ಸುಂಟಿಕೊಪ್ಪ: ರಾಷ್ಟ್ರೀಯ ಸೇವಾ ಯೋಜನಾ ಶಿಬಿರ ಸಮಾರೋಪ ಸಮಾರಂಭ

KannadaprabhaNewsNetwork |  
Published : Oct 05, 2024, 01:33 AM IST
ಸುಂಟಿಕೊಪ್ಪ,ಅ.4: ಶಿಬಿರದಲ್ಲಿ ಪಡೆದುಕೊಂಡ ತರಬೇತಿ ಮತ್ತು ಅನುಭವವನ್ನು ಅಭ್ಯಾಸವನ್ನಾಗಿ ರೂಪಿಸಿಕೊಳ್ಳಬೇಕು. ಸಾಮಾಜಿಕ ಹೊಣೆಗಾರಿಕೆಯನ್ನು ಹೊಂದಿರುವ ದೇಶದ ಅತ್ಯುತ್ತಮ ಪ್ರಜೆಗಳಾಗಿ ಜೀವಿಸಬೇಕು ಪೋಷಕರಿಗೆ ಹೆಮ್ಮೆ ತರಬೇಕು ಎಂದು ಕೊಡಗು ವಿಶ್ವ ವಿದ್ಯಾನಿಲಯದ ಕನ್ನಡ ಉಪನ್ಯಾಸಕ ಡಾ.ಜಮೀರ್ ಆಹ್ಮದ್ ಅಭಿಪ್ರಾಯಿಸಿದರು.  ಶುಕ್ರವಾರದಂದು ಮಾದಾಪುರ ಶ್ರೀಮತಿ ಡಿ ಚೆನ್ನಮ್ಮ ಪದವಿ ಪೂರ್ವ ಕಾಲೇಜಿನ ವತಿಯಿಂದ ಸುಂಟಿಕೊಪ್ಪ ಮಂಜನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ಆಯೋಜಿಸಿರುವ ಎನ್‌ಎಸ್ ಎಸ್ ಶಿಬಿರದ ಸಮರೋಪ ಸಮಾರಂಭದಲ್ಲಿ ಸಮಾರೋಪ ಭಾಷಣ ಮಾಡಿದ ಅವರು, ಯುವ ಜನತೆಯನ್ನು ಮಾದಕ ವಸ್ತುಗಳ ವ್ಯಸನಿಗಳಾಗದಂತೆ ಕಾಪಾಡುವ ಗುರುತರವಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಕನ್ನಡ ಉಪನ್ಯಾಸಕ ಡಾ. ಜಮೀರ್ ಅಹಮದ್ ಹೇಳಿದರು. ಬದಲಾದ ಕಾಲಘಟ್ಟದಲ್ಲಿ ಜೀವನದ ಆಧುನಿಕ ಶೈಲಿಯ ಅನುಕರಣೆಯಲ್ಲಿ ಬಹುತೇಕ ಯುವಜನತೆಯ ಜೀವನ ಕ್ರಮವೂ ಕೂಡ ಬದಲಾಗುತ್ತಿದೆ. ಮಾದಕವಸ್ತುಗಳ ಸೇವನೆಯಿಂದ ಅಮೂಲ್ಯವಾದ ಬದುಕಿನ ನಾಶವಾಗುತ್ತಿದೆ. ಸಮಾಜದ ಸತ್ಪ್ರಜೆಗಳನ್ನು ರೂಪಿಸುವ ನಿಟ್ಟಿನಲ್ಲಿ ಶೈಕ್ಷಣಿಕ ಸಂಸ್ಥೆಗಳು ಹೆಚ್ಚು ಒತ್ತು ನೀಡಬೇಕು. ಹದಿ ಹರೆಯದ ವಯಸ್ಸಿನ ಮಕ್ಕಳನ್ನು ಗುರಿಯಾಗಿಸಿಕೊಂಡು ಮಾದಕವಸ್ತುಗಳ ದಾಸರಾಗಿಸುವ ಕೃತ್ಯ ಎಸಗುತ್ತಿದ್ದಾರೆ. ಅಂತಹವರುಗಳ ಎಡಮುರಿ ಕಟ್ಟಿ ಕಠಿಣ ಕಾನೂನು ಜಾರಿಗೆ ತಂದು ನಮ್ಮ ದೇಶದ ಅಮೂಲ್ಯವಾದ ಸಂಪತ್ತಾಗಿರುವ ಯುವ ಜನತೆಯ ರಕ್ಷಣೆ ಮಾಡಬೇಕು ಎಂದರು. ಶಿಬಿರದಲ್ಲಿ 60 ಮಂದಿ ಪಾಲ್ಗೊಂಡಿದ್ದು ನೀವು 600 ಮಂದಿಗೆ ಸಮಾನವೆಂದು ಬಣ್ಣಿಸಿದರು.   ಇನ್ನೋರ್ವ ಮುಖ್ಯ ಅತಿಥಿ ಅತಿಥಿ ಉಪನ್ಯಾಸಕರು ಹಾಗೂ ಪತ್ರಕರ್ತರಾಗಿರುವ ಎಂಎಸ್.ಸುನಿಲ್ ಮಾತನಾಡಿ ಶಿಬಿರಾರ್ಥಿಗಳು ತಾವು ಕಲಿತದ್ದನ್ನು ಜೀವನದಲ್ಲಿ ಅಳವಡಿಸಿಕೊಂಡು ಸಾಧಕರಾಗಿ ಬರಬೇಕೆಂದು ಕರೆ ನೀಡಿದರು. ಶಿಬಿರವು ಕಲಿಸಿದ ಸಹಬಾಳ್ವೆ ಸಹೋದರತ್ವ ಮತ್ತು ತಾಳ್ಮೆಯನ್ನು ಜೀವನದ ಎಲ್ಲಾ ಹಂತಗಳಲ್ಲಿ ಅಳವಡಿಸಿಕೊಂಡು ಪೋಷಕರಿಗೆ ಮತ್ತು ಶಿಕ್ಷಕರಿಗೆ ಗೌರವ ಸಲ್ಲಿಸಲು ಕರೆ ನಿಡಿದ ಅವರು ಈ ಎರಡು ವರ್ಗದ ಜನರಿಗೆ ನಾವು ಸಲ್ಲಿಸುವ ಪ್ರೀತಿ ಗೌರವಗಳು ನಾಟಕಿಯ ವಿದ್ಯಮಾನ ಎನ್ನಿಸದೆ ಮನದಾಳದಿಂದ ಜೀವ ಮತ್ತು ಜೀವನ ನೀಡಿದ ಗುರುಹಿರಿಯರಿಗೆ ಸದಾ ತಲೆಬಾಗಿ ಜಿವನ ನಡೆಸಿ ಎಂದು ಸುನಿಲ್ ಮಾರ್ಮಿಕವಾಗಿ ನುಡಿದರು.  ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಾದಾಪುರ ಶ್ರೀಮತಿ ಡಿ ಚೆನ್ನಮ್ಮ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಸಿಜಿ.ಮಂದಪ್ಪ ಮಾತನಾಡಿ ರಾಷ್ಟಿçÃಯ ಸೇವಾ ಯೋಜನೆಯ ವಾರ್ಷಿಕ ಶಿಬಿರವು ಯಶಸ್ವಿಯಾಗಿದ್ದು ವಿದ್ಯಾರ್ಥಿ ವಿದ್ಯಾರ್ಥಿನಿಯರು ಶಿಬಿರದಲ್ಲಿ ಸಾಕಷ್ಟು ಬಗ್ಗೆ ಆರಿತು ಎನ್‌ಎಸ್ ಎಸ್ ಶಿಬಿರದ ಸಂಕಲ್ಪವಾಗಿರುವ ಜೀವ ವಿರೋಧಿ ಹೆಣ್ಣು ಭ್ರೂಣ ಹತ್ಯೆ  ನಿಲ್ಲಿಸಿ ಲಿಂಗ ಸಮಾನತೆ ಸಾಧಿಸಿ ಎಂಬುದನ್ನು ಬದುಕಿನಲ್ಲಿ ಕೂಡ ಅಳವಡಿಸಿಕೊಮಡು ಸಮಸಮಾಜ ನಿರ್ಮಿಸುವಲ್ಲಿ ನಾವೆಲ್ಲಾರೂ ಮುಂದಾಗಬೇಕೆAದು ಅವರು ಕರೆ ನೀಡಿದರು.    ಶಿಬಿರಾಧಿಕಾರಿ ಎನ್.ಎನ್.ಮನೋಹರ್ ಮಾತನಾಡಿ, ಸುಂಟಿಕೊಪ್ಪದಲ್ಲಿ ಶಿಬಿರವನ್ನು ಅಯೋಜಿಸಿದ ಸಂದರ್ಭ  ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ, ಹಲಷ್ಟು ದಾನಿಗಳು, ಹಿತೈಷಿಗಳು ಹಾಗೂ  ಊರಿನ ಸಂಘ ಸಂಸ್ಥೆಯವರು ಶಿಬಿರವನ್ನು  ಯಶಸ್ವಿಗೊಳಿಸಲು ಸರ್ವ ರೀತಿಯಲ್ಲಿ ಸಹಕಾರ ನೀಡಿದ್ದು, ಈ ಸಹಕಾರ ಮತ್ತು ಮಾರ್ಗದರ್ಶನ ಸದಾಹಸಿರಾಗಿರುತ್ತದೆ ಬಣ್ಣಿಸಿದರು.  ಸಮಾರಂಭದ ವೇದಿಕೆಯಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಶಿವಮ್ಮ ಮಹೇಶ್, ಸುಂಟಿಕೊಪ್ಪ ಜೆಸಿಐ ಸಂಸ್ಥೆಯ ಅಧ್ಯಕ್ಷ  ಎಂ. ಸಂಪತ್‌ಕುಮಾರ್ ಉಪಸ್ಥಿತರಿದ್ದರು. ಚಿತ್ರ.1: ಕೊಡಗು ವಿಶ್ವ ವಿದ್ಯಾನಿಲಯದ ಕನ್ನಡ ಉಪನ್ಯಾಸಕ ಡಾ.ಜಮೀರ್ ಆಹ್ಮದ್ ಮಾತನಾಡುತ್ತಿರುವುದು. | Kannada Prabha

ಸಾರಾಂಶ

ಎಂ.ಎಸ್. ಸುನಿಲ್ ಮಾತನಾಡಿ ಶಿಬಿರಾರ್ಥಿಗಳು ತಾವು ಕಲಿತದ್ದನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಶಿಬಿರವು ಕಲಿಸಿದ ಸಹಬಾಳ್ವೆ ಸಹೋದರತ್ವ ಮತ್ತು ತಾಳ್ಮೆಯನ್ನು ಜೀವನದ ಎಲ್ಲ ಹಂತಗಳಲ್ಲಿ ಪಾಲಿಸಬೇಕು ಎಂದರು.

ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ

ವಿದ್ಯಾರ್ಥಿಗಳು ಈ ಬಿರದಲ್ಲಿ ಪಡೆದುಕೊಂಡ ತರಬೇತಿ ಮತ್ತು ಅನುಭವವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸಾಮಾಜಿಕ ಹೊಣೆಗಾರಿಕೆಯನ್ನು ಹೊಂದಿರುವ ದೇಶದ ಅತ್ಯುತ್ತಮ ಪ್ರಜೆಗಳಾಗಿ ರೂಪುಗೊಂಡು ಪೋಷಕರಿಗೆ ಹೆಮ್ಮೆ ತರಬೇಕು ಎಂದು ಕೊಡಗು ವಿಶ್ವ ವಿದ್ಯಾನಿಲಯದ ಕನ್ನಡ ಉಪನ್ಯಾಸಕ ಡಾ. ಜಮೀರ್ ಆಹ್ಮದ್ ಅಭಿಪ್ರಾಯಪಟ್ಟರು.

ಶುಕ್ರವಾರ ಮಾದಾಪುರ ಶ್ರೀಮತಿ ಡಿ. ಚೆನ್ನಮ್ಮ ಪದವಿ ಪೂರ್ವ ಕಾಲೇಜಿನ ವತಿಯಿಂದ ಸುಂಟಿಕೊಪ್ಪ ಮಂಜನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಎನ್‌ಎಸ್‌ಎಸ್‌ ಶಿಬಿರದ ಸಮಾರೋಪ ಸಮಾರಂಭದಲ್ಲಿ ಸಮಾರೋಪ ಭಾಷಣ ಮಾಡಿದರು.

ಯುವ ಜನತೆಯನ್ನು ಮಾದಕ ವಸ್ತುಗಳ ವ್ಯಸನಿಗಳಾಗದಂತೆ ಕಾಪಾಡುವ ಗುರುತರವಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಬದಲಾದ ಕಾಲಘಟ್ಟದಲ್ಲಿ ಜೀವನದ ಆಧುನಿಕ ಶೈಲಿಯ ಅನುಕರಣೆಯಲ್ಲಿ ಬಹುತೇಕ ಯುವಜನತೆಯ ಜೀವನ ಕ್ರಮವೂ ಕೂಡ ಬದಲಾಗುತ್ತಿದೆ. ಮಾದಕವಸ್ತುಗಳ ಸೇವನೆಯಿಂದ ಅಮೂಲ್ಯವಾದ ಬದುಕು ನಾಶವಾಗುತ್ತಿದೆ. ಸಮಾಜದ ಸತ್ಪ್ರಜೆಗಳನ್ನು ರೂಪಿಸುವ ನಿಟ್ಟಿನಲ್ಲಿ ಶೈಕ್ಷಣಿಕ ಸಂಸ್ಥೆಗಳು ಹೆಚ್ಚು ಒತ್ತು ನೀಡಬೇಕು ಎಂದು ಅವರು ಹೇಳಿದರು.

ಉಪನ್ಯಾಸಕ ಹಾಗೂ ಪತ್ರಕರ್ತರಾಗಿರುವ ಎಂ.ಎಸ್. ಸುನಿಲ್ ಮಾತನಾಡಿ ಶಿಬಿರಾರ್ಥಿಗಳು ತಾವು ಕಲಿತದ್ದನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಶಿಬಿರವು ಕಲಿಸಿದ ಸಹಬಾಳ್ವೆ ಸಹೋದರತ್ವ ಮತ್ತು ತಾಳ್ಮೆಯನ್ನು ಜೀವನದ ಎಲ್ಲ ಹಂತಗಳಲ್ಲಿ ಪಾಲಿಸಬೇಕು ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಾದಾಪುರ ಶ್ರೀಮತಿ ಡಿ. ಚೆನ್ನಮ್ಮ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸಿ.ಜಿ. ಮಂದಪ್ಪ ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಶಿಬಿರವು ಯಶಸ್ವಿಯಾಗಿದ್ದು ವಿದ್ಯಾರ್ಥಿ ವಿದ್ಯಾರ್ಥಿನಿಯರು ಶಿಬಿರದಲ್ಲಿ ಸಾಕಷ್ಟು ವಿಷಯಗಳನ್ನು ಕಲಿತಿದ್ದಾರೆ ಎಂದರು.

ಶಿಬಿರಾಧಿಕಾರಿ ಎನ್.ಎನ್. ಮನೋಹರ್ ಮಾತನಾಡಿದರು. ಸಮಾರಂಭದ ವೇದಿಕೆಯಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಶಿವಮ್ಮ ಮಹೇಶ್, ಸುಂಟಿಕೊಪ್ಪ ಜೆಸಿಐ ಸಂಸ್ಥೆಯ ಅಧ್ಯಕ್ಷ ಎಂ. ಸಂಪತ್‌ಕುಮಾರ್ ಉಪಸ್ಥಿತರಿದ್ದರು.

PREV

Recommended Stories

ನೌಕರರ ಮುಂಬಡ್ತಿಗೆ ತರಬೇತಿ ಕಡ್ಡಾಯ
ಬೆಂಗಳೂರಲ್ಲಿ ಭರ್ಜರಿ ಮಳೆಗೆ ವಾಹನ ಸವಾರರ ಪರದಾಟ