ಕುಷ್ಟಗಿ ತಾಲೂಕು ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಕ್ರೀಡಾಕೂಟ ಉದ್ಘಾಟನೆ
ಕಳೆದ ಹಲವು ವರ್ಷಗಳ ಹಿಂದೆ ಕ್ರೀಡಾಕೂಟಗಳಿಗೆ ಎಲ್ಲ ಮಕ್ಕಳು ಆಸಕ್ತಿಯಿಂದ ಭಾಗವಹಿಸುತ್ತಿದ್ದರು. ಈಗ ಅದು ಆಗುತ್ತಿಲ್ಲ. ಆದ ಕಾರಣ ತಾಲೂಕಿನ ಎಲ್ಲ ದೈಹಿಕ ಶಿಕ್ಷಕರು ಮಕ್ಕಳನ್ನು ಕ್ರೀಡಾಕೂಟಗಳಲ್ಲಿ ಭಾಗವಹಿಸುವಂತೆ ಪ್ರೇರೇಪಿಸಬೇಕು ಎಂದರು.
ದೈಹಿಕ ಶಿಕ್ಷಣದ ಪರಿವೀಕ್ಷಕಿ ಎಂ ಸರಸ್ವತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಭಾರಿ ಬಿಇಒ ಜಗದೀಶಪ್ಪ ಮೆಣೆದಾಳ ಕ್ರೀಡಾಧ್ವಜ ನೆರವೇರಿಸಿದರು.ಈ ಸಂದರ್ಭದಲ್ಲಿ ಅಕ್ಷರದಾಸೋಹ ಅಧಿಕಾರಿ ಸೋಮನಗೌಡ ಪಾಟೀಲ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಲ್ಲಪ್ಪ ಕುದರಿ, ಸರ್ಕಾರಿ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ನೀಲನಗೌಡ ಹೊಸಗೌಡ್ರು, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಜಗದೀಶ್ ಸೂಡಿ, ಯಮನಪ್ಪ ಚೂರಿ, ಹನೀಫ್ ಬಿಳೆಕುದರಿ, ಹೈದರಲಿ ಜಾಲಿಹಾಳ, ಶಾಕಿರಬಾಬ, ಸಿದ್ದರಾಮಪ್ಪ ಅಮರಾವತಿ, ಅಲ್ತಾಫಹುಸೇನ ಮುಜಾವರ್, ಹೊನ್ನಪ್ಪ ಡೊಳ್ಳಿನ, ಬಸವರಾಜ್ ಗುಡೂರ್, ಧರ್ಮಕುಮಾರ ಕಂಬಳಿ, ತಿಮ್ಮಣ್ಣ ಹಿರೇವಳಿ, ಶಿವಾನಂದ ಪಂಪಣ್ಣವರ ಸೇರಿದಂತೆ ಶಾಲಾ ಶಿಕ್ಷಕರು ಹಾಗೂ ಮಕ್ಕಳು ಇದ್ದರು. ಜೀವನಸಾಬ ಬಿನ್ನಾಳ ಕಾರ್ಯಕ್ರಮ ನಿರೂಪಿಸಿದರು.
ತಡವಾಗಿ ಆರಂಭ:ಕುಷ್ಟಗಿ ತಾಲೂಕು ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಕ್ರೀಡಾಕೂಟ ಗುರುವಾರ ಬೆಳಗ್ಗೆ 9.30ಕ್ಕೆ ಆರಂಭವಾಗಬೇಕಿತ್ತು. ಆದರೆ ಕಾರಣಾಂತರಗಳಿಂದ ಮಧ್ಯಾಹ್ನ 12 ಗಂಟೆಯ ಸುಮಾರಿಗೆ ಆರಂಭವಾಯಿತು. ಇದರಿಂದ ಎಲ್ಲ ಮಕ್ಕಳು ಉತ್ಸಾಹ ಕಳೆದುಕೊಳ್ಳುವಂತಾಯಿತು. ಬಿಸಿಲಿನ ಹೊಡೆತಕ್ಕೆ ಆಟವಾಡಬೇಕು ಎನ್ನುವ ಉತ್ಸಾಹ ಕಂಡು ಬರಲಿಲ್ಲ.