ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಮೂರು ಸುತ್ತುಗಳಲ್ಲಿ ನಡೆದ ಅಂತಿಮ ಪಂದ್ಯದಲ್ಲಿ ಮೊದಲ ಸೆಟ್ಟಿನಲ್ಲಿ ೧೪-೨೫ ಅಂಕಗಳಿಂದ ಹಿನ್ನೆಡೆ ಅನುಭವಿಸಿದ್ದ ತಮಿಳುನಾಡು ತಂಡ ನಂತರ ೨೫- ೨೩ ಅಂಕಗಳಿಸಿ ಸಮಬಲದ ಹೋರಾಟ ನೀಡಿ ಅಂತಿಮ ಸೆಟ್ಟಿನಲ್ಲಿ ೨೫- ೨೧ ಅಂಕಗಳಿಂದ ಗೆಲುವನ್ನು ತಮ್ಮದಾಗಿಸಿಕೊಂಡಿತು.ಮೂರು ದಿನಗಳಿಂದ ಕಿಕ್ಕಿರಿದು ನೆರೆದಿದ್ದ ಪ್ರೇಕ್ಷಕರು ತಮ್ಮ ನೆಚ್ಚಿನ ಆಟಗಾರರ ಆಟವನ್ನು ನೋಡುವುದರ ಜೊತೆಗೆ ಆಟಗಾರರ ಹೆಸರನ್ನು ಕೂಗುತ್ತಾ ಆಟಕ್ಕೆ ಹೆಚ್ಚು ಪ್ರೋತ್ಸಾಹ ನೀಡುತ್ತಿದ್ದುದು ಕಂಡುಬಂತು. ಮೂರು ಮತ್ತು ನಾಲ್ಕನೇ ಸ್ಥಾನಕ್ಕೆ ಮುಂಬೈ ತಂಡ ಹಾಗೂ ಹಿರೀಸಾವೆ ಅಣ್ಣಯ್ಯ ತಂಡ ೩೦ ಅಂಕಗಳ ಒಂದು ಸೆಟ್ನಲ್ಲಿ ಮುಂಬೈ ತಂಡ ಗೆಲುವು ಸಾಧಿಸಿತು.
ಅಂತಿಮ ಪಂದ್ಯ ವೀಕ್ಷಿಸಲು ಆಗಮಿಸಿದ್ದ ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಶಿವಲಿಂಗೇಗೌಡ ಆಟಗಾರರಿಗೆ ಅಭಿನಂದನೆ ತಿಳಿಸಿದರು. ಮಾಜಿ ವಿಧಾನ ಪರಿಷತ್ ಸದಸ್ಯ ಗೋಪಾಲಸ್ವಾಮಿ ಹಾಗೂ ಕಾಂಗ್ರೆಸ್ ಮುಖಂಡರು ಆಟಗಾರರನ್ನ ಹಾಗೂ ಸಂಘಟಕರನ್ನು ತೀರ್ಪುಗಾರರನ್ನ ಅಭಿನಂದಿಸಿದರು.ಉದ್ಘಾಟನೆಯಲ್ಲಿ ಭಾಗವಹಿಸಿದ್ದ ಮಾಜಿ ಶಾಸಕ ಸಿ. ಎಸ್ ಪುಟ್ಟೇಗೌಡ ಮಾತನಾಡಿ, ರಾಜಕಾರಣದಲ್ಲಿ ದ್ವೇಷ, ಅಸೂಯೆ ಹೆಚ್ಚಿರುವ ದಿನಗಳಲ್ಲಿ, ಅವುಗಳನ್ನು ತಮ್ಮ ರಾಜಕೀಯ ಜೀವನುದ್ದಕ್ಕೂ ಮೈಗಂಟಿಸಿಕೊಳ್ಳದೇ ೫ ದಶಕಗಳಿಗೂ ಹೆಚ್ಚು ಕಾಲ ಉತ್ತಮ ರಾಜಕಾರಣಿಯಾಗಿದ್ದವರು ಮಾಜಿ ಸಚಿವ ಎಚ್.ಸಿ.ಶ್ರೀಕಂಠಯ್ಯನವರು ಎಂದು ತಿಳಿಸಿದರು.ರಾಜಕೀಯವಾಗಿ ಅವರನ್ನು ಹತ್ತಿರದಿಂದ ಬಲ್ಲವನು ನಾನು, ಅವರ ಎದುರು ಸೋತವನು, ಗೆದ್ದವನು, ನನಗೆ ರಾಜಕೀಯವಾಗಿ ಶಕ್ತಿ ಮತ್ತು ವೈಚಾರಿಕತೆ ಇದೆ ಎಂದರೇ ಅವರ ಒಡನಾಟ ಕಾರಣ. ಅವರ ೧೦೦ನೇ ವರ್ಷದ ಜನ್ಮಶತಮಾನೋತ್ಸವವನ್ನು ಅವರ ಮೊಮ್ಮೊಗ ಕರ್ನಾಟಕ ವಿದ್ಯುತ್ ಕಾರ್ಖಾನೆ ಅಧ್ಯಕ್ಷ ಎಚ್.ಸಿ.ಲಲಿತ್ ರಾಘವ್ ಮತ್ತು ಎಚ್.ಎಸ್.ವಿಜಯಕುಮಾರ್ ಕುಟುಂಬ ಅತ್ಯಂತ ವಿಜೃಂಭಣೆಯಿಂದ ಮಾಡುತ್ತಿದೆ. ಅದಕ್ಕೆ ತಾಲೂಕಿನ ಪ್ರತಿ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು, ಜನಸಾಮಾನ್ಯರು ಸಹಕಾರ ನೀಡಬೇಕು. ಈಗಾಗಲೇ ಯುವಕರಿಗೆ ಕೌಶಲ್ಯ ತರಬೇತಿ, ಸ್ಪೀಕಿಂಗ್ ಕೋಸ್ನಂತಹ ತರಬೇತಿ ನೀಡುತ್ತಿದ್ದು, ಯುವಕರನ್ನು ಕ್ರೀಡೆಯತ್ತ ಆಸಕ್ತಿ ಮೂಡಿಸುವ ಸಲುವಾಗಿ ರಾ?ಮಟ್ಟದ ವಾಲಿಬಾಲ್ ಪಂದ್ಯಾವಳಿ ಅಯೋಜಿಸಿದ್ದು ಅವರ ಪ್ರಯತ್ನಕ್ಕೆ ಶುಭವಾಗಲಿ ಎಂದರು.