ದಾಬಸ್ಪೇಟೆ: ಹಿಮಾಚಲ ಪ್ರದೇಶದಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಟೇಕ್ವಾಂಡೋ ಚಾಂಪಿಯನ್ ಶಿಪ್ನಲ್ಲಿ ಭಾಗವಹಿಸಿದ್ದ ಅಕ್ಕ-ತಮ್ಮ ಇಬ್ಬರು ವಿವಿಧ ವಿಭಾಗಗಳಲ್ಲಿ ಚಿನ್ನ, ಬೆಳ್ಳಿ ಹಾಗೂ ಕಂಚಿನ ಪದಕ ಪಡೆಯುವ ಮೂಲಕ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.
ಅದೇ ರೀತಿ, ಈಕೆಯ ತಮ್ಮ 10ನೇ ತರಗತಿಯ ಶಶಾಂಕ್ ಮಂಜುನಾಥ 4 ಚಿನ್ನ, 1 ಬೆಳ್ಳಿ ಹಾಗೂ 2 ಕಂಚಿನ ಪದಕ ಪಡೆದುಕೊಂಡಿದ್ದಾರೆ.
ಬೆಂಗಳೂರಿನ ವಿದ್ಯಾರಣ್ಯಪುರದ ಶ್ರೀ ರವಿಶಂಕರ್ ವಿದ್ಯಾಮಂದಿರ ಸಂಸ್ಥೆಯಲ್ಲಿ ಶಿಕ್ಷಣ ಪಡೆಯುತ್ತಿರುವ ಕೊಡಗಿಹಳ್ಳಿಯ ಸೌಜನ್ಯ ಮಂಜುನಾಥ್ ಹಾಗೂ ಶಶಾಂಕ್ ಮಂಜುನಾಥ್ ನಿರಂತರ ಪರಿಶ್ರಮದ ಮೂಲಕ ಅತ್ಯುತ್ತಮ ಸಾಧನೆ ಮಾಡಿದ್ದು, ಅಕ್ಕ-ತಮ್ಮನ ಈ ಸಾಧನೆ ಕಂಡು ಶಾಲಾ ಆಡಳಿತ ಮಂಡಳಿ, ಮುಖಂಡರು, ಪೋಷಕರು ಹಾಗೂ ಪೋಷಕರಾದ ತಂದೆ ಮಂಜುನಾಥ್ ಮತ್ತು ತಾಯಿ ಕವಿತಾ, ಸ್ನೇಹಿತರು ಸಂತೋಷ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.ಪೋಟೋ 7 :