ಹೊಸಕೋಟೆ: ಕನ್ನಡ ಸಾಹಿತ್ಯ ಲೋಕಕ್ಕೆ ರಂಗಭೂಮಿ ನಾಟಕ ಕಲೆಯ ಕೊಡುಗೆ ಅಪಾರವಾಗಿದ್ದು ರಂಗಭೂಮಿ ಕಲೆಯನ್ನು ಉಳಿಸಿ ಬೆಳೆಸಬೇಕು ಎಂದು ಜಿಲ್ಲಾ ಕಸಾಪ ನಿಕಟಪೂರ್ವ ಕಾರ್ಯದರ್ಶಿ ನಟರಾಜ್ ಎಂಎನ್ಆರ್ ತಿಳಿಸಿದರು.
ಕರುನಾಡಿನ ಕಲಾಪ್ರಕಾರಗಳಗಲ್ಲಿ ಗಂಡು ಕಲೆ ಎನಿಸಿಕೊಂಡಿರುವ ರಂಗಭೂಮಿ ನಾಟಕದ ಕೊಡುಗೆಯೂ ಕನ್ನಡ ಭಾಷೆ ಸಾಹಿತ್ಯಕ್ಕೆ ಹೆಚ್ಚಿನ ಮೆರಗನ್ನು ತಂದಿದ್ದು ನಾಟಕಗಳಲ್ಲಿ ಕನ್ನಡ ಭಾಷೆಯ ಪದಪುಂಜಗಳನ್ನು ಶ್ರೀಮಂತಗೊಳಿಸುತಿದ್ದು ಗ್ರಾಮೀಣ ಭಾಗದ ಅವಿದ್ಯಾವಂತರು ವಿದ್ಯಾವಂತರೂ ಕೂಡ ಸಾಹಿತ್ಯವನ್ನು ನಿತ್ಯ ಜೀವನದಲ್ಲಿ ಜನರು ಬಳಸುವಂತಾಗಬೇಕು. ಎಂದರು.
ಕಲಾವಿದರ ಸಂಘದ ಅಧ್ಯಕ್ಷರಾದ ಬಿವಿ ದೇವರಾಜ್ ಮಾತನಾಡಿ ಕಲಾವಿದರ ಸಂಘದಿAದ ನಾಡ ಹಬ್ಬ ರಾಷ್ಟ್ರೀಯ ಹಬ್ಬಗಳನ್ನು ಆಚರಿಸುವ ಮೂಲಕ ಕಲಾಪೋಷಣೆ ಮಾಡುವುದರ ಜೊತೆಗೆ ಕಲಾವಿದರನ್ನು ಗುರುತಿಸಿ ವೇದಿಕೆ ನೀಡುವುದರ ಜೊತೆಗೆ ಎಲೆಮರೆಕಾಯಂತಾಗಿರುವ ಕಲಾವಿದರನ್ನು ಸನ್ಮಾನಿಸಿ ಅನಾರೋಗ್ಯ ಪೀಡಿತ ಕಲಾವಿದರಿಗೆ ಆರ್ಥಿಕ ನೆರವು ನೀಡಿ ನಿಧನರಾದ ಕಲಾವಿದರ ಕುಟುಂಬಕ್ಕೆ ಮರಣ ನಿಧಿಯನ್ನು ನೀಡುತಿದ್ದು ಇಂದು ಕನ್ನಡ ಸಾಹಿತ್ಯವನ್ನು ಎತ್ತಿಹಿಡಿಯುತ್ತಿರುವವರಲ್ಲಿ ರಂಗಭೂಮಿ ಕಲಾವಿದರು ಅಗ್ರಮಾನ್ಯರು ಎಂದರು.ಈ ಸಂದರ್ಭದಲ್ಲಿ ನಾಟಕ ನಿರ್ದೇಶಕರಾದ ಮಂಡಿಬೆಲೆ ಕೇಶವಪ್ಪ ಸೇರಿದಂತೆ ಹಲವು ಕಲಾವಿದರನ್ನು ಸನ್ಮಾನಿಸಲಾಯಿತು.
ಫೋಟೋ: 16 ಹೆಚ್ಎಸ್ಕೆ 2
ಹೊಸಕೋಟೆ ನಗರದ ಅಂಭೇಡ್ಕರ್ ಭವನದಲ್ಲಿ ಕಲಾವಿದರ ಸಂಘ ಮತ್ತು ರವಿಸುತ ಕೃಪಾಪೋಷಿತ ನಾಟಕ ಮಂಡಳಿಯಿAದ 70 ನೇ ಕನ್ನಡ ರಾಜ್ಯೋತ್ಸವ ಅಂಗವಾಗಿ ನಡೆದ ರಾಜಸತ್ಯವ್ರತ ಅಥವಾ ಶನಿಪ್ರಭಾವ ನಾಟಕ ಕಾರ್ಯಕ್ರಮದಲ್ಲಿ ಕಲಾವಿದರನ್ನು ಗೌರವಿಸಲಾಯಿತು.