ಕನ್ನಡಪ್ರಭ ವಾರ್ತೆ ಚಾಮರಾಜನಗರ ಪವಿತ್ರ ಯಾತ್ರಾ ಸ್ಥಳ ಮಲೆ ಮಹದೇಶ್ವರ ಬೆಟ್ಟದಲ್ಲಿ ಸ್ವಾಮಿಯ ಸನ್ನಿದಿ ಮತ್ತು ನಾಗಮಲೆಯನ್ನು ಪ್ಲಾಸ್ವಿಕ್ ಮುಕ್ತ ಮಾಡಲು ಕಟ್ಟುನಿಟ್ಟಿನ ಕ್ರಮಕೈಗೊಳ್ಳುವಂತೆ ಮೈಸೂರು ಪರಿಸರ ವಾರಿಯರ್ಸ್ ಗ್ರೂಪ್ನ ಪಿ. ಮಂಜುನಾಥ ಹೇಳಿದರು.
ಮಹದೇಶ್ವರ ಬೆಟ್ಟಕೆ ಪಾದಯಾತ್ರೆ ಬರುವಂತಹ ಭಕ್ತಾದಿಗಳಿಗೆ ಕಾಡು ಪ್ರದೇಶದ ಮಾರ್ಗದಲ್ಲಿ ೨೫೦ ಮೀಟರ್ಗೆ ಒಂದರಂತೆ ಶುದ್ಧ ಕುಡಿಯುವ ನೀರಿನ ಸೌಲಭ್ಯವನ್ನು ಟ್ಯಾಂಕರ್ ಮೂಲಕ ಒದಗಿಸಬೇಕು. ಬೆಟ್ಟಕ್ಕೆ ಬರುವಂತ ಭಕ್ತಾದಿಗಳು ಜೊತೆಗೆ ಒಂದು ತಟ್ಟೆ ಲೋಟ ತರಬೇಕು, ದಾನಿಗಳು ಕೊಡುವ ಆಹಾರ ಪದಾರ್ಥಗಳನ್ನು ಪ್ರಕೃತಿ ಸ್ನೇಹಿ ಬಾಳೆ ಎಲೆ, ಅಡಿಕೆ ತಟ್ಟೆ, ಎಲೆ ಜೊನ್ನೆಗಳಲ್ಲಿ ಸ್ವೀಕರಿಸಿ, ಅಲಲ್ಲಿ ಇಟ್ಟಿರುವು ಕಸದ ಬುಟ್ಟಿಗಳಲ್ಲಿ ಹಾಕಬೇಕು,
ದಾನಿಗಳು ವಿತರಿಸುವ ಆಹಾರ ಪದಾರ್ಥ ನೋಂದಣಿ ಮತ್ತು ಅನುಮತಿ ಅಗತ್ಯವಾಗಿ ಸಂಬಂಧಪಟ್ಟ ಇಲಾಖೆಗಳ ಅನುಮತಿ ಪಡೆಯುವಂತೆ ಕಟ್ಟುನಿಟ್ಟಿನ ಆದೇಶ ನೀಡಬೇಕು. ಅರಣ್ಯ ಪ್ರದೇಶಗಳಲ್ಲಿ ಭಕ್ತಾದಿಗಳಿಗೆ ನೀರು ಆಹಾರ ಪದಾರ್ಥಗಳನ್ನು ಪ್ಲಾಸ್ಟಿಕ್ ಪದಾರ್ಥಗಳಲ್ಲಿ ಹಂಚದಂತೆ, ಬಳಸದಂತೆ ಅನುಮತಿ ನೀಡದಂತೆ, ಕಡ್ಡಾಯವಾಗಿ ಕಾನೂನು ಜಾರಿಗೆ ಬರಬೇಕು ತಪ್ಪಿದರೆ ದಂಡ ವಿಧಿಸಬೇಕು ಆಗ ಮಾತ್ರ ಹಂತ ಹಂತವಾಗಿ ಪ್ಲಾಸ್ಟಿಕ್ ಬಳಕೆ ಕಡಿಮೆಯಾಗುತ್ತದೆ ಎಂದರು.ಜಿಲ್ಲಾಡಳಿತ ಆದೇಶವನ್ನು ಮೀರಿ ಪ್ಲಾಸ್ಟಿಕ್ ವಸ್ತುಗಳ ಮೂಲಕ ಆಹಾರ ಹಂಚುವ ವ್ಯಕ್ತಿಗಳಿಗೆ ಕಾನೂನು ಕ್ರಮ ಕೈಗೊಳ್ಳಬೇಕು, ಮಹಾಶಿವರಾತ್ರಿ ದೀಪಾವಳಿ, ಯುಗಾದಿ ಪ್ರಯುಕ್ತ ಜಿಲ್ಲಾಡಳಿತ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳನ್ನು ನಿರ್ಬಂಧಿಸಿ ಅಪಘಾತ ತಡೆಗೆ ಕ್ರಮ ತೆಗೆದುಕೊಂಡ ರೀತಿ ಪ್ಲಾಸ್ಟಿಕ್ ಮುಕ್ತ ಅಭಿಯಾನಕ್ಕೂ ತೆಗೆದುಕೊಳ್ಳಬೇಕು ಎಂದರು. ಪತ್ರಿಕಾಗೋಷ್ಠಿಯಲ್ಲಿ ಸತೀಶ್ಕುಮಾರ್ ಇದ್ದರು.