ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಎಸ್.ಬಿ.ಸಮುದಾಯ ಭವನದಲ್ಲಿ ಭಾರತೀಯ ರೆಡ್ಕ್ರಾಸ್ ಸಂಸ್ಥೆ (ಮಂಡ್ಯ ಜಿಲ್ಲಾ ಶಾಖೆ)ಯಿಂದ ನಡೆದ ಮೂರು ದಿನದ ಮೈಸೂರು ವಿಭಾಗ ಮಟ್ಟದ ಕಾಲೇಜು ವಿದ್ಯಾರ್ಥಿಗಳ ತರಬೇತಿ ಶಿಬಿರದ ಸಮಾರೋಪದಲ್ಲಿ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು.
ನಾನು ಕೂಡ ಅನುತ್ತೀರ್ಣನಾಗಿಯೇ ನಂತರ ಮತ್ತೆ ಪರೀಕ್ಷೆ ಬರೆದು ಉತ್ತೀರ್ಣನಾಗಿರುವೆ. ಕೇವಲ ವಿದ್ಯಾರ್ಥಿಗಳು ಓದುವ ವಿಷಯಗಳನ್ನೇ ಮುಖ್ಯವಾಗಿರಿಸಿಕೊಳ್ಳಬಾರದು. ಪ್ರಾಪಂಚಿಕ ಜ್ಞಾನವನ್ನು ಅರಿಯಬೇಕು. ನಿಮ್ಮ ತಂದೆ-ತಾಯಂದಿರು ನಂಬಿಕೆಯಿಟ್ಟು ಇಷ್ಟು ದೊಡ್ಡವರಾಗಿ ಮಾಡಿದ್ದಾರೆ. ಅವರ ವಿಶ್ವಾಸಕ್ಕೆ ಎಂದಿಗೂ ದ್ರೋಹ ಮಾಡದೆ ಅವರ ಕನಸನ್ನು ನನಸು ಮಾಡಬೇಕೆಂದರು.ನೆಲ್ಸನ್ ಮಂಡೆಲಾ, ನಂದನ್ ನಿಲೇಕಣಿ, ಬರಾಕ್ ಒಬಾಮಾ, ನಾರಾಯಣಮೂರ್ತಿ, ಜಯಪ್ರಕಾಶ್ ನಾರಾಯಣ್, ಮಹಾತ್ಮ ಗಾಂಧೀಜಿ ಸೇರಿದಂತೆ ಸಾಧಕರ ಜೀವನ ಚರಿತ್ರೆ ಓದಿದರೆ, ಅವರು ನಡೆದು ಬಂದ ದಾರಿ ಗೊತ್ತಾಗುತ್ತದೆ. ಯಾರಿಗೂ ಸಾಧನೆ ತಕ್ಷಣಕ್ಕೆ ಸಿಗುವುದಿಲ್ಲ, ಸತತ ಪ್ರಯತ್ನದಿಂದ ಮಾತ್ರ ಎದ್ದು ನಿಲ್ಲಬಹುದು ಎಂದು ಸಲಹೆ ನೀಡಿದರು.
ಮೈಸೂರು, ಮಂಡ್ಯ, ಹಾಸನ, ಕೊಡಗು, ಚಾಮರಾಜನಗರ, ಚಿಕ್ಕಮಂಗಳೂರು, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಿಂದ ಸುಮಾರು 136 ವಿದ್ಯಾರ್ಥಿಗಳು ಹಾಗೂ 17 ಮಂದಿ ಕಾರ್ಯಕ್ರಮಾಧಿಕಾರಿಗಳು ಶಿಬಿರದಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಭಾರತೀಯ ರೆಡ್ಕ್ರಾಸ್ ಸಂಸ್ಥೆ ಜಿಲ್ಲಾ ಸಭಾಧ್ಯಕ್ಷೆ ಡಾ. ಮೀರಾ ಶಿವಲಿಂಗಯ್ಯ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಉಮಾಕಾಂತ್, ಯುವ ರೆಡ್ಕ್ರಾಸ್ ಸಂಯೋಜಕ ಡಿ.ಜಿ.ಆನಂದ್, ಸಂಚಾಲಕರಾದ ರಂಗಸ್ವಾಮಿ, ಕೆ.ಟಿ.ಹನುಮಂತು, ಮಂಗಲ ಎಂ.ಯೋಗೀಶ್, ಭವಾನಿ ಶಂಕರ್, ಷಡಕ್ಷರಿ ಭಾಗವಹಿಸಿದ್ದರು.