ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
21ಕ್ಕಿಂತ ಹೆಚ್ಚಿನ ಮಕ್ಕಳು ಯುವಕರು ಹಾಗೂ ಪರಂಪರೆ ಪರಿವಾರದವರು ಚಾಮರಾಜನಗರ, ಮೈಸೂರು ಹಾಗೂ ಮಂಡ್ಯ ಜಿಲ್ಲೆಗಳ 21 ತಾಲೂಕುಗಳಲ್ಲಿ ಸಂಚರಿಸಿ ಅಧ್ಯಯನ ನಡೆಸಿ ಪೂವನಹಳ್ಳಿಯಲ್ಲಿ ಮುಕ್ತಾಯಗೊಳಿಸಿದರು.
ರೈತ ಸಂಘದ ಜಿಲ್ಲಾ ಮಾಜಿ ಅಧ್ಯಕ್ಷ ಮುದುಗೆರೆ ಎಂ.ವಿ.ರಾಜೇಗೌಡ ಮಾತನಾಡಿ, ಗ್ರಾಮಗಳು ಅಭಿವೃದ್ಧಿಯಾಗಲು ರೈತಾಪಿ ವಿದ್ಯಾವಂತ ಮಕ್ಕಳು ನಗರಗಳತ್ತ ಮುಖ ಮಾಡದೆ ತಮ್ಮ ನೆಲೆಯಲ್ಲೇ ಗುಡಿ ಕೈಗಾರಿಕೆಗಳನ್ನು ಸ್ಥಾಪಿಸಬೇಕು. ಸರ್ಕಾರ ರೈತ ಮಕ್ಕಳ ಸ್ವಯಂ ಉದ್ಯೋಗಕ್ಕೆ ವಿಶೇಷವಾದ ಸಹಾಯಧನ ಯೋಜನೆ ರೂಪಿಸಬೇಕು ಎಂದರು.ರೈತರ ಮಕ್ಕಳ ವಲಸೆ ಮುಂದಿನ ದಿನಗಳಲ್ಲಿ ದೇಶದ ಆಹಾರ ಭದ್ರತೆಯ ಮೇಲೆ ಗಂಭೀರ ದುಷ್ಪರಿಣಾಮ ಬೀರಲಿದೆ. ಇದರ ಅರಿವಿಲ್ಲದ ರಾಜಕಾರಣಿಗಳು ನಗರೀಕರಣಕ್ಕೆ ಹೆಚ್ಚು ಆಸಕ್ತಿ ವಹಿಸಿ ಗ್ರಾಮೀಣ ಪ್ರದೇಶಗಳನ್ನು ನಿರ್ಲಕ್ಷಿಸುತ್ತಿದ್ದಾರೆ. ಕೃಷಿ ಉಳಿದರೆ ಮಾತ್ರ ಹಸಿವು ಮುಕ್ತ ಭಾರತ ನಿಮಾಣ ಸಾಧ್ಯ ಎಂದರು.
ರೈತರು ತಮ್ಮ ಬೇಸಾಯ ಪದ್ಧತಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕು. ಕಡಿಮೆ ಖರ್ಚಿನ ಸಾವಯವ ಕೃಷಿ ಅಭಿವೃದ್ಧಿಯತ್ತ ಮುಖ ಮಾಡಿ ನಮ್ಮ ಪಾರಂಪರಿಕ ಕೃಷಿಯತ್ತ ಮನಸ್ಸು ಮಾಡಬೇಕು. ಈ ನಿಟ್ಟಿನಲ್ಲಿ ಅನುಭವ ಮಂಟಪದ ಸಂಘಟಕರು ಉತ್ತಮವಾದ ಕಾರ್ಯಕ್ರಮವನ್ನು ಭವಿಷ್ಯದ ಪ್ರಜೆಗಳಾದ ಮಕ್ಕಳಿಗೆ ರೂಪಿಸಿರುವುದು ಉತ್ತಮ ಕೆಲಸ ಎಂದರು.
ಮಹಾರಾಷ್ಟ್ರದ ಫಲ್ಗುಣಿ ವಿಂಗ್ ಫೌಂಡೇಷನ್ ಸದಸ್ಯರು, ಬೆಂಗಳೂರಿನ ಗಾಂಧಿಭವನದ ಅಭಿದಬೇಗಂ, ಉಪನ್ಯಾಸಕ ಕತ್ತರಘಟ್ಟ ವಾಸು, ಪರಂಪರೆ ಪರಿವಾರದ ಸುಪ್ರೀತ್, ರೂತ್ ಜಾಕ್ಟಿನ್, ಆಯುಷ್ಮನ್, ನವೀನ್, ಶಿವಕುಮಾರ್, ಮಹೇಶ್ ಸಾಕ್ರೆ, ಶಾಲಿಕ್, ಅಕ್ಷತಾ ಇತರರಿದ್ದರು.