ಬಲಮುರಿ ಗಣಪತಿ ದೇವಸ್ಥಾನದ 36ನೇ ವಾರ್ಷಿಕೋತ್ಸವ ಸಂಪನ್ನ

KannadaprabhaNewsNetwork |  
Published : Dec 30, 2025, 01:15 AM IST
33 | Kannada Prabha

ಸಾರಾಂಶ

ನವಗ್ರಹ ದೇವತಾ ಹೋಮ, ನಾಗದೇವತಾ ಹೋಮ, ಕುಂಭಾಭಿಷೇಕ

ಕನ್ನಡಪ್ರಭ ವಾರ್ತೆ ಮೈಸೂರುನಗರದ ರೇಲ್ವೆ ನಿಲ್ದಾಣದಲ್ಲಿರುವ ಶ್ರೀ ಬಲಮುರಿ ಗಣಪತಿ ದೇವಸ್ಥಾನದಲ್ಲಿ ಭಾನುವಾರ 36ನೇ ವಾರ್ಷಿಕೋತ್ಸವ ವಿಜೃಂಭಣೆಯಿಂದ ನೆರವೇರಿತು. ವಾರ್ಷಿಕೋತ್ಸವದ ಅಂಗವಾಗಿ ಅಷ್ಠದ್ರವ್ಯ ಸಮೇತ ಶ್ರೀ ಮಹಾಗಣಪತಿ ಹೋಮ, ಸಂತಾನ ದೋಷ ಪರಿಹಾರಕ್ಕಾಗಿ ಮಂಗಳ ಕಾರ್ಯ ಹಾಗೂ ವಿವಿಧ ಹೋಮಗಳು ಶ್ರದ್ಧಾ ಭಕ್ತಿಯಿಂದ ನೆರವೇರಿತು.ಶ್ರೀಬಲಮುರಿ ಗಣಪತಿ, ಅನಂತ ಸುಬ್ರಹ್ಮಣ್ಯ, ದತ್ತಾತ್ರೇಯ ಹಾಗೂ ಐಯ್ಯಪ್ಪ ಸ್ವಾಮಿ ದೇವರಿಗೆ ಮಾಡಿದ್ದ ಆಕರ್ಷಕ ಅಲಂಕಾರಗಳು ಭಕ್ತರ ಕಣ್ಮನ ಸೆಳೆಯಿತು.ಶನಿವಾರ ಸಂಜೆ ಶ್ರೀ ಗಣಪತಿ ಪೂಜೆ, ಪುಣ್ಯಾಹ, ಪಂಚಗವ್ಯ ನಂತರ ಕಳಸ ಸ್ಥಾಪನೆ ಪೂಜಾ ಕಾರ್ಯಕ್ರಮ ನೆರವೇರಿತು. ಅಷ್ಠದ್ರವ್ಯ ಸಮೇತ ಶ್ರೀ ಮಹಾಗಣಪತಿ ಹೋಮಶ್ರೀ ವಿಶ್ವಸುನಾಮ ಸಂವತ್ಸರೇ ದಕ್ಷಿಣಾಯನೇ ಹಿಮಂತ ಪುಷ್ಯ ಮಾಸೇ ಶುಕ್ಲಪಕ್ಷ ನವಮಿ, ರೇವತಿ ನಕ್ಷತ್ರ ಭಾನುವಾರ ಪ್ರಾತಃಕಾಲ ಶ್ರೀ ಮಹಾಗಣಪತಿ ಪೂಜೆ, ಪುಣ್ಯಾಹ, ಕಳಶಸ್ಥಾಪನೆ ನಂತರ ಪರಿವಾರ ದೇವತಾ ಹೋಮಗಳು, ಅಷ್ಠದ್ರವ್ಯ ಸಮೇತ ಶ್ರೀ ಮಹಾಗಣಪತಿ ಹೋಮ, ಶ್ರೀ ಸುಬ್ರಹ್ಮಣ್ಯ ಸ್ವಾಮಿ, ಶ್ರೀ ಧರ್ಮಶಾಸ್ತ್ರ ಹೋಮ, ಶ್ರೀ ಗುರುದತ್ತಾತ್ರೇಯ ಹೋಮ, ಸ್ರೀ ಆಂಜನೇಯ ಹೋಮ, ಶ್ರೀ ಪರಮೇಶ್ವರಸ್ವಾಮಿ ಹೋಮ, ಶ್ರೀ ನವಗ್ರಹ ದೇವತಾ ಹೋಮ, ನಾಗದೇವತಾ ಹೋಮ, ಕುಂಭಾಭಿಷೇಕ ನೆರವೇರಿತು. ನಂತರ ಮಹಾಪೂರ್ಣಾಹುತಿ, ಮಹಾಮಂಗಳಾರತಿ ತೀರ್ಥಪ್ರಸಾದ ವಿನಿಯೋಗವಾಯಿತು. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ವಾರ್ಷಿಕೋತ್ಸವದಲ್ಲಿ ಭಾಗವಹಿಸಿ ಭಗವಂತನ ಕೃಪೆ ಪಾತ್ರರಾದರು.-- ಬಾಕ್ಸ್--

-- ಭಕ್ತರ ಕಣ್ಮನ ಸೆಳೆದ ಅಲಂಕಾರಗಳು--ವಾರ್ಷಿಕೋತ್ಸವದ ಅಂಗವಾಗಿ ದೇವರ ಅಲಂಕಾರ ಭಕ್ತರ ಕಣ್ಮನ ಸೆಳೆಯಿತು. ಶ್ರೀ ಬಲಮುರಿ ಗಣಪತಿಗೆ ದರ್ಬಾರ್ ಅಲಂಕಾರ, ಶ್ರೀ ಅನಂತ ಸುಬ್ರಹ್ಮಣ್ಯ ಸ್ವಾಮಿಗೆ ಕಾಡಿನ ಮಧ್ಯದ ಹುಲ್ಲು ಹಾಸಿನ ಮಧ್ಯ ಕುಳಿತಿರುವುದು, ಶ್ರೀ ದತ್ತಾತ್ರೇಯ ಸ್ವಾಮಿಗೆ ಹೂವಿನ ಅಲಂಕಾರ ಹಾಗೂ ಶ್ರೀ ಅಯ್ಯಪ್ಪಸ್ವಾಮಿಗೆ ಉಯ್ಯಾಲೆಯಲ್ಲಿ ಮಲಗಿರುವ ಅಲಂಕಾರವು ಭಕ್ತರ ಕಣ್ಮನ ಸೆಳೆದು, ಮೆಚ್ಚುಗೆ ವ್ಯಕ್ತಪಡಿಸಿದರು.ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ವಾರ್ಷಿಕೋತ್ಸವದಲ್ಲಿ ಭಾಗವಹಿಸಿ, ಯಶಸ್ವಿಗೆ ಸಹಕರಿಸಿದ್ದಕ್ಕೆ ಪ್ರಧಾನ ಅರ್ಚಕರಾದ ಜಿ.ಎಸ್. ನಾಗೇಶ್ ದೀಕ್ಷಿತ್, ಅರ್ಚಕರಾದ ಎನ್. ನಾಗೇಂದ್ರ ಪ್ರಸಾದ್ ದೀಕ್ಷಿತ್ ಹಾಗೂ ಎನ್. ಹೇಮಂತ್ ಕುಮಾರ್ ದೀಕ್ಷಿತ್ ಕೃತಜ್ಞತೆ ಸಲ್ಲಿಸಿದ್ದಾರೆ..

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಏಕಾದಶಿ ಪ್ರಯುಕ್ತ ಶರವಣ ಟ್ರಸ್ಟ್‌ನಿಂದ ಲಕ್ಷ ಲಡ್ಡು ಹಂಚಿಕೆ
ಹಳೆ ದ್ವೇಷ: ರಸ್ತೆಯಲ್ಲಿ ಅಟ್ಟಾಡಿಸಿ ಅಪ್ಪ, ಮಗನ ಮೇಲೆ ಹಲ್ಲೆ ನಡೆಸಿ ಪರಾರಿ