ಶರಣ ತತ್ವಗಳು ಸದಾಕಾಲ ಜೀವಂತವಾಗಿರುತ್ತವೆ: ಸಿದ್ದರಾಮ ಸ್ವಾಮೀಜಿ

KannadaprabhaNewsNetwork |  
Published : Dec 15, 2023, 01:30 AM IST
ಕೈಂಕರ್ಯ ಸಮಿತಿಯಿಂದ ಹಲವಾರು ದಾನಿಗಳಿಗೆ ಈ ಸಂದರ್ಭದಲ್ಲಿ ಅಭಿನಂಧಿಸಲಾಯಿತು | Kannada Prabha

ಸಾರಾಂಶ

ಶರಣ ತತ್ವಗಳು ಸದಾಕಾಲ ಜೀವಂತವಾಗಿರುತ್ತವೆ ಎಂದು ಗದುಗಿನ ಡಂಬಳ ಮಠದ ಶ್ರೀ ಸಿದ್ದರಾಮ ಸ್ವಾಮಿಜಿ ತಿಳಿಸಿದ್ದಾರೆ. ತಾಲೂಕಿನ ಶ್ರೀಕ್ಷೇತ್ರ ಎಡೆಯೂರಿನಲ್ಲಿ ದಾಸೋಹ ಸೇವಾ ಕೈಂಕರ್ಯ ಸಮಿತಿ ಏರ್ಪಡಿಸಿದ್ದ ವಚನ ಮಂಗಲೋತ್ಸವ ಹಾಗೂ ದಾನಿಗಳಿಗೆ ಅಭಿನಂದನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ದಾಸೋಹ ಸೇವಾ ಕೈಂಕರ್ಯ ಸಮಿತಿಯಿಂದ ವಚನ ಮಂಗಲೋತ್ಸವ ಕಾರ್ಯಕ್ರಮ

ಶರಣ ತತ್ವಗಳು ಸದಾಕಾಲ ಜೀವಂತವಾಗಿರುತ್ತವೆ ಎಂದು ಗದುಗಿನ ಡಂಬಳ ಮಠದ ಶ್ರೀ ಸಿದ್ದರಾಮ ಸ್ವಾಮಿಜಿ ತಿಳಿಸಿದ್ದಾರೆ. ತಾಲೂಕಿನ ಶ್ರೀಕ್ಷೇತ್ರ ಎಡೆಯೂರಿನಲ್ಲಿ ದಾಸೋಹ ಸೇವಾ ಕೈಂಕರ್ಯ ಸಮಿತಿ ಏರ್ಪಡಿಸಿದ್ದ ವಚನ ಮಂಗಲೋತ್ಸವ ಹಾಗೂ ದಾನಿಗಳಿಗೆ ಅಭಿನಂದನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಬಸವಣ್ಣನ ಹಾದಿಯಲ್ಲಿ ಮುಂದುವರೆದ ಎಡೆಯೂರು ಸಿದ್ದಲಿಂಗೇಶ್ವರರು ಒಂದು ಜಾತಿಗೆ ಸೀಮಿತವಾಗದೇ ಪ್ರತಿಯೊಬ್ಬರಿಗೂ ಮಾರ್ಗದರ್ಶನ ಹಾಗೂ ಸಲಹೆಗಳನ್ನು ನೀಡುತ್ತಾ ಷಟ್‌ಸ್ಥಲ ಸಾರಾಮೃತ ಎಂಬ ವಚನ ಸಂಗ್ರಹವನ್ನು ಮಾಡಿ ಸಾಹಿತ್ಯ ಲೋಕಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಅವರ ತತ್ವ ಸಿದ್ಧಾಂತಗಲು ಹಾಗೂ ವಚನಗಳನ್ನು ಸರ್ಕಾರ ಪ್ರತಿಯೊಬ್ಬರಿಗೂ ತಲುಪಿಸುವ ಕೆಲಸ ಮಾಡಬೇಕಾಗಿದೆ ಎಂದರು.

ನವಲಗುಂದ ಗವಿಮಠದ ಬಸವಲಿಂಗ ಮಹಾಸ್ವಾಮಿಗಳು ಮಾತನಾಡಿ, ಭಕ್ತರ ನಡೆಸುವ ದಾಸೋಹ ಇಲ್ಲಿರುವ ಎಲ್ಲರೂ ಕೂಡ ಅನ್ನದಾತರು ನೀವು ನೀಡುವ ಉದಾರವಾದ ದವಸ ಧಾನ್ಯದಿಂದ ಸಿದ್ದಲಿಂಗೇಶ್ವರನ ಭಕ್ತರಿಗೆ ಅನ್ನ ನೀಡಲು ಸಾಧ್ಯ. ಪ್ರತಿಯೊಬ್ಬರ ಆತ್ಮದಲ್ಲಿ ಸಿದ್ದಲಿಂಗೇಶ್ವರ ಕುಳಿತು ಪ್ರೇರಣೆ ನೀಡುತ್ತಾರೆ. ಇಂತಹ ಭಕ್ತರ ದಾಸೋಹ ಕರ್ನಾಟಕ ರಾಜ್ಯದಲ್ಲಿ ಇದೆ ಮೊದಲು ಉಚಿತ ಯೋಜನೆಯಿಂದ ಮಹಿಳೆಯರು ಹೆಚ್ಚಾಗಿ ದೇವಾಲಯಕ್ಕೆ ಬರುತ್ತಿದ್ದಾರೆ. ಇಲ್ಲಿ ನೀಡುವ ಉಚಿತ ದಾಸೋಹಕ್ಕೆ ಬೇಡಿಕೆ ಹೆಚ್ಚಾಗಿದೆ ಎಂದರು.

ಧರ್ಮಸ್ಥಳ ದಾಸೋಹ ನಿಂತರೂ ಕೂಡ ಸಿದ್ದಲಿಂಗೇಶ್ವರರ ಎಡೆಯೂರು ದಾಸೋಹ ಎಂದು ನಿಂತಿಲ್ಲ. ಈ ಸಮಿತಿಯ ಸದಸ್ಯರ ಜವಾಬ್ದಾರಿ ಅಷ್ಟು ಮುಖ್ಯವಾಗಿದೆ. ಎಲ್ಲರೂ ಹಿಂದೆ ಬುಳ್ಳ ಮಾನ್ವಿ ಅವರ ಜವಾಬ್ದಾರಿಯಿಂದ ಈಗಿನ ಅಧ್ಯಕ್ಷರಿಗೆ ಹೆಚ್ಚಿನ ಜವಾಬ್ದಾರಿ ಇದೆ ಎಂದರು.

ಈ ಸಂದರ್ಭದಲ್ಲಿ ನವಲಗುಂದ ಗವಿಮಠದ ಬಸವಲಿಂಗ ಮಹಾಸ್ವಾಮಿಗಳು, ಗಂಗಾಧರ ಮಹಾಸ್ವಾಮಿಗಳು, ಶಿವ ಹಂಸರೂಡ ಪ್ರಭು ಸ್ವಾಮಿ, ದಾಸೋಹ ಸಂಸ್ಥೆಯ ಕಾರ್ಯದರ್ಶಿ ಸುಭಾಷ್ ಕೆ. ಇಂಗಳೇಶ್ವರ, ಉಪಾಧ್ಯಕ್ಷರಾದ ಶಿರಗುಪ್ಪ , ಉಮಾಮಹೇಶ್ವರ, ಕಾರ್ಯದರ್ಶಿ ಯು.ಸಿ. ಸಿದ್ದಲಿಂಗೇಶ್ವರ, ಸದಸ್ಯರಾದ ನಾಗರಾಜ್ ಅತ್ತಿಗೋಡು, ನಿಟ್ಟೂರ್ ಜಯಪ್ರಕಾಶ್, ದುರ್ಗದಹಳ್ಳಿ ಜಿ.ಎಸ್. ನಟರಾಜ್, ನಿರಂಜನ್ ವಿ. ಬುಳ್ಳ ಗದಗ, ನವಲಗುಂದದ ಅಣ್ಣಪ್ಪ ಶೆಟ್ರಪ್ಪ ಬಾಗಿ, ದಾಸೋಹದ ವ್ಯವಸ್ಥಾಪಕ ಡಿ.ಎಸ್. ನಾಗರಾಜು ಸೇರಿದಂತೆ ಸಿಬ್ಬಂದಿ ಹಾಗೂ ಹಲವಾರು ದಾನಿಗಳು ಭಾಗವಹಿಸಿದ್ದರುಪೋಟೋ ಇದೆ : 14ಕೆಜಿಎಲ್ 1 :

ಶ್ರೀಕ್ಷೇತ್ರ ಎಡೆಯೂರಿನಲ್ಲಿ ದಾಸೋಹ ಸೇವಾ ಕೈಂಕರ್ಯ ಸಮಿತಿ ಏರ್ಪಡಿಸಿದ್ದ ವಚನ ಮಂಗಲೋತ್ಸವ ಹಾಗೂ ದಾನಿಗಳಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಹಲವಾರು ದಾನಿಗಳನ್ನು ಅಭಿನಂಧಿಸಲಾಯಿತು.

PREV

Recommended Stories

ಧರ್ಮಸ್ಥಳ ಗ್ರಾಮ : ಡೆಬಿಟ್, ಪಾನ್ ಕಾರ್ಡ್ ರಹಸ್ಯ ಬಯಲು
ದ್ವೇಷ ಭಾಷಣ ತಡೆ, ಸುಳ್ಳು ಸುದ್ದಿ ನಿಯಂತ್ರಣಕ್ಕೆ ಮಸೂದೆ