ಶ್ರೀ ಸ್ವರ್ಣಾಂಬ ದೇವಿಯ ದಿವ್ಯ ರಥೋತ್ಸವ ಸಂಪನ್ನ

KannadaprabhaNewsNetwork |  
Published : Apr 19, 2025, 12:36 AM IST
18ಕೆಕಡಿಯು1 | Kannada Prabha

ಸಾರಾಂಶ

ಕಡೂರು, ಸಮೀಪದ ಮಲ್ಲೇಶ್ವರದ ಶ್ರೀ ಸ್ವರ್ಣಾಂಬ ದೇವಿಯ ದಿವ್ಯ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.

ದೇವಾಲಯದ ಮೂಲಸ್ಥಾನದಲ್ಲಿ ವಿಶೇಷ ಪೂಜೆ

ಕನ್ನಡ ಪ್ರಭ ವಾರ್ತೆ, ಕಡೂರು

ಸಮೀಪದ ಮಲ್ಲೇಶ್ವರದ ಶ್ರೀ ಸ್ವರ್ಣಾಂಬ ದೇವಿಯ ದಿವ್ಯ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.

ಶುಕ್ರವಾರ ಬೆಳಗ್ಗೆ ಶ್ರೀ ಅಮ್ಮನವರ ದೇವಾಲಯದ ಮೂಲಸ್ಥಾನದಲ್ಲಿ ಶ್ರೀ ಸ್ವರ್ಣಾಂಬ ದೇವಿಗೆ ವಿವಿಧ ರೀತಿಯ ಅಭಿಷೇಕಗಳು, ಸಾಂಪ್ರದಾಯಿಕ ವಿಶೇಷ ಪೂಜಾ ಕಾರ್ಯಕ್ರಮಗಳು ನೆರವೇರಿದವು. ಬಳಿಕ ದೇವಾಲಯದಲ್ಲಿನ ಕಲ್ಯಾಣ ಮಂಟಪದಲ್ಲಿ ಕನ್ನಿಕಾ ಪೂಜಾ, ಪುರಸ್ಸರ, ಕಲ್ಯಾಣೋತ್ಸವ ನೆರವೇರಿಕೆ ಬಳಿಕ ಊರಿನ ಪ್ರಮುಖ ಬೀದಿಗಳಲ್ಲಿ ಗ್ರಾಮ ದೇವರುಗಳೊಂದಿಗೆ ಮೆರವಣಿಗೆ ನಡೆಯಿತು.

ಅಮ್ಮನವರು ದೇವಾಲಯದ ಆವರಣಕ್ಕೆ ಮೆರವಣಿಗೆ ಬರುತ್ತಿದ್ದಂತೆ ಮಹಿಳೆಯರು ಅಮ್ಮನವರಿಗೆ ಇಷ್ಟವಾದ ಅರಿಶಿಣ ಕುಂಕುಮ ಎರಚುವ ಮೂಲಕ ದೇವರ ಜೊತೆ ಭಕ್ತರು, ದೇವಾಲಯದ ಪ್ರಾಂಗಣವೇ ಕುಂಕುಮದೊಂದಿಗೆ ತೊಯ್ದು ಹೋಯಿತು. ಆ ಬಳಿಕ ಶ್ರೀ ಅಮ್ಮನವರನ್ನು ಮಧ್ಯಾಹ್ನ12.30ರ ಧನುರ್ ಲಗ್ನದಲ್ಲಿ ರಥಧಲ್ಲಿ ಕೂರಿಸುತಿದ್ದಂತೆ ಸಾವಿರಾರು ಭಕ್ತರು ರಥವನ್ನು ಎಳೆದರು. ಬಿಸಿಲನ್ನು ಲೆಕ್ಕಿಸದೆ ಸೇರಿದ್ದ ಸಾವಿರಾರು ಭಕ್ತರು ಶ್ರೀ ಅಮ್ಮನವರ ದರ್ಶನ ಪಡೆದು ಕುಣಿದು ಕುಪ್ಪಳಿಸಿದರು.

ಶ್ರೀ ಅಮ್ಮನವರ ರಥದ ಕಳಸಕ್ಕೆ ಬಾಳೆಹಣ್ಣು ಎಸೆದು ತೃಪ್ತರಾದರೆ, ನೂತನ ವಧು- ವರರು ಜಾತ್ರೆಯಲ್ಲಿ ಸಂಭ್ರಮದಿಂದ ಭಾಗವಹಿಸಿದ್ದರು. ಭಕ್ತರಿಗೆ ದಾಸೋಹದ ಪ್ರಸಾದ ಕಲ್ಪಿಸಲಾಗಿತ್ತು. ಶಾಸಕ ಕೆ.ಎಸ್ ಆನಂದ್ ರಥೋತ್ಸವದಲ್ಲಿ ಪಾಲ್ಗೊಂಡಿ ದ್ದರು ಜಾತ್ರೆಯ ಶಾಂತಿಗೆ ಭಂಗ ಬಾರದಂತೆ ಕಡೂರು ಪೊಲೀಸ್ ವೃತ್ತ ನಿರೀಕ್ಷಕ ರಫೀಕ್, ಬೀರೂರು ವೃತ್ತ ನಿರೀಕ್ಷಕ ಶ್ರೀಕಾಂತ್, ಕಡೂರು ಪಿಎಸ್ಐಗಳಾದ ಪವನ್ ಕುಮಾರ್, ಧನಂಜಯ ನೇತೃತ್ವದಲ್ಲಿ ಅಗತ್ಯ ಬಂದೋಬಸ್ತ್ ಕಲ್ಪಿಸಲಾಗಿತ್ತು. ದೇವಾಲಯದ ಸಮಿತಿ ಅಧ್ಯಕ್ಷ ಡಾ.ಎಂ.ಟಿ. ಸತ್ಯನಾರಾಯಣ,ಕಾರ್ಯಾಧ್ಯಕ್ಷ ಎಂ.ಟಿ.ಹನುಮಂತಯ್ಯ,ಧರ್ಮಣ್ಣ ಮತ್ತು ಸದಸ್ಯರು ಇದ್ದರು.

18ಕೆಕೆಡಿಯು1.

ಕಡೂರು ಸಮೀಪದ ಮಲ್ಲೇಶ್ವರದ ಶ್ರೀ ಸ್ವರ್ಣಾಂಬ ದೇವಿಯವರ ದಿವ್ಯ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ