ಕನ್ನಡಪ್ರಭ ವಾರ್ತೆ ಗೌರಿಬಿದನೂರು
ಈಗ ಹಾಳಾಗಿರುವ ಹಲಗೆಗಳು ನೀರನ್ನು ತಡೆಯುವುದೇ ಇರುವುದರಿಂದ ನೀರು ಮುಂದೆ ಹರಿದು ಹೋಗುತ್ತಿವೆ, ಈಗ ಇದಕ್ಕೆ ಸ್ವಯಂ ಚಾಲಿತ ಗೇಟುಗಳನ್ನು ಅಳವಡಿಸಬೇಕು, ಮತ್ತು ಅಲ್ಲಿರುವ ಜಾಕ್ವೆಲ್ ಗಳಿಗೆ ನಿರಂತರವಾಗಿ ನೀರು ಹರಿದು ಬರುವಂತೆ ಮಾಡಬೇಕು ಇದರಿಂದ ನೀರಿನ ಸಮಸ್ಯೆ ನೀಗಿಸಲು ಸಾಧ್ಯವಾಗುತ್ತದೆ, ಮತ್ತು ಈ ಕಿಂಡಿ ಅಣೆಕಟ್ಟು ಮಾಜಿ ಸಂಸದ ಜಾಲಪ್ಪನವರ ಕಾಲದಲ್ಲಿ ನಿರ್ಮಾಣ ಮಾಡಿರುವುದರಿಂದ ಅವರ ಹೆಸರನ್ನು ನಾಮಕರಣ ಮಾಡಬೇಕು. ಅಣೆಕಟ್ಟು ನಿರ್ಮಾಣಕ್ಕೆ ವಿವಿಧ ಇಲಾಖೆಗಳಿಂದ ಅನುಮತಿ ತಂದು ಅಣೆಕಟ್ಟು ನಿರ್ಮಿಸುವಲ್ಲಿ ಯಶಸ್ವಿಯಾದರು. ಅವರ ದೂರದೃಷ್ಟಿಯ ಫಲವಾಗಿ ನಿರ್ಮಾಣವಾದ ಕಿಂಡಿ ಅಣೆಕಟ್ಟು ಇಂದು ತಾಲ್ಲೂಕಿನ ಆಸರೆಯಾಗಿದ್ದು, ನಗರದ ನೀರಿನ ಹಾಹಾಕಾರ ನೀಗಿಸುವ ಜತೆಗೆ ಪೋಷಕ ಕಾಲುವೆಗಳ ಮೂಲಕ ಹಲವು ಕೆರೆಗಳಿಗೆ ನೀರು ಹರಿಯುತ್ತಿದೆ.ಸ್ವಯಂಚಾಲಿತ ಗೇಟ್ ಅಳವಡಿಸಿ
ಕಿಂಡಿ ಅಣೆಕಟ್ಟು ನೀರಿನಿಂದ ತುಂಬಿದಾಗ ಸ್ವಯಂಚಾಲಿತ ಗೇಟ್ ಗಳು ತೆರೆದು ನೀರು ಹರಿಯುವಂತೆ ಮಾಡಿ ಕಾಲವೆಗಳಲ್ಲಿ ಸರಾಗವಾಗಿ ನೀರು ಸಾಗಲು ವ್ಯವಸ್ಥೆ ಮಾಡಬೇಕಾಗಿದೆ. ಈ ಕೆಲಸಕ್ಕಾಗಿ ನಾನು ಪ್ರಯತ್ನ ಮಾಡುತ್ತೇನೆ ಎಂದು ತಿಳಿಸಿದರು.ಹಾಗೂ ನಗರದಲ್ಲಿ ಚಿಕ್ಕಬಳ್ಳಾಪುರ ರಸ್ತೆಯಲ್ಲಿ ನಿರ್ಮಿಸುತ್ತಿರುವ ಸೇತುವೆಯನ್ನು, ಬ್ರಿಡ್ಜ್ ಕಂ ಬ್ಯಾರೇಜ್ ರೀತಿ ನಿರ್ಮಾಣ ಮಾಡಿದರೆ ನೀರು ನಿಂತು ಮುಂದೆ ಸಾಗುತ್ತದೆ, ಇದರಿಂದ ನಗರಕ್ಕೆ ನೀರಿನ ಕ್ಷಾಮ ಉಂಟಾಗುವುದಿಲ್ಲ ಎಂದರು.