ಕನ್ನಡಪ್ರಭ ವಾರ್ತೆ ಜಗಳೂರು
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ನಡೆದ 2024- 2025ನೇ ಸಾಲಿನ ಮೊದಲನೇ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ, ಅಧಿಕಾರಿಗಳ ಮಾಹಿತಿ ಪಡೆದು ಅವರು ಮಾತನಾಡಿದರು.
57 ಕೆರೆಗಳಿಗೆ ನೀರು ತುಂಬಿಸುವ ಮಹತ್ವದ ಯೋಜನೆ ಕಾಮಗಾರಿಗೆ ಆಯಾ ಭಾಗದ ಎಲ್ಲ ರೈತರೇ ಸಹಕರಿಸಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಅರಣ್ಯ ವ್ಯಾಪ್ತಿಯಲ್ಲಿ ಅನುಮೋದನೆ ನೀಡದೇ ಕಾಮಗಾರಿ ಕುಂಠಿತಕೊಂಡಿರುವುದಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಶಾಸಕರು ಹರಿಹಾಯ್ದರು. ಕೂಡಲೇ ಕಾಮಗಾರಿ ಮಾಡಲು ಅನುವು ಮಾಡಿಕೊಡುವಂತೆ ಸೂಚನೆ ನೀಡಿದರು.ರಸ್ತೆ ಅಗಲೀಕರಣಕ್ಕೆ ಸೂಚನೆ:
ಪಟ್ಟಣದ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಪಟ್ಟಣದ ರಸ್ತೆ ಅಗಲೀಕರಣಕ್ಕೆ ಸಂಬಂಧಿಸಿದಂತೆ ಗುರ್ತಿಸುವಿಕೆ ಪ್ರಕ್ರಿಯೆ ಮಾಡಿಲ್ಲ. ಟೆಂಡರ್ ಪ್ರಕ್ರಿಯೆ ವಿಳಂಬವಾಗುತ್ತಿದೆ. ಕೂಡಲೇ ಕಾರ್ಯಪ್ರವೃತ್ತರಾಗಬೇಕೆಂದು ಸೂಚಿಸಿದರು.
ಕಾಲು ದಾರಿ ಬಿಡಿ:
ತಹಸೀಲ್ದಾರ್ ಸಯಿದ್ ಕಲೀಂ ಉಲ್ಲಾ ಮಾತನಾಡಿ, ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ ಸೇರಿದಂತೆ ತಮ್ಮ ತಮ್ಮ ಇಲಾಖೆಗಳ ವ್ಯಾಪ್ತಿಯಲ್ಲೇ ಅಧಿಕಾರವಿರುತ್ತದೆ. ಅಲ್ಲೇ ಅಧಿಕಾರ ಚಲಾಯಿಸಿ ಕೆಲಸ ನಿರ್ವಹಿಸುವ ಕೆಲಸ ಮಾಡಬೇಕು. ಅದನ್ನು ಬಿಟ್ಟು ತಹಸೀಲ್ದಾರ್ ಕಡೆ ಬೊಟ್ಟು ಮಾಡುವ ಕೆಲಸ ಬಿಡಬೇಕು. ಅತಿ ಅವಶ್ಯವಿದ್ದಲ್ಲಿ ಮಾತ್ರ ತಹಸೀಲ್ದಾರ್ ಸಹಾಯ ಬಳಸಿಕೊಳ್ಳಬೇಕು ಎಂದರು.ಪಶು ಇಲಾಖೆ ಸಹಾಯಕ ನಿರ್ದೇಶಕ ಲಿಂಗರಾಜು, ಸಾಮಾಜಿಕ ವಲಯ ಅರಣ್ಯ ಇಲಾಖಾಧಿಕಾರಿ ಶ್ರೀನಿವಾಸ್, ಕ್ಷೇತ್ರ ಶಿಕ್ಷಣಾಧಿಕಾರಿ ಹಾಲಮೂರ್ತಿ ಸೇರಿದಂತೆ ತಾಲೂಕಿನ ವಿವಿಧ ಇಲಾಖೆ ಅನುಷ್ಠಾನಾಧಿಕಾರಿಗಳು ತಮ್ಮ ತಮ್ಮ ಇಲಾಖೆಗಳ ವರದಿ ಮಂಡಿಸಿದರು.
* ಕಾನೂನು ಬಳಸಿ ಹೊಲಕ್ಕೆ ದಾರಿ ಅನೇಕ ರೈತರು ನಮಗೆ ಹೊಲಕ್ಕೆ ಓಡಾಡಲು ತೊಂದರೆ ಕೊಡುತ್ತಾರೆ. ನಕಾಶೆ ದಾರಿಗಳನ್ನು ಕೆಲ ರೈತರು ಒತ್ತುವರಿ ಮಾಡಿಕೊಂಡಿದ್ದಾರೆ. ರೂಢಿ ದಾರಿ ಮೊದಲು ಇತ್ತು. ಈಗ ಬಿಡುತ್ತಿಲ್ಲ ಎಂಬ ದೂರುಗಳು ಬಂದಿವೆ. ಓಡಾಡಲು ರೂಢಿ ದಾರಿಗೆ 8 ಅಡಿ, ನಕಾಶೆ ಬಂಡಿದಾರಿಗೆ 20 ಅಡಿ ಅವಕಾಶವಿರುತ್ತದೆ. ಸ್ಥಳ ಮಹಜರು ಮಾಡಿ, ತಡೆಹಿಡಿದ ರೈತರಿಗೆ ಮನವರಿಕೆ ಮಾಡಿ, ದಾರಿ ಬಿಡಿಸಲು ಪ್ರತ್ನಿಸುತ್ತೇವೆ. ಇಲ್ಲವಾದರೆ ಕಾನೂನಿನ ಪ್ರಕಾರವೇ ಪೊಲೀಸ್ ಇಲಾಖೆ ಮೂಲಕ ದಾರಿ ಬಿಡಿಸಿಕೊಡಲಾಗುತ್ತದೆ ಎಂದು ರೈತರಿಗೆ ಶಾಸಕ ದೇವೇಂದ್ರಪ್ಪ ಭರವಸೆ ನೀಡಿದರು.