ಭಾರತಪ್ರಪಂಚವಿಶೇಷರಾಜಕೀಯಮನರಂಜನೆಅಪರಾಧಕ್ರೀಡೆಕರ್ನಾಟಕಇ- ಪೇಪರ್

ಸಪ್ಲೆ ಬಿಲ್ ಬಾಕಿ: ರೈತರ ಖಾತೆಗೆ ಹಾಕುವಂತೆ ರೈತ ಸಂಘ ಒತ್ತಾಯ

KannadaprabhaNewsNetwork | Published : Jun 3, 2025 2:46 AM

ಕೆ.ಆರ್.ಪೇಟೆ ತಾಲೂಕಿನಲ್ಲಿ ಮನರೇಗಾ ಯೋಜನೆಯಡಿ ಕಾಮಗಾರಿ ಮಾಡಿರುವ ರೈತರಿಗೆ 2019ರ ಸಾಲಿನಿಂದಲೂ ಸಪ್ಲೆ ಬಿಲ್ ಹಣ ಪಾವತಿಯಾಗಿಲ್ಲ. ಸರ್ಕಾರದ ಯೋಜನೆಯನ್ನು ನಂಬಿ ರೈತರು ಸಾಲ ಮಾಡಿ ಕಾಮಗಾರಿ ಮಾಡಿದ್ದಾರೆ. ಇದುವರೆಗೂ ರೈತರ ಸಪ್ಲೆ ಬಿಲ್ ಹಣ ಪಾವತಿಸಲು ಕ್ರಮ ವಹಿಸಿಲ್ಲ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಉದ್ಯೋಗ ಖಾತ್ರಿ ಯೋಜನೆಯಡಿ ಕಾಮಗಾರಿ ಮಾಡಿರುವ ಸಪ್ಲೆ ಬಿಲ್ ಬಾಕಿಯನ್ನು ತಕ್ಷಣವೇ ರೈತರ ಖಾತೆಗೆ ಹಾಕಲು ಕ್ರಮ ವಹಿಸುವಂತೆ ರೈತಸಂಘ ಒತ್ತಾಯಿಸಿದೆ.

ಈ ಕುರಿತು ಮಾತನಾಡಿದ ತಾಲೂಕು ರೈತಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ, ತಾಲೂಕಿನಲ್ಲಿ ಮನರೇಗಾ ಯೋಜನೆಯಡಿ ಕಾಮಗಾರಿ ಮಾಡಿರುವ ರೈತರಿಗೆ 2019ರ ಸಾಲಿನಿಂದಲೂ ಸಪ್ಲೆ ಬಿಲ್ ಹಣ ಪಾವತಿಯಾಗಿಲ್ಲ. ಸರ್ಕಾರದ ಯೋಜನೆಯನ್ನು ನಂಬಿ ರೈತರು ಸಾಲ ಮಾಡಿ ಕಾಮಗಾರಿ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

ಕಾಮಗಾರಿಯ ಕೂಲಿ ಕಾರ್ಮಿಕರ ಹಣವನ್ನು ಮಾತ್ರ ಪಾವತಿಸಿರುವ ಅಧಿಕಾರಿಗಳು ಇದುವರೆಗೂ ರೈತರ ಸಪ್ಲೆ ಬಿಲ್ ಹಣ ಪಾವತಿಸಲು ಕ್ರಮ ವಹಿಸಿಲ್ಲ. ಹಿಂದಿನ ಬಾಕಿ ಹಣವನ್ನು ರೈತರ ಖಾತೆಗೆ ಜಮೆ ಮಾಡದಿದ್ದರೂ ನರೇಗಾ ಯೋಜನೆಯಡಿ ಹೊಸ ಹೊಸ ಕಾಮಗಾರಿ ಕ್ರಿಯಾಯೋಜನೆಗಳನ್ನು ಮಾಡಿ ರೈತರನ್ನು ಸರ್ಕಾರವೇ ಸಾಲಗಾರರನ್ನಾಗಿ ಮಾಡುತ್ತಿದೆ ಎಂದು ಕಿಡಿಕಾರಿದ್ದಾರೆ.

ಈ ಬಗ್ಗೆ ತಾಪಂ ಇಒ ಪ್ರಶ್ನಿಸಿದರೆ ಸಪ್ಲೆ ಬಿಲ್ ಹಿಂಬಾಕಿ ಬಗ್ಗೆ ಸಿನಿಯಾರಿಟಿ ಆಧರಿಸಿ ಹಂತ ಹಂತವಾಗಿ ಬಿಲ್ ಪಾವತಿಸಲು ಕ್ರಮವಹಿಸುತ್ತಿರುವುದಾಗಿ ಹೇಳುತ್ತಿದ್ದಾರೆಯೇ ಹೊರತು ಇದುವರೆಗೂ ಯಾವುದೇ ರೈತರಿಗೂ ಪಾವತಿಯಾಗಿಲ್ಲ ಎಂದು ಹೇಳಿದ್ದಾರೆ.

ರೈತರ ಆಸ್ತಿಯ ಇ-ಸ್ವತ್ತು ಮಾಡಲು ಭಾರೀ ಪ್ರಮಾಣದ ಭ್ರಷ್ಟಾಚಾರ ನಡೆಯುತ್ತಿದೆ ಎಂದು ದೂರಿದ್ದಾರೆ.

ರೈತರು ತಮ್ಮ ಸ್ವತ್ತಿನ ಇ-ಸ್ವತ್ತು ಮಾಡಿಸಲು ಲಂಚಕೊಡಬೇಕಾದ ಪರಿಸ್ಥಿತಿ ಇದೆ. ಇ-ಸ್ವತ್ತು ಬಗ್ಗೆ ಅರಿವಿಲ್ಲದ ರೈತರಿಂದ ಗ್ರಾಪಂ ಕೇಬಲ್ ಆಪರೇಟರ್‌ಗಳು ಸುಲಿಗೆ ಮಾಡುತ್ತಿದ್ದಾರೆ. ತಕ್ಷಣವೇ ಎಲ್ಲಾ ಇ-ಸ್ವತ್ತು ಕೇಂದ್ರಗಳಲ್ಲೂ ಮಾಹಿತಿ ಫಲಕ ಅಳವಡಿಸಿ ರೈತರನ್ನು ಸುಲಿಗೆ ಮಾಡುವವರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಆಗ್ರಹಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ರೈತಸಂಘದ ಉಪಾಧ್ಯಕ್ಷ ಮರುವನಹಳ್ಳಿ ಶಂಕರ್, ರೈತ ಮುಖಂಡರಾದ ಅಕ್ಕಿಮಂಚನಹಳ್ಳಿ ಹೊನ್ನೇಗೌಡ, ಕೃಷ್ಣಾಪುರ ರಾಜಣ್ಣ, ಮಹೇಶ್ ಇದ್ದರು.