ಸುರಪುರ ತಾಲೂಕಿನಲ್ಲಿ ರಂಗ ಕಲಾವಿದರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ನಾಟಕ ಸಾಹಿತಿಗಳು, ಖಳನಟರು, ಹಾಸ್ಯ ಕಲಾವಿದರು, ನಾಯಕ ನಟರ ತವರು.
ಕನ್ನಡಪ್ರಭ ವಾರ್ತೆ ಸುರಪುರ
ತಾಲೂಕಿನಲ್ಲಿ ರಂಗ ಕಲಾವಿದರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ನಾಟಕ ಸಾಹಿತಿಗಳು, ಖಳನಟರು, ಹಾಸ್ಯ ಕಲಾವಿದರು, ನಾಯಕ ನಟರ ತವರು ಸುರಪುರ ಎಂದು ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ರಾಜಾ ಹನುಮಪ್ಪ ನಾಯಕ ಹೇಳಿದರು.
ನಗರದ ವೇಣುಗೋಪಾಲಸ್ವಾಮಿ ದೇವಸ್ಥಾನದ ಆವರಣದಲ್ಲಿ ಕೋನ್ಹಾಳದ ಮೂಕನಾಯಕ ಸಾಂಸ್ಕೃತಿಕ ಕಲಾ ನಾಟ್ಯ ಸಂಘ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಗ್ರಾಮೀಣ ನಾಟಕೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಂಗಭೂಮಿಗೆ ಮಲ್ಲೇಶಿ ಕೋನ್ಹಾಳ ಅವರ ಕೊಡುಗೆ ಅನನ್ಯ. ನಾಟಕ ಸಾಹಿತಿಗಳಾಗಿ ರಚಿಸಿರುವ 11 ನಾಟಕಗಳು ಒಂದಕ್ಕಿಂತ ಒಂದು ಅಮೋಘ. ತಮ್ಮ ಜೀವನವನ್ನು ರಂಗಭೂಮಿಗೆ ಮುಡಿಪಾಗಿರುವ ಅವರಿಗೆ ರಾಜ್ಯ ಮಟ್ಟದ ಪ್ರಶಸ್ತಿಗಳು ಸಿಗಬೇಕು ಎಂದರು.
ಮುಖಂಡ ಶಿವರಾಯ ಕಾಡ್ಲೂರು ಮಾತನಾಡಿ, ತಾಲೂಕಿನಲ್ಲಿ ಪ್ರತಿವರ್ಷ ನೂರಾರು ನಾಟಕಗಳು ಪ್ರದರ್ಶಿತವಾಗುತ್ತವೆ. ರಂಗಭೂಮಿ ನಿರ್ಮಾಣದ ಅವಶ್ಯಕತೆ ಇದೆ. ರಂಗ ಕಲಾವಿದರಿಗೆ ಮಾಶಾಸನ ನೀಡಬೇಕು ಎಂದು ಆಗ್ರಹಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.