ಕಾರ್ಕಳದ ಸ್ವಸ್ತಿ ಕಾಮತ್‌ ಎಸ್ಸೆಸ್ಸೆಲ್ಸಿ ಟಾಪರ್‌

KannadaprabhaNewsNetwork |  
Published : May 03, 2025, 12:17 AM IST
ಸ್ವಸ್ತಿ ಕಾಮತ್ ತನ್ನ ಕುಟುಂಬದ ಜೊತೆ ಖುಷಿ ಹಂಚುತ್ತಿರುವುದು ಅಮ್ಮ ಶಾಂತಿ ಕಾಮತ್ ಸಿಹಿ ತಿನ್ನಿಸುತ್ತಿರುವುದು | Kannada Prabha

ಸಾರಾಂಶ

ಕಾರ್ಕಳ ಗಣಿತನಗರದ ಜ್ಞಾನಸುಧಾ ಹೈಸ್ಕೂಲಿನ ಸ್ವಸ್ತಿ ಕಾಮತ್ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯಮಟ್ಟದಲ್ಲಿ 625/625 ಅಂಕಗಳಿಸಿ ರಾಜ್ಯಕ್ಕೆ ಮೊದಲ ಸ್ಥಾನ ಪಡೆದಿದ್ದಾರೆ. ಅವರು ಕಾರ್ಕಳ ತಾಲೂಕಿನ ಎಳ್ಳಾರೆ ಗ್ರಾಮದ ಸಂಪಿಗೆಕಟ್ಟೆಯ ಜನಾರ್ದನ್ ಕಾಮತ್ ಹಾಗೂ ಶಾಂತಿ ಕಾಮತ್ ದಂಪತಿ ಪುತ್ರಿ.

ಓದಿಗೆ ಸಹಕಾರಿಯಾದ ಉಚಿತ ಬಸ್‌ ಸೌಕರ್ಯ । ಈಕೆಗೆ ವೈದ್ಯೆಯಾಗುವ ಆಸೆ

ರಾಂ ಅಜೆಕಾರು

ಕನ್ನಡಪ್ರಭ ವಾರ್ತೆ ಕಾರ್ಕಳಕಾರ್ಕಳ ಗಣಿತನಗರದ ಜ್ಞಾನಸುಧಾ ಹೈಸ್ಕೂಲಿನ ಸ್ವಸ್ತಿ ಕಾಮತ್ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯಮಟ್ಟದಲ್ಲಿ 625/625 ಅಂಕಗಳಿಸಿ ರಾಜ್ಯಕ್ಕೆ ಮೊದಲ ಸ್ಥಾನ ಪಡೆದಿದ್ದಾರೆ. ಅವರು ಕಾರ್ಕಳ ತಾಲೂಕಿನ ಎಳ್ಳಾರೆ ಗ್ರಾಮದ ಸಂಪಿಗೆಕಟ್ಟೆಯ ಜನಾರ್ದನ್ ಕಾಮತ್ ಹಾಗೂ ಶಾಂತಿ ಕಾಮತ್ ದಂಪತಿ ಪುತ್ರಿ.ತಂದೆಯ ಜನ್ಮದಿನಕ್ಕೆ ಮಗಳ ಉಡುಗೊರೆ:

ತಂದೆ ಜನಾರ್ದನ್ ಕಾಮತ್, ಶುಕ್ರವಾರ ಜನ್ಮದಿನ ಆಚರಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಪ್ರಥಮ ಗಳಿಸಿರುವುದು ತಂದೆಯ ಪ್ರೋತ್ಸಾಹಕ್ಕೆ ನನ್ನ ಉಡುಗೊರೆ ಎಂದು ಸ್ವಸ್ತಿ ಕಾಮತ್ ಹೇಳಿದ್ದಾರೆ.ಬಸ್‌ ಸಮಸ್ಯೆ:

ಕಾರ್ಕಳ ತಾಲೂಕಿನ ಎಳ್ಳಾರೆಯಲ್ಲಿ ಬಸ್ ವ್ಯವಸ್ಥೆಯಿಲ್ಲದ ಕಾರಣ ಸ್ವಸ್ತಿ ಕಾಮತ್, ತನ್ನ ಅಜ್ಜಿ ಮನೆ ಕಾರ್ಕಳದ ಕಣಜಾರು ಗ್ರಾಮದ ಹಡಂಕೋಳಿ ಮೆಲ್ಮನೆಯಿಂದ ಶಾಲೆಗೆ ಹೋಗುತ್ತಿದ್ದರು. ಅಜ್ಜಿ ಮನೆಯ ಭಾಗದಲ್ಲಿ 2024-25ರಲ್ಲಿ ಸರ್ಕಾರಿ ಬಸ್ ಆರಂಭವಾಗಿತ್ತು. ಸದ್ಯ ಸ್ತ್ರೀಯರಿಗೆ ಉಚಿತ ಬಸ್‌ ಸೌಲಭ್ಯವಿದ್ದು, ಇದು ತನಗೆ ತುಂಬಾ ಸಹಕಾರವಾಗಿತ್ತು ಎನ್ನುತ್ತಾರೆ ಸ್ವಸ್ತಿ ಕಾಮತ್.

ನನ್ನೂರಿಗೂ ಬಸ್ ಬರಲಿ:ಕಾರ್ಕಳ, ಅಜೆಕಾರು, ಕಡ್ತಲ, ಎಳ್ಳಾರೆ, ಹಿರಿಯಡ್ಕ ಮಾರ್ಗವಾಗಿ ಬಸ್ ಇಲ್ಲ. ಈ ಹಿನ್ನೆಲೆಯಲ್ಲಿ ನನ್ನ ಓದಿಗಾಗಿ ಅಜ್ಜಿ ಮನೆಗೆ ಬರಬೇಕಾಯಿತು. ನಮ್ಮೂರು ಎಳ್ಳಾರೆಗೂ ಸರ್ಕಾರಿ ಬಸ್ ಬರಲಿ, ಅಲ್ಲಿಯೂ ನನ್ನಂತೆ ತುಂಬಾ ವಿದ್ಯಾರ್ಥಿಗಳು ಓದುವವರಿದ್ದಾರೆ ಅವರಿಗೂ ಸಹಾಯವಾಗಲಿ ಎನ್ನುತ್ತಾರೆ ಸ್ವಸ್ತಿ ಕಾಮತ್.ಮಲ್ಲಿಗೆ ಕೃಷಿ ಜೊತೆ ತಾಯಿಗೂ ಸಹಾಯ:

ತಂದೆ ಜನಾರ್ದನ್ ಕಾಮತ್ ಗೋಕರ್ಣದಲ್ಲಿ ಹೋಟೆಲ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದು, ತಾಯಿ ಶಾಂತಿ ಕಾಮತ್ ಮಲ್ಲಿಗೆ ಕೃಷಿ ಮಾಡುತ್ತಾರೆ. ಬೆಳಗ್ಗಿನ ಜಾವ ಅಮ್ಮನ ಜೊತೆ 2 ಚೆಂಡು ಮಲ್ಲಿಗೆ ಹೂವನ್ನು ಕಟ್ಟಿ, ಬಳಿಕ ಶಾಲೆಗೆ ಹೋಗುತ್ತಿದ್ದಳು.

ಅಕ್ಕನೇ ಪ್ರೇರಣೆ:ಸ್ವಸ್ತಿ ಕಾಮತ್ ಅವರ ಸಹೋದರಿಯರಾಧ ಭಕ್ತಿ ಕಾಮತ್ ಹಾಗೂ ಭವ್ಯ ಕಾಮತ್ ದ್ವಿತೀಯ ಪಿಯುಸಿ ಹಾಗೂ ಎಸ್‌ಎಸ್‌ಎಲ್‌ಸಿಯಲ್ಲಿ ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದಿದ್ದರು. ಇವರೇ ಈ ಸಾಧನೆಗೆ ಪ್ರೇರಣೆ ಎನ್ನುತ್ತಾರೆ. ಸ್ವಸ್ತಿ. ಈಕೆಯ ಸಾಧನೆಗೆ ಪದ್ಮಗೋಪಾಲ್ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಸುಧಾಕರ್ ಶೆಟ್ಟಿ ಎರಡು ಲಕ್ಷ ರು. ಪ್ರೋತ್ಸಾಹ ಧನ ನೀಡಿದ್ದಾರೆ.-------------ಡಾಕ್ಟರ್ ಅಗಬೇಕೆಂಬ ಕನಸಿದೆ. ನನ್ನ ಓದಿಗೆ ಅಕ್ಕಂದಿರೇ ಪ್ರೇರಣೆ. ಸರ್ಕಾರದ ಉಚಿತ ಬಸ್ ವ್ಯವಸ್ಥೆ ನನಗೆ ಶಾಲೆಗೆ ಹೋಗಲು ನೆರವಾಯ್ತು. ನಿತ್ಯ 5 ಗಂಟೆ ಓದುತ್ತಿದ್ದೆ. ಇದು ಉತ್ತಮ ಫಲಿತಾಂಶಕ್ಕೆ ಕಾರಣವಾಗಿದೆ.। ಸ್ವಸ್ತಿ ಕಾಮತ್, ಎಸ್‌ಎಸ್‌ಎಲ್‌ಸಿ ಟಾಪರ್

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೀರಿನಲ್ಲಿ ಕಾಳು ಹಾಕಿ ಕಲಬೆರಿಕೆ ಪತ್ತೆ ಮಾಡಿ
ಭಾಷಣ ಮಾಡಿಕೊಂಡು ಹೋದವನಲ್ಲ, ಪಕ್ಷದ ಎಲ್ಲಾ ಕೆಲ್ಸ ಮಾಡಿದ್ದೇನೆ: ಡಿಕೆಶಿ