ಕನ್ನಡಪ್ರಭ ವಾರ್ತೆ ಹಾಸನ
ಸಿಎಂ ಸಿದ್ದರಾಮಯ್ಯ ಅವರಿಗೆ ಬಿಗ್ ರಿಲೀಫ್ ವಿಚಾರ ಹಾಸನ ತಾಲೂಕಿನ ಅಟ್ಟಾವರ ಗ್ರಾಮದಲ್ಲಿ ಶುಕ್ರವಾರ ಶ್ರೀ ಬೀರಲಿಂಗೇಶ್ವರ ದೇವಾಲಯದ ಜೀರ್ಣೋದ್ಧಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮುಡಾ ಹಗರಣವನ್ನು ಏತಕ್ಕಾಗಿ ಸಿಬಿಐಗೆ ಕೊಡಬಾರದು ಎಂಬುದನ್ನು ಹೈಕೋರ್ಟ್ ಆದೇಶದಲ್ಲೇ ಹೇಳಿದೆ, ಲೋಕಾಯುಕ್ತ ಕೂಡ ಸ್ವತಂತ್ರವಾಗಿ ಕೆಲಸ ಮಾಡುತ್ತಿದೆ ಎಂದು ಕೋರ್ಟ್ ಕೂಡ ಒಪ್ಪಿಕೊಂಡಿದೆ. ಆರೋಪಿಗಳಿಗೆ (ನಾವು) ಇಂತಹದ್ದೇ ತನಿಖಾ ಸಂಸ್ಥೆಗೆ ವಹಿಸಬೇಕು ಎನ್ನುವ ಅಧಿಕಾರ ಇಲ್ಲವೋ ಹಾಗೆಯೇ ದೂರು ಕೊಟ್ಟವರು ಕೂಡ ಇಂಥಾದ್ದೇ ತನಿಖಾ ಸಂಸ್ಥೆಗೆ ವಹಿಸಿ ಎಂದು ಹೇಳಲಾಗುವುದಿಲ್ಲ. ದೂರು ಕೊಡಬೇಕಾದರೆ ಲೋಕಾಯುಕ್ತಕ್ಕೆ ಕೊಡಿ ಅಂತ ಹೇಳಿದ್ದವರು ಈಗ ಲೋಕಾಯುಕ್ತ ಬೇಡ ಸಿಬಿಐಗೆ ಕೊಡಬೇಕು ಎಂದು ಹೇಳುವುದು ಸರಿಯಲ್ಲ, ಸಮಂಜಸವಲ್ಲ ಅಂತ ಕೋರ್ಟ್ ಕೂಡ ಹೇಳಿದೆ. ಲೋಕಾಯುಕ್ತ ತನಿಖೆ ಪಾರದರ್ಶಕ, ನಿಷ್ಪಕ್ಷಪಾತವಾಗಿದೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ. ಹಾಗಾಗಿ ನಮಗೆ ರಿಲೀಫ್ ಸಿಕ್ಕಿದೆ. ಇವತ್ತಿನ ತೀರ್ಮಾನವಷ್ಟೇ ಅಲ್ಲ ಮುಂದಿನ ತೀರ್ಮಾನ ಕೂಡ ನಮ್ಮ ಪರವಾಗಿಯೇ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇ.ಡಿ. ದುರ್ಬಳಕೆ:ಕರ್ನಾಟಕ ರಾಜ್ಯದಲ್ಲಿ ಮಾತ್ರವಲ್ಲ, ಎಲ್ಲಾ ರಾಜ್ಯಗಳಲ್ಲೂ ಕೂಡ ಇ.ಡಿಯನ್ನು ಅಸ್ತ್ರವಾಗಿ ಬಳಸಿಕೊಂಡು ರಾಜಕೀಯ ಎದುರಾಳಿಗಳನ್ನು ತುಳಿಯುವ ಪ್ರಯತ್ನವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ.
ರಾಜ್ಯಪಾಲರ ಮನವೊಲಿಸುತ್ತೇವೆ:
* ಬಾಕ್ಸ್: ಅಶೋಕ್ಗೆ ಜೋತಿಷ್ಯವೇ ಖಾಯಂ ಆಗಲಿದೆ: ಸಿದ್ದರಾಮಯ್ಯ ಅವರು ಸಿಎಂ ಸ್ಥಾನದಿಂದ ಬದಲಾಗುತ್ತಾರೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಈಗಿನಿಂದ ಹೇಳುತ್ತಿಲ್ಲ, ಕಳೆದ ವರ್ಷದಿಂದಲೂ ಹೇಳುತ್ತಲೇ ಇದ್ದಾರೆ. ಮುಂದಿನ ತಿಂಗಳು ಬದಲಾಗ್ತಾರೆ, ಸೆಷನ್ ಮುಗಿದ ಮೇಲೆ ಬದಲಾಗುತ್ತಾರೆ ಅಂಥ ಹೋದ ವರ್ಷದಿಂದಲೂ ಜ್ಯೋತಿಷ್ಯ ಹೇಳಿಕೊಂಡು ಬರುತ್ತಿದ್ದಾರೆ. ಹಾಗಾಗಿ ಅವರು ಜ್ಯೋತಿಷ್ಯ ಹೇಳಿಕೊಂಡು ಬರಲಿ, ಕೊನೆಗೆ ಅದೇ ಕೆಲಸ ಅವರಿಗೆ ಖಾಯಂ ಆಗುತ್ತದೆ ಎಂದು ವ್ಯಂಗ್ಯವಾಡಿದರು.