ಬಾಗಲಕೋಟೆ ಘಟನೆ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ

KannadaprabhaNewsNetwork |  
Published : Feb 23, 2026, 02:00 AM IST
21ಕೆಡಿವಿಜಿ9, 10-ಬಾಗಲಕೋಟೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಮೆರವಣಿಗೆ ಮೇಲೆ ಕಲ್ಲು, ಚಪ್ಪಲಿ ತೂರಾಟ ನಡೆಸಿದ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದಾವಣಗೆರೆಯಲ್ಲಿ ಶನಿವಾರ ಹಿಂಜಾವೇ ಪ್ರತಿಭಟಿಸಿತು. | Kannada Prabha

ಸಾರಾಂಶ

ಬಾಗಲಕೋಟೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಮೆರವಣಿಗೆ ಮೇಲೆ ಮತಾಂಧರು ಕಲ್ಲು ತೂರಿದ್ದನ್ನು ಖಂಡಿಸಿ ಹಿಂದೂ ಜಾಗರಣ ವೇದಿಕೆಯಿಂದ ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಲಾಯಿತು. ಶ್ರೀ ಜಯದೇವ ವೃತ್ತದಲ್ಲಿ ಹಿಂಜಾವೇ ಮುಖಂಡರು, ಕಾರ್ಯಕರ್ತರು, ಪಾಪಿ ಪಾಕಿಸ್ತಾನಿ ಮನಃಸ್ಥಿತಿಯ ಜಿಹಾದಿಗಳ ವಿರುದ್ಧ ಘೋಷಣೆಗಳನ್ನು ಕೂಗುವ ಮೂಲಕ ಆಕ್ರೋಶ ಹೊರಹಾಕಿದ್ದಾರೆ.

- ಶಿವಾಜಿ ಜಯಂತಿ ಮೆರವಣಿಗೆ ಮೇಲೆ ಕಲ್ಲು, ಚಪ್ಪಲಿ ತೂರಾಟ ಕೃತ್ಯ ಅಕ್ಷಮ್ಯ: ಸತೀಶ ಪೂಜಾರಿ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಬಾಗಲಕೋಟೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಮೆರವಣಿಗೆ ಮೇಲೆ ಮತಾಂಧರು ಕಲ್ಲು ತೂರಿದ್ದನ್ನು ಖಂಡಿಸಿ ಹಿಂದೂ ಜಾಗರಣ ವೇದಿಕೆಯಿಂದ ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಲಾಯಿತು. ಶ್ರೀ ಜಯದೇವ ವೃತ್ತದಲ್ಲಿ ಹಿಂಜಾವೇ ಮುಖಂಡರು, ಕಾರ್ಯಕರ್ತರು, ಪಾಪಿ ಪಾಕಿಸ್ತಾನಿ ಮನಃಸ್ಥಿತಿಯ ಜಿಹಾದಿಗಳ ವಿರುದ್ಧ ಘೋಷಣೆಗಳನ್ನು ಕೂಗುವ ಮೂಲಕ ಆಕ್ರೋಶ ಹೊರಹಾಕಿದರು.

ಹಿಂ.ಜಾ.ವೇ. ಪ್ರಾಂತ್ಯ ಕಾರ್ಯದರ್ಶಿ ಸತೀಶ ಪೂಜಾರಿ ಮಾತನಾಡಿ, ಬಾಗಲಕೋಟೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜ ಜಯಂತಿ ಮೆರವಣಿಗೆ ಹೋಗುವ ವೇಳೆ ಅಲ್ಲಿನ ಮಸೀದಿಯಲ್ಲಿ ನಮಾಜ್ ಸಮಯ ಮುಗಿದಿತ್ತು. ಆದರೂ, ಮೆರವಣಿಗೆ ಆ ಮಾರ್ಗದಲ್ಲಿ ಸಾಗದಂತೆ ತಡೆಯಲು ಪೊಲೀಸರ ಮೂಲಕ ಪ್ರಯತ್ನಿಸಲಾಯಿತು. ಅದು ಸಾಧ್ಯವಾಗದಿದ್ದಾಗ ಮಸೀದಿಯ ಮೌಲ್ವಿ ಕುಮ್ಮಕ್ಕಿನಿಂದ ಮೆರವಣಿಗೆ ಮೇಲೆ ಚಪ್ಪಲಿ, ಕಲ್ಲು ಎಸೆದಿದ್ದಾರೆ ಎಂದು ಆರೋಪಿಸಿದರು.

ಕಲ್ಲೇಟು ಅಲ್ಲಿನ ಉನ್ನತ ಪೊಲೀಸ್ ಅಧಿಕಾರಿಗೂ ಬಿದ್ದು, ರಕ್ತಗಾಯಗಳಾಗಿವೆ. ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಕೆಲವೇ ಕೆಲವರನ್ನು ಬಂಧಿಸಿದರೆ ಸಾಲದು. ರಾಜ್ಯದ ಕಾಂಗ್ರೆಸ್‌ ಸರ್ಕಾರ ತುಷ್ಟೀಕರಣದ ರಾಜಕಾರಣ ಬಿಡಬೇಕು. ಪೊಲೀಸರ ಮೇಲೆ ಹಲ್ಲೆ ಮಾಡುವವರ ಮೇಲೂ ದೂರು ದಾಖಲಿಸಲು ಹಿಂಜರಿಯುವಷ್ಟು ಭಯದ ವಾತಾವರಣವಿದೆ. ಬಾಗಲಕೋಟೆ ಘಟನೆಯಲ್ಲಿ ಮಸೀದಿ ಆಡಳಿತ ಮಂಡಳಿ ಹಾಗೂ ಮೌಲ್ವಿಯನ್ನೇ ಪ್ರಮುಖ ಆರೋಪಿಗಳನ್ನಾಗಿ ಪರಿಗಣಿಸಿ, ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸಬೇಕು ಎಂದು ತಾಕೀತು ಮಾಡಿದರು.

ರಂಜಾನ್ ಸೇರಿದಂತೆ ಮುಸ್ಲಿಮರ ಎಲ್ಲ ಧಾರ್ಮಿಕ ಆಚರಣೆಗಳಿಗೂ ಹಿಂದೂಗಳು ಸಹಕಾರ ಕೊಡುತ್ತಾರೆ. ಇದು ನಮ್ಮಲ್ಲಿರುವ ಸಹಿಷ್ಣುತೆ ಗುಣ. ಆದರೆ ಇದನ್ನೇ ನಮ್ಮ ದೌರ್ಬಲ್ಯ ಅಂತಾ ಭಾವಿಸಬಾರದು. ಈ ದೇಶದಲ್ಲಿ ಇರಬೇಕಾದರೆ ದೇಶದ ಕಾನೂನು ಹಾಗೂ ಎಲ್ಲ ಧರ್ಮದವರನ್ನು ಗೌರವಿಸಬೇಕು. ಆ ರೀತಿ ಗೌರವ ಇಲ್ಲದವರು ಕೂಡಲೇ ಭಾರತ ಬಿಟ್ಟು ಪಾಕಿಸ್ತಾನ, ಆಘ್ಘಾನಿಸ್ತಾನ, ಬಾಂಗ್ಲಾ ದೇಶಕ್ಕೋ ಹೋಗಲಿ ಎಂದು ಸತೀಶ ಪೂಜಾರಿ ಕಿಡಿಕಾರಿದರು.

ಮಾಜಿ ಮೇಯರ್ ಎಸ್.ಟಿ.ವೀರೇಶ, ಮುಖಂಡರಾದ ಪುನೀತ, ಆನಂದ, ಪರಶುರಾಮ, ನವೀನ, ಅವಿನಾಶ, ವಿಶಾಲ್, ನಾಗರಾಜ ಸುರ್ವೆ, ನಾರಾಯಣ, ಚೇತನ, ರಾಘವೇಂದ್ರ, ವೀರೇಶ ಗೌಳಿ ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿದ್ದರು.

- - -

(ಕೋಟ್‌) ಅನೇಕ ಮುಸಲ್ಮಾನರು ಸಾಮಾಜಿಕ ಜಾಲತಾಣಗಳಲ್ಲಿ ಬಾಗಲಕೋಟೆ ಕೃತ್ಯ ಖಂಡಿಸಿರುವುದು ಸ್ವಾಗತಾರ್ಹ. ಅಂತಹ ಮುಸಲ್ಮಾನರ ಜೊತೆ ಹಿಂದೂ ಸಮಾಜವೂ ನಿಲ್ಲುತ್ತದೆ. ಸಮಾಜದ ಶಾಂತಿ ಕದಡುವಂತಹ ಹೀನ ಕೃತ್ಯ ಮಾಡಿದವರ ವಿರುದ್ಧ ದೇಶಭಕ್ತ ಮುಸಲ್ಮಾನರೂ ಧ್ವನಿ ಎತ್ತಬೇಕು.

- ಸತೀಶ ಪೂಜಾರಿ, ಮುಖಂಡ, ಹಿಂ.ಜಾ.ವೇ. - - -

-21ಕೆಡಿವಿಜಿ9, 10: ಬಾಗಲಕೋಟೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಮೆರವಣಿಗೆ ಮೇಲೆ ಕಲ್ಲು, ಚಪ್ಪಲಿ ತೂರಾಟ ನಡೆಸಿದ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿ ದಾವಣಗೆರೆಯಲ್ಲಿ ಶನಿವಾರ ಹಿಂ.ಜಾ.ವೇ. ಪ್ರತಿಭಟಿಸಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅದೃಶ್ಯ ಜನಾಂಗ ಪ್ರಜಾಪ್ರಭುತ್ವಕ್ಕೆ ಮಾರಕ: ಡಾ.ಡೊಮಿನಿಕ್
ಫೆ.೨೫ರಂದು ಮಂಡ್ಯದಲ್ಲಿ ಕನ್ನಡ ಮೊದಲು ಆಟೋ ರ್‍ಯಾಲಿ