ವಿಚಾರ ಶಕ್ತಿ ಬೆಳೆಸಿದ ಶರಣರು: ಆವರಗೆರೆ ರುದ್ರಮುನಿ

KannadaprabhaNewsNetwork |  
Published : Sep 09, 2025, 01:00 AM IST
ಮಲೇಬೆನ್ನೂರಲ್ಲಿ ಬಸವ ಸಂಸ್ಕೃತಿ ಅಬಿಯಾನಕ್ಕೆ ಚಾಲನೆ | Kannada Prabha

ಸಾರಾಂಶ

ಬಸವೇಶ್ವರರು ಅಕ್ಷರ ಕ್ರಾಂತಿ ಮೂಡಿಸುವ ಜತೆಗೆ ವಚನಗಳ ಮೂಲಕ ವಿಚಾರ ಶಕ್ತಿಯನ್ನು ಬೆಳೆಸಿದರು ಎಂದು ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಆವರಗೆರೆ ರುದ್ರಮುನಿ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಮಲೇಬೆನ್ನೂರು

ಬಸವೇಶ್ವರರು ಅಕ್ಷರ ಕ್ರಾಂತಿ ಮೂಡಿಸುವ ಜತೆಗೆ ವಚನಗಳ ಮೂಲಕ ವಿಚಾರ ಶಕ್ತಿಯನ್ನು ಬೆಳೆಸಿದರು ಎಂದು ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಆವರಗೆರೆ ರುದ್ರಮುನಿ ಅಭಿಪ್ರಾಯಪಟ್ಟರು.

ಪಟ್ಟಣದ ಡಾ ರಾಜ್‌ಕುಮಾರ್ ಬಡಾವಣೆಯಲ್ಲಿನ ಬಸವ ಮಂಟಪದ ಆವರಣದಲ್ಲಿ ಸೋಮವಾರ ಬಸವ ಸಂಸ್ಕೃತಿ ಅಭಿಯಾನದಲ್ಲಿ ಮಾತನಾಡಿ, ನೂರಾರು ವರ್ಷಗಳ ಹಿಂದೆ ಅನೇಕ ಶರಣರು ಕಾಯಕ ಮಾಡುತ್ತಲೇ ಸಮಾಜದ ಅಂಕು ಡೊಂಕು ತಿದ್ದುತ್ತಲೇ ವಚನಗಳನ್ನು ರಚನೆ ಮಾಡಿದರು. ಆ ಮೂಲಕ ಸಮ ಸಮಾಜವನ್ನು ಸೃಷ್ಠಿ ಮಾಡಿದರು ಎಂದರು.

ಲಿಂಗಾಯತ ಶಬ್ದದ ಹಿಂದೆ ಶಬ್ದವೇ ಇಲ್ಲದ ವೀರಶೈವ ಎಂಬುದು ಸದ್ದಿಲ್ಲದೇ ಸೇರಿಕೊಂಡಿರುವುದು ಸಮಾಜ ಒಡೆಯುವ ಕುತಂತ್ರವಾಗಿದ್ದು ಯಾರೂ ಆ ಸತ್ಯ ಹೇಳುತ್ತಿಲ್ಲ ಎಂದು ಟೀಕೆ ಮಾಡಿದ ರುದ್ರಮುನಿಯವರು ಮಲೇಬೆನ್ನೂರು ಪಟ್ಟಣದಲ್ಲಿ ಬಸವ ಮಂಟಪ ನಿರ್ಮಾಣ ಮಾಡುತ್ತಿರುವುದು ಪಟ್ಟಣದ ನಾಗರಿಕರ ಪುಣ್ಯವಾಗಿದೆ, ಇಲ್ಲಿಂದಲೇ ವಚನಗಳನ್ನು ಹಳ್ಳಿಗಳಿಗೆ ತಲುಪಿಸುವ ಕಾರ್ಯವನ್ನು ಮಾಡೋಣ ಎಂದರು.

ಬಸವ ದಳದ ಮುಖಂಡ ವೈ ನಾರೇಶಪ್ಪ ಮಾತನಾಡಿ ದಾವಣಗೆರೆಯಲ್ಲಿ ಸೆ ೧೫ರಂದು ಬಸವ ಸಂಸ್ಕೃತಿ ಅಭಿಯಾನ ಜರುಗಲಿದ್ದು ಗ್ರಾಮೀಣ ಭಾಗದಲ್ಲಿ ಪ್ರಚಾರ ಮಾಡಲಾಗುತ್ತಿದೆ. ನಾವೆಲ್ಲ ಒಂದು ಬದ್ದತೆಯಿಂದ ಶರಣರಂತೆ ಸೇವಾ ಕಾರ್ಯದಲ್ಲಿ ಸಾಗೋಣ. ಲಿಂಗಾಯತ ಧರ್ಮವನ್ನು ಉಳಿಸಿ ನಾಡಿನ ಎತ್ತರಕ್ಕೆ ಬೆಳೆಸೋಣ ಎಂದರು.

ಪ್ರಚಾರ ಸಮಿತಿಯ ಸದಸ್ಯ ಕಡ್ಲೆಬಾಳು ಪ್ರಕಾಶ್ ಮಾತನಾಡಿ, ಸೆ.೨೨ಕ್ಕೆ ಜಾತಿಯ ಸಮೀಕ್ಷೆ ನಡೆಯುತ್ತಿದೆ, ಯಾವುದೇ ತಪ್ಪು ಮಾಹಿತಿ ಹರಡುವವರ ಮಾತು ಕೇಳದೇ ಜಾತಿ ಕಾಲಂನಲ್ಲಿ ಲಂಗಾಯತ ಎಂದು ಬರೆಸಿ ಉಪ ಜಾತಿಯನ್ನು ದಾಖಲಿಸಿ ಎಂದು ಕರೆ ನೀಡಿದರು.

ಪುರಸಭಾ ಸದಸ್ಯ ಬಿ ವೀರಯ್ಯ ಮಾತನಾಡಿ, ನಮ್ಮ ಗ್ರಾಮೀಣ ಭಾಗದಲ್ಲಿ ಕರಪತ್ರ ಹಂಚಿ ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡಿ ಶರಣರಿಗೆ ಗೌರವ ಸಲ್ಲಿಸೋಣ ಎಂದರು.

ಶರಣರಾದ ವಿಟಿ ಮಂಜುನಾಥ್, ಕುಂದೂರು ಬಸವರಾಜಪ್ಪ, ಗೌಡ್ರ ಮಂಜುನಾಥ್,ಶಿವಾಜಿಪಾಟೀಲ್, ರಾಜೇಶ್ವರಿ, ಶಿವಬಸಮ್ಮ ,ಪ್ರಭುಸ್ವಾಮಿ, ವೈ ರಂಗನಾಥ್, ಬಸವರಾಜಪ್ಪ, ಕೆಜಿ ನಾಗರಾಜ್,ಸದಾನಂದ, ಹಾಗೂ ಅಕ್ಕನ ಬಳಗದ ರಾಜೇಶ್ವರಿ, ಶಿವಬಸಮ್ಮ, ಹೇಮಾ, ರತ್ನಕ್ಕ ಮತ್ತಿತರರು ಇದ್ದರು. ಅಕ್ಕನ ಬಳಗದ ಶರಣೆಯರು ವಚನ ಗೀತೆ ಹಾಡಿದರು.

PREV

Recommended Stories

ಧರ್ಮಸ್ಥಳ: ಬಂಗ್ಲೆಗುಡ್ಡದಲ್ಲಿ ಮತ್ತೆರಡು ತಲೆಬುರುಡೆ ಪತ್ತೆ
ದಸರಾ : ಬೆಂಗಳೂರು ನಗರದಿಂದ ವಿವಿಧೆಡೆ ವಿಶೇಷ ರೈಲು