ಧಾರವಾಡ: ಕರ್ನಾಟಕ ರಾಜ್ಯದ ಪ್ರಮುಖ ಯೋಜನೆಗಳು ಎಲ್ಲ ವಲಯಗಳಲ್ಲಿ ಮುಂಚೂಣಿಯಲ್ಲಿದ್ದು, ಸಮಗ್ರ ಅಭಿವೃದ್ಧಿಗೆ ಪೂರಕವಾಗಿವೆ ಎಂದು ರಾಜ್ಯ ಹಣಕಾಸು ಇಲಾಖೆ ಕಾರ್ಯದರ್ಶಿ ವಿಶಾಲ್ ಆರ್. ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಸಿ.ಎಂ.ಡಿ.ಆರ್.ಅಧ್ಯಕ್ಷ ಕೈಲಾಶಚಂದ್ರ ಶರ್ಮಾ ಮಾತನಾಡಿ, ಕಳೆದ ದಶಕದಿಂದ ಶಿಕ್ಷಣ ವಲಯದಲ್ಲಿ ಕ್ರಾಂತಿಕಾರಕ ಬದಲಾವಣೆಗಳು ಆಗುತ್ತಿವೆ. ಪ್ರಮುಖವಾಗಿ ರಾಷ್ಟ್ರೀಯ ಹೊಸ ಶಿಕ್ಷಣ ನೀತಿಯಿಂದ ಕೌಶಲ್ಯಯುತ ಶಿಕ್ಷಣವು ಉದ್ಯಮದ ಜತೆಗೆ ಹೊಸ ರೂಪ ನೀಡಿದೆ. ಜ್ಞಾನ ಆಧಾರಿತ ಶಿಕ್ಷಣ ನೀಡಲು ಬಹು ಶಿಸ್ತಿಯ ವ್ಯವಸ್ಥೆ ಬಹಳ ಉಪಯುಕ್ತವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಸಿ.ಎಂ.ಡಿ.ಆರ್.ವತಿಯಿಂದ ಹೊರತರಲಾದ ನಿಯತಕಾಲಿಕೆ ಬಿಡುಗಡೆ ಮಾಡಲಾಯಿತು. ಭಾರತ ಜ್ಞಾನ ವ್ಯವಸ್ಥೆ ಎಂಬ ವಿಷಯದ ಕುರಿತು ಆಯೋಜಿಸಿದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು.ಐಐಎಂ ನಾಗ್ಪುರ ನಿರ್ದೇಶಕ ಪ್ರೊ.ಭೀಮರಾಯ ಮೇತ್ರಿ, ಟೋಯೊಟಾ ಕಂಪನಿ ಸಲಹೆಗಾರ ಪರಶುರಾಮನ್, ನಿಟ್ಟೆ ಶಿಕ್ಷಣ ಸಂಸ್ಥೆಯ ಡಾ.ಸಂದೀಪ್ ಶಾಸ್ತ್ರೀ, ಬೆಂಗಳೂರು ವಿವಿ ಡಾ. ಎಸ್. ಆರ್.ಕೇಶವ, ಅರ್ಥಶಾಸ್ತ್ರಜ್ಞ ಡಾ. ಚರಣ್ ಸಿಂಗ್, ಗದಗ ಕೆ.ಎಸ್.ಅರ್.ಡಿ.ಪಿ ಕುಲಪತಿ ಪ್ರೊ.ವಿಷ್ಣುಕಾಂತ್ ಎಸ್. ಚಿಟಪಲ್ಲಿ, ಹೈದರಾಬಾದ್ ವಿಶ್ವವಿದ್ಯಾಲಯ ಕುಲಪತಿ ಡಾ.ಬಿ.ಜೆ. ರಾವ್ ಸಂವಾದದಲ್ಲಿ ಭಾಗವಹಿಸಿದ್ದರು.