ಲಿಕಾರ್ಜುನ ಭಜನಾ ಮಂಡಳಿದ್ವಿತೀಯ ಬಹುಮಾನ:
ಬೆಳಗಾವಿ ಜಿಲ್ಲೆ ಗೋಕಾಕ ತಾಲೂಕಿನ ಚಿಕ್ಕನಂದಿಯ ಶ್ರೀ ಸಿದ್ಧಾರೂಢ ಭಜನಾ ಮಂಡಳಿ, ಬಾಗಲಕೋಟೆ ಜಿಲ್ಲೆಯ ರಬಕವಿ ತಾಲೂಕಿನ ಮಹಾಲಿಂಗಪುರದ ಶ್ರೀ ಮಹಾಲಿಂಗೇಶ್ವರ ಭಜನಾ ತಂಡ, ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಜೋಕಾನಕಟ್ಟಿಯ ಶ್ರೀ ಸಿದ್ಧಾರೂಢ ಭಜನಾ ಮಂಡಳಿ, ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ನಾಗರಾಳ ಗ್ರಾಮದ ಶ್ರೀ ಗುರುಬಸವೇಶ್ವರ ಭಜನಾ ಮಂಡಳಿ, ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಉಗ್ನಿಕೇರಿಯ ಶ್ರೀ ಬಾಲಯೋಗಿ ಮಾಣಿಕ್ಯ ಚನ್ನವೃಷಬೇಂದ್ರ ಭಜನಾ ಮಂಡಳಿ.ತೃತೀಯ ಬಹುಮಾನ:
ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಪಿ.ಜಿ. ಹುಣಿಶ್ಯಾಳದ ಶ್ರೀ ಭೀಮಾಶಂಕರ ಭಜನಾ ಮಂಡಳಿ, ಧಾರವಾಡ ಜಿಲ್ಲೆ ಕಲಘಟಗಿ ತಾಲೂಕಿನ ದೇವರಕೊಂಡದ ಶ್ರೀ ಸದ್ಗುರು ಶಿವಾನಂದಭಾರತಿ ಭಜನಾ ಮಂಡಳಿ, ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಶಿರಗಾಂವಿಯ ಶ್ರೀ ಸಿದ್ಧಾರೂಢ ಭಜನಾ ಮಂಡಳಿ, ಬಾಗಲಕೋಟಿ ಜಿಲ್ಲೆಯ ಮುಧೋಳ ತಾಲೂಕಿನ ಮೆಳ್ಳಿಗೇರಿಯ ಶ್ರೀ ನಿತ್ಯಾನಂದ ಭಜನಾ ಮಂಡಳಿ, ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲೂಕಿನ ನೂಲ್ವಿ ಗ್ರಾಮದ ಶ್ರೀ ಮರಿಯಮ್ಮದೇವಿ ಕರಿಯಮ್ಮದೇವಿ ಭಜನಾ ಮಂಡಳಿ.ಸಮಾಧಾನಕರ ಬಹುಮಾನ:
ಹಾಸನ ಜಿಲ್ಲೆಯ ಚಿಗಟಿಹಳ್ಳಿಯ ಶ್ರೀ ಬೂದೇಶ್ವರ ಭಜನಾ ಸಂಘ, ಬಳ್ಳಾರಿ ಜಿಲ್ಲೆಯ ಕಪ್ಪಗಲ್ಲು ಗ್ರಾಮದ ಶ್ರೀ ಸಿದ್ಧಾರೂಢ ಭಜನಾ ಮಂಡಳಿ, ಬಾಗಲಕೋಟಿ ಜಿಲ್ಲೆಯ ಬಾದಾಮಿ ತಾಲೂಕಿನ ಕೆರೂರು ಗ್ರಾಮದ ಶ್ರೀ ದಶಪ್ರಮತಿ ಭಜನಾ ಮಂಡಳಿ, ಹಾವೇರಿ ಜಿಲ್ಲೆಯ ರಾಣಿಬೆನ್ನೂರು ತಾಲೂಕಿನ ಜೋಯಿಸರಹಳ್ಳಿಯ ಶ್ರೀ ಬಸವೇಶ್ವರ ಕಲಾ ತಂಡ, ರಾಯಚೂರು ಜಿಲ್ಲೆಯ ಮಸ್ಕಿಯ ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟ, ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ದೊಡ್ಡಹುಂಡಿಯ ಶ್ರೀ ಅಕ್ಕಮಹಾದೇವಿ ಮಹಿಳಾ ಭಜನಾ ಮಂಡಳಿ, ಶಿವಮೊಗ್ಗ ಜಿಲ್ಲೆಯ ಸೊರಬದ ಶ್ರೀ ಮಾರ್ಕಂಡೇಶ್ವರ ಭಜನಾ ಮಂಡಳಿ, ಬೆಳಗಾವಿ ಜಿಲ್ಲೆ ಅಥಣಿಯ ಶ್ರೀ ಮುರುಗೇಂದ್ರ ಶಿವಯೋಗಿ ಭಜನಾ ಮಂಡಳಿ, ಮೂಡಲಗಿ ತಾಲೂಕಿನ ವಡೇರಹಟ್ಟಿಯ ಶ್ರೀ ಪಂಚ ಸಿದ್ದೇಶ್ವರ ಭಜನಾ ಮಂಡಳಿ, ಬಾಗಲಕೋಟೆ ಜಿಲ್ಲೆಯ ಬನಹಟ್ಟಿ ತಾಲೂಕಿನ ಹಿಪ್ಪರಗಿಯ ಶ್ರೀ ಗುರುಬಸವಗೌಡ ಭಜನಾ ಮಂಡಳಿ.ಹುಬ್ಬಳ್ಳಿ ಕಾಳಿದಾಸ ನಗರದ ಶ್ರೀ ದಾನೇಶ್ವರಿ ಭಜನಾ ಮಂಡಳಿ, ಶ್ರೀ ಆರೂಢ ಸೇವಾ ಮಹಿಳಾ ಭಜನಾ ಮಂಡಳಿ ಮಹಿಳಾ ಪುರಸ್ಕಾರ ಪಡೆದರೆ, ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಬೀಸನಕೊಪ್ಪ ಗ್ರಾಮದ ಶ್ರೀ ಸದ್ಗುರು ಶಿವಾನಂದಭಾರತಿ ಭಜನಾ ಮಂಡಳಿ ಬಾಲಕ ಪುರಸ್ಕಾರ, ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಗೋಠೆಯ ಶ್ರೀ ಗಾನಸುಧಾಕರ ಅಣ್ಣನವರ ಭಜನಾ ಸಂಘ ಬಾಲಕಿಯರ ಪುರಸ್ಕಾರ ಪಡೆಯಿತು.
ವಿಜಯಪುರ ಜಿಲ್ಲೆ ಬಬಲೇಶ್ವರ ತಾಲೂಕಿನ ಕಣಬೂರ ಗ್ರಾಮದ ಶ್ರೀ ರಾಚೋಟೇಶ್ವರ ಭಜನಾ ಮಂಡಳಿ ಉತ್ತಮ ಗಾಯಕ ಪುರಸ್ಕಾರ, ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಶೇಗುಣಸಿ ಗ್ರಾಮದ ಶ್ರೀ ಸಿದ್ಧಾರೂಢ ಭಜನಾ ಮಂಡಳಿ ಉತ್ತಮ ಗಾಯಕ ಪುರಸ್ಕಾರ, ಬಾಗಲಕೋಟೆ ಜಿಲ್ಲೆಯ ಬೀಳಗಿಯ ಶ್ರೀ ಮಲ್ಲಿಕಾರ್ಜುನ ಭಜನಾ ಮಂಡಳಿ ಹಾಗೂ ಮುಧೋಳ ತಾಲೂಕಿನ ಆಲಗುಂಡಿಯ ಶ್ರೀ ಶಿವಲಿಂಗೇಶ್ವರ ಭಜನಾ ಮಂಡಳಿ ಉತ್ತಮ ಹಾರ್ಮೋನಿಯಂ ಪುರಸ್ಕಾರ ಪಡೆದವು.ಬಾಗಲಕೋಟೆ ಜಿಲ್ಲೆಯ ರಬಕವಿ ತಾಲೂಕಿನ ಯಲ್ಲಟ್ಟಿಯ ಶ್ರೀ ಭೀಮಶಿ ಬಡಿಗೇರ ಹಾಗೂ ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಬಿಲಕುಂದಿಯ ರುದ್ರಗೌಡ ಪಾಟೀಲ ಉತ್ತಮ ತಬಲಾ ಪುರಸ್ಕಾರ, ಬಾಗಲಕೋಟೆ ಜಿಲ್ಲೆಯ ಹೊಳೆಯಂಕಂಚಿಯ ಶ್ರೀ ರಾಮಾರೂಢ ಭಜನಾ ಮಂಡಳಿ, ಬೀಳಗಿ ತಾಲೂಕಿನ ಸೊನ್ನದ ಶ್ರೀ ಅವಧೂತ ಹಣಮಂತ ಮಹಾರಾಜ ಉತ್ತಮ ದಮಡಿ ಪುರಸ್ಕಾರ ಪಡೆದವು.
ಗೋಕಾಕ ತಾಲೂಕಿನ ಉದಗಟ್ಟಿಯ ಶ್ರೀ ಸಿದ್ಧಾರೂಢ ಭಜನಾ ಮಂಡಳಿ, ಬೇವೂರಿನ ಶ್ರೀ ಶಿವಶರಣ ಮಾದಾರ ಚೆನ್ನಯ್ಯಉತ್ತಮ ತಾಳ ಪುರಸ್ಕಾರ. ಧಾರವಾಡ ಜಿಲ್ಲೆಯ ನರೇಂದ್ರದ ಶ್ರೀ ಮಹಾಂತೇಶ್ವರ ಭಜನಾ ಮಂಡಳಿ, ಕುಂದಗೋಳ ತಾಲೂಕಿನ ಕಡಪಟ್ಟಿಯ ಶ್ರೀ ಬಸವೇಶ್ವರ ಭಜನಾ ಮಂಡಳಿ ಉತ್ತಮ ಡಗ್ಗಾ ಪುರಸ್ಕಾರ ಪಡೆದವು.ಈ ವೇಳೆ ಚೇರ್ಮನ್ ಬಸವರಾಜ ಕಲ್ಯಾಣಶೆಟ್ಟರ, ಧರ್ಮದರ್ಶಿಗಳಾದ ರಮೇಶ ಬೆಳಗಾವಿ, ಮಂಜುನಾಥ ಮುನವಳ್ಳಿ, ವಿ.ಡಿ. ಕಾಮರಡ್ಡಿ, ಗೀತಾ ಕಲಬುರ್ಗಿ, ಡಾ. ಗೋವಿಂದ ಕಲಬುರ್ಗಿ ಹಾಗೂ ಶ್ರೀಮಠದ ಮ್ಯಾನೇಜರ್ ಈರಣ್ಣ ತುಪ್ಪದ ಸೇರಿದಂತೆ ಹಲವರಿದ್ದರು.