ಕನ್ನಡಪ್ರಭ ವಾರ್ತೆ ಗುರುಮಠಕಲ್
ಪಟ್ಟಣದ ನಗರೇಶ್ವರ ಗುಡಿಯಿಂದ ಪ್ರಮುಖ ಬೀದಿಗಳಾದ ಗಂಗಾ ಪರಮೇಶ್ವರಿ ವೃತ್ತ, ನಿಜಶರಣ ಅಂಬಿಗರ ಚೌಡಯ್ಯ ವೃತ್ತ, ಬಸ್ ನಿಲ್ದಾಣ, ಸಾಮ್ರಾಟ್ ವೃತ್ತದ ಮೂಲಕ ಚಪೇಟ್ಲಾ ರಸ್ತೆಯ ಬಾಬುತಲಾರಿ ಜಮೀನಿನಲ್ಲಿ ಆಯೋಜಿಸಿದ್ದ ವೇದಿಕೆಯವರೆಗೆ ರೋಡ್ ಶೋ ಜರುಗಿತು.
ರೋಡ್ ಶೋ ದಲ್ಲಿ ಬಿಜೆಪಿ-ಜೆಡಿಎಸ್ ಧ್ವಜಗಳು ರಾರಾಜಿಸಿದವು. ಜೆಡಿಎಸ್-ಬಿಜೆಪಿ ಕಾರ್ಯಕರ್ತರು ನೃತ್ಯಗಳ ಮೂಲಕ ಹಾಗೂ ಮೋದಿ ಅವರ ಹಾಡುಗಳನ್ನು ಪ್ರದರ್ಶಿಸುವ ಮೂಲಕ ಜನಮನ ಸೆಳೆದರು.ಈ ವೇಳೆಯಲ್ಲಿ ಬಿಜೆಪಿ ಅಭ್ಯರ್ಥಿ ಉಮೇಶ ಜಾಧವ, ರಾಜ್ಯ ಬಿಜೆಪಿ ಕಾರ್ಯದರ್ಶಿ ಲಲಿತಾ ಅನಪೂರ, ನಿತಿನ್, ಗುತ್ತೇದಾರ, ಬಾಲರಾಜ ಗುತ್ತೇದಾರ್, ದೇವೇಂದ್ರನಾಥ ಸೇರಿದಂತೆ ಪ್ರಮುಖ ನಾಯಕರು ಇದ್ದರು.