ಕನ್ನಡಪ್ರಭ ವಾರ್ತೆ ಕೋಲಾರ
ಮಕ್ಕಳಲ್ಲಿ ಕಲಿಕಾಸಕ್ತಿ ಬೆಳೆಸುವ ಕಾಯದದ ಒತ್ತಡದಲ್ಲೇ ಸದಾ ಮಗ್ನರಾಗಿರುವ ಶಿಕ್ಷಕರ ಪ್ರತಿಭಾ ಪ್ರದರ್ಶನಕ್ಕೆ ಸಹಪಠ್ಯ ಚಟುವಟಿಕೆ ಉತ್ತಮ ವೇದಿಕೆಯಾಗಿದೆ, ಇಲ್ಲಿ ಹೊರ ಬರುವ ಪ್ರತಿಭೆಗೆ ಪುರಸ್ಕಾರ ಸಿಗುತ್ತದೆ ಆದರೆ ಅದೇ ಪ್ರತಿಭೆ ಮಕ್ಕಳಿಗೆ ನೀವು ಧಾರೆಯೆರೆದಾಗ ಸಿಗುವ ಸಂತೃಪ್ತಿ ಹೆಚ್ಚಿನದು ಎಂದರು. ಡಿಡಿಪಿಐ ಕಚೇರಿಯ ವಿಷಯ ಪರಿವೀಕ್ಷಕ ಶಂಕರೇಗೌಡ ಮಾತನಾಡಿ, ಮಕ್ಕಳಿಗಾಗಿ ಪ್ರತಿಭಾ ಕಾರಂಜಿ ಸಾಮಾನ್ಯ ಅದರೆ ಈಗ ನಡೆಯುತ್ತಿರುವುದು ಶಿಕ್ಷಕರ ಪ್ರತಿಭಾ ಕಾರಂಜಿ, ಇಲ್ಲಿ ನಿಮ್ಮಲ್ಲಿ ಅಡಗಿರುವ ಪ್ರತಿಭೆ ಕಾರಂಜಿಯಾಗಿ ಹೊರ ಬರಬೇಕು, ಅದಕ್ಕೆ ಪುರಸ್ಕಾರ ಸಿಗಲಿದೆ, ಜತೆಗೆ ಇದೇ ಪ್ರತಿಭೆಯನ್ನು ಶಾಲೆಯಲ್ಲಿ ನಿಮ್ಮನ್ನು ನಂಬಿರುವ ಮಕ್ಕಳಿಗೆ ಹರಿಸಬೇಕು ಎಂದರು.ಸ್ಪರ್ಧೆಗಳ ನೋಡಲ್ ಅಧಿಕಾರಿ ಸಮೀವುಲ್ಲಾ ಮಾತನಾಡಿದರು. ಕಾರ್ಯಕ್ರಮದಲ್ಲಿ ವಿಷಯ ಪರಿವೀಕ್ಷಕಿ ಬಬಿತಾ, ಇಸಿಒಗಳಾದ ಮುನಿರತ್ನಯ್ಯಶೆಟ್ಟಿ, ರಾಧಾ, ನಂಜುಂಡಗೌಡ, ನಾಗರಾಜ್, ತಾಲ್ಲೂಕು ಸಹಶಿಕ್ಷಕರ ಸಂಘದ ಅಧ್ಯಕ್ಷ ನಾರಾಯಣರೆಡ್ಡಿ, ಕಾರ್ಯದರ್ಶಿ ಗಂಗಾಧರಮೂರ್ತಿ, ಮುಖ್ಯಶಿಕ್ಷಕ ಸಿದ್ದೇಶ್, ಶಾಲಾ ಶಿಕ್ಷಣ ಇಲಾಖೆ ನೌಕರರ ಸಂಘದ ಮುನಿರಾಜು, ಪ್ರವೀಣ್ ಇದ್ದರು.