ಕನ್ನಡಪ್ರಭ ವಾರ್ತೆ ಮೈಸೂರು
ಶಂಕರ ಜಯಂತಿ ಅಂಗವಾಗಿ ರಾಮಕೃಷ್ಣ- ಶಾರದಾದೇವಿ ವಿಪ್ರ ವೃಂದವು ಆಯೋಜಿಸಿದ್ದ ಶಂಕರ ಮೂರ್ತಿಯ ಮೆರವಣಿಗೆಗೆ ರಾಮಕೃಷ್ಣ ಪರಮಹಂಸ ವೃತ್ತದಲ್ಲಿ ಸೋಮವಾರ ಚಾಲನೆ ನೀಡಿ ಮಾತನಾಡಿದ ಅವರು, ಕಾಲ್ನಡಿಗೆಯಲ್ಲಿ ದೇಶ ಪರ್ಯಟನೆ ಮಾಡಿ ಹಿಂದೂ ಧರ್ಮ ಪುನರುತ್ಥಾನಗೊಳಿಸಿದರು. ಇಂದು ರಾಮಾನುಜರು ಅವತರಿಸಿದ ದಿನ ಕೂಡ, ಇಂತಹ ಪುಣ್ಯ ದಿನದಂದು ರಾಮಕೃಷ್ಣ - ಶಾರದಾದೇವಿನಗರ ಭಾಗದಲ್ಲಿ ವಿಪ್ರರು ಒಂದಾಗಿ ಸಮಸ್ತ ಹಿಂದೂಗಳನ್ನು ಒಗ್ಗೂಡಿಸಿ ಧರ್ಮದ ಕೆಲಸ ಮಾಡಬೇಕು ಎಂದು ಕರೆ ನೀಡಿದರು.
ಶಂಕರಾಚಾರ್ಯರ ಮೂರ್ತಿಯೊಂದಿಗೆ ಹರ ಹರ ಶಂಕರ ಜಯ ಜಯ ಶಂಕರ ಘೋಷಣೆಯೊಂದಿಗೆ ಮೆರವಣಿಗೆಯು ರಾಮಕೃಷ್ಣನಗರದ ಐ ಬ್ಲಾಕ್ ಮುಖ್ಯ ರಸ್ತೆಗಳಲ್ಲಿ ಸಾಗಿ, ಶಾರದಾದೇವಿನಗರದ ನಮೋ ಉದ್ಯಾನವನದಲ್ಲಿ ಅಂತ್ಯವಾಯಿತು.ನಂತರ ವೇದವ್ಯಾಸ ಭಜನಾ ಮಂಡಳಿ, ಶಾರದಾದೇವಿ ಮಹಿಳಾ ಸಮಾಜ, ಶ್ರೀದೇವಿ ಮಹಿಳಾ ಸಮಾಜ ಸೇರಿದಂತೆ ಮಹಿಳಾ ಭಕ್ತರು ಶಂಕರರ ಸ್ತೋತ್ರಗಳ ಪಾರಾಯಣ, ಭಜನೆಗಳನ್ನು ಹಾಡಿದರು. ತದನಂತರ ಪ್ರಸಾದ ವಿನಿಯೋಗಿಸಲಾಯಿತು.
ಮೈಸೂರು: ಶ್ರೀರಾಂಪುರದಲ್ಲಿರುವ ಉತ್ತರಾದಿ ಮಠದ ಶ್ರೀವೆಂಕಟೇಶ್ವರ ಧ್ಯಾನ ಕೇಂದ್ರದ ವಾರ್ಷಿಕೋತ್ಸವದ ಪ್ರಯುಕ್ತ ಮೇ16 ರಿಂದ 22 ರವರೆಗೆ ವಿದ್ವಾಂಸರಾದ ಪಂಡಿತ್ ಶ್ರೀಬಾದರಾಯಣಾಚಾರ್ಯರಿಂದ ಅಖಂಡ ಭಾಗವತ ಸಪ್ತಾಹವನ್ನು ಏರ್ಪಡಿಸಲಾಗಿದೆ.
ಮೇ 16ರ ಬೆಳಗ್ಗೆ 7.30ಕ್ಕೆ ಶಾಸ್ತ್ರೋಕ್ತವಾದ ಸಪ್ತಾಹ ಕ್ರಮದಲ್ಲಿ ಕಲಶಸ್ಥಾಪನೆ ನಂತರ ಬೆಳಗ್ಗೆ 8.30 ರಿಂದ 11.30 ರವರೆಗೆ ಹಾಗೂ ಮಧ್ಯಾಹ್ನ 3.30 ರಿಂದ 6 ರವರೆಗೆ ಭಾಗವತ ಉಪನ್ಯಾಸ ಆಯೋಜಿಸಲಾಗಿದೆ. ಮೇ 23 ರಂದು ವಾರ್ಷಿಕೋತ್ಸವದ ಪ್ರಯುಕ್ತ ಬೆಳಗ್ಗೆ 7.30ಕ್ಕೆ ಶ್ರೀವೆಂಕಟೇಶ್ವರ ದೇವರಿಗೆ ನಿರ್ಮಾಲ್ಯ ವಿಸರ್ಜನೆ ನಂತರ ಕಲಶಾಭಿಷೇಕ, ವಿಶೇಷ ಪಂಚಾಮೃತ ಅಭಿಷೇಕ, ನಾರಾಯಣ ಮಂತ್ರ ಮತ್ತು ಅಷ್ಟಾಕ್ಷರ ಮಹಾಮಂತ್ರದ ಹೋಮ ಶ್ರೀಮದ್ಭಾಗವತ ಮಂಗಳ ಮಹೋತ್ಸವ ನಡೆಯಲಿದೆ. ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ಮಠದ ವ್ಯವಸ್ಥಾಪಕ ಹೇಮಂತಾಚಾರ್ ಗುಡಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ಮೊ. 81472 05326 ಸಂಪರ್ಕಿಸಬಹುದು.