ರೈತರು, ವ್ಯಾಪಾರಿಗಳಲ್ಲಿ ಆರ್ಥಿಕ ಶಕ್ತಿ ತುಂಬುವಲ್ಲಿ ಸಂಘದ ಶ್ರಮ ಸಾರ್ಥಕ: ಡಿ.ಆರ್. ಪಾಟೀಲ

KannadaprabhaNewsNetwork |  
Published : Jun 28, 2026, 03:30 AM IST
ಗದಗ-ಬೆಟಗೇರಿಯ ಶ್ರೀಗಾಯತ್ರಿ ಪತ್ತಿನ ಸಹಕಾರ ಸಂಘ ನಿಯಮಿತದ ಶಾಖೆಯ ನೂತನ ಕಟ್ಟಡವನ್ನ ಮಾಜಿ ಶಾಸಕ ಡಿ.ಆರ್.ಪಾಟೀಲ ಉದ್ಘಾಟಿಸಿದರು. | Kannada Prabha

ಸಾರಾಂಶ

ರೈತರು, ಬಡವರು ಹಾಗೂ ವ್ಯಾಪಾರಿಗಳಲ್ಲಿ ಆರ್ಥಿಕ ಶಕ್ತಿ ತುಂಬುವಲ್ಲಿ ಶ್ರೀಗಾಯತ್ರಿ ಪತ್ತಿನ ಸಹಕಾರ ಸಂಘದ ಶ್ರಮ ಸಾರ್ಥಕ ಎಂದು ರಾಜ್ಯ ವಿಕೇಂದ್ರೀಕರಣ ಯೋಜನೆ ಹಾಗೂ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಡಿ.ಆರ್. ಪಾಟೀಲ ಹೇಳಿದರು.

ಗದಗ: ರೈತರು, ಬಡವರು ಹಾಗೂ ವ್ಯಾಪಾರಿಗಳಲ್ಲಿ ಆರ್ಥಿಕ ಶಕ್ತಿ ತುಂಬುವಲ್ಲಿ ಶ್ರೀಗಾಯತ್ರಿ ಪತ್ತಿನ ಸಹಕಾರ ಸಂಘದ ಶ್ರಮ ಸಾರ್ಥಕ ಎಂದು ರಾಜ್ಯ ವಿಕೇಂದ್ರೀಕರಣ ಯೋಜನೆ ಹಾಗೂ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಡಿ.ಆರ್. ಪಾಟೀಲ ಹೇಳಿದರು.

ಬೆಟಗೇರಿಯ ಶ್ರೀಗಾಯತ್ರಿ ಪತ್ತಿನ ಸಹಕಾರ ಸಂಘ ನಿಯಮಿತದ ಶಾಖೆಯ ನೂತನ ಕಟ್ಟಡದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ಹಲವಾರು ದಶಕಗಳ ಹೋರಾಟ, ಸಾಂಘಿಕ ಸಮನ್ವಯತೆ, ನಿರಂತರ ಶ್ರಮ, ಗ್ರಾಮೀಣ ಭಾಗದಲ್ಲಿ ಏನಾದರೂ ಸಾಧಿಸಬೇಕು ಎನ್ನುವ ಛಲ, ಮೂವತ್ತು ವರ್ಷಗಳ ನಿರಂತರ ಪರಿಶ್ರಮ, ನಂಜಯ್ಯನಮಠ, ಎಚ್.ವೈ.ಮೇಟಿ ಅವರಂತಹ ರಾಜಕಾರಣಿಗಳ ಒಡನಾಟ, ನೇಕಾರರ ಬದುಕಿನಲ್ಲಿ ಹೊಸಚೇತನ ತುಂಬುವ ಪ್ರಯತ್ನದಲ್ಲಿ ಸಂಸ್ಥಾಪಕ ಅಧ್ಯಕ್ಷ ರವೀಂದ್ರ ಕಲಬರ್ಗಿ ಅವರ ನೇತೃತ್ವದಲ್ಲಿ ಕೇವಲ ನೇಕಾರರ ಶ್ರೇಯೋಭಿವೃದ್ಧಿಗಾಗಿಯೇ ಆರಂಭಗೊಂಡ ಸಂಘ, ಮುಂದೆ ರೈತರು, ಬಡವರು, ವ್ಯಾಪಾರಿಗಳಿಗೆ ಆರ್ಥಿಕ ಶಕ್ತಿ ತುಂಬುವಲ್ಲಿ ಯಶಸ್ವಿಯಾಯಿತು ಎಂದರು.

ಠೇವುದಾರರ ವಿಶ್ವಾಸ, ಸಾಲಗಾರರ ಪ್ರಾಮಾಣಿಕ ಮರುಪಾವತಿ, ಸಿಬ್ಬಂದಿಯ ಕರ್ತವ್ಯ ನಿಷ್ಠೆ, ನಿರ್ದೇಶಕ ಮಂಡಳಿಯ ಸಹಕಾರ ಮನೋಭಾವ ಒಂದು ಸಂಸ್ಥೆಯ ಜೀವಾಳವಾಗಿದೆ. ಇದೆಲ್ಲವೂ ಶ್ರೀಗಾಯತ್ರಿ ಪತ್ತಿನ ಸಹಕಾರ ಸಂಘ ಆರ್ಥಿಕ ಪ್ರಗತಿ ಸಾಧಿಸುವುದರಲ್ಲಿ ಸಫಲವಾಗಿದೆ ಎಂದು ತಿಳಿಸಿದರು.

ವಿಪ ಶಾಸಕ ಎಸ್.ವಿ. ಸಂಕನೂರ ಮಾತನಾಡಿ, ಆರ್ಥಿಕ ಕ್ಷೇತ್ರದ ಜೊತೆಗೆ ಶಿಕ್ಷಣ ಕ್ಷೇತ್ರದಲ್ಲಿಯೂ ಪ್ರಗತಿ ಸಾಧಿಸುತ್ತಿರುವ ರವೀಂದ್ರ ಕಲಬುರ್ಗಿ ಅವರ ಸೇವೆ ಅಮೋಘ. ಅವರ ಮೇಲಿನ ವಿಶ್ವಾಸದಿಂದ ನಲವತ್ತು ಶಾಖೆಗಳ ಅಂದಾಜು ಠೇವಣಿ ₹300 ಕೋಟಿ ದಾಟುತ್ತಿರುವುದು ಪ್ರಗತಿಯ ದ್ಯೋತಕವಾಗಿದೆ ಎಂದರು.

ಮಾಜಿ ಶಾಸಕ ಎಸ್.ಜಿ. ನಂಜಯ್ಯನಮಠ ಮಾತನಾಡಿ, ಗ್ರಾಮೀಣ ಭಾಗದ ಬಡ ಶಿಕ್ಷಕರ ಮಗ ತನ್ನ ಸಾಧನೆಯ ಮೂಲಕ ನೇಕಾರ ಕುಟುಂಬದ ನೇತಾರನಾಗಿ, ಎಲ್ಲ ವರ್ಗಗಳ ಜನರ ವಿಶ್ವಾಸ ಗಳಿಸಿರುವ ರವೀಂದ್ರ ಕಲಬುರ್ಗಿ ನನ್ನ ಅತ್ಯಂತ ಪ್ರೀತಿಯ ಶಿಷ್ಯ. ಆತನ ಏಳಿಗೆಯಲ್ಲಿ ನನ್ನದೂ ಪಾತ್ರವಿರುವುದು ಸಂತಸದ ಸಂಗತಿ ಎಂದರು.

ಅಧ್ಯಕ್ಷತೆ ವಹಿಸಿದ್ದ ಶ್ರೀಗಾಯತ್ರಿ ಪತ್ತಿನ ಸಹಕಾರ ಸಂಘ ನಿಯಮಿತ ಸೂಳೇಭಾವಿ, ಸಂಸ್ಥಾಪಕ ಅಧ್ಯಕ್ಷ ರವೀಂದ್ರ ಪಿ. ಕಲಬುರ್ಗಿ, ಬೆಟಗೇರಿ ನೀಲಕಂಠ ಮಠದ ನಾಲ್ವಡಿ ನೀಲಕಂಠ ಪಟ್ಟದಾರ್ಯ ಸ್ವಾಮಿಗಳು, ಕೆರೂರ ದೇವಾಂಗಮಠದ ರುದ್ರಮುನಿ ಶಿವಾಚಾರ್ಯರು, ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾ ಮಂಡಳ ನಿರ್ದೇಶಕ ಡಾ. ಸಂಜಯ ಹೊಸಮಠ, ಕೃಷ್ಣಾ ರಾಮದುರ್ಗ ಹಾಗೂ ಕೃಷ್ಣಾ ಬಾಪ್ರಿ ಮಾತನಾಡಿದರು.

ಈ ವೇಳೆ ಲಕ್ಷ್ಮಣ ಆರಿ, ಪಿ.ವೆಂಕಟೇಶ್ವರಲು, ರಾಘವೇಂದ್ರ ನೀಲಗುಂದ, ಶ್ರವಣಕುಮಾರ ಸಿರಗಣ್ಣವರ, ಶ್ರೀನಿವಾಸ ಹುಬ್ಬಳ್ಳಿ, ಅಶೋಕ ಹೊನ್ನಳ್ಳಿ, ಮೋಹನ ಹೊನಗುಡಿ, ದಶರಥ ಕೊಳ್ಳಿ, ಉಮಾಕಾಂತಸಾ ಮೇರವಾಡೆ, ಶರಣಪ್ಪ ಚುರ್ಚಪ್ಪನವರ, ಬೋಜಪ್ಪ ಹೆಗಡೆ, ನರಸಂಹ ಕಾಮಾರ್ತಿ ಹಾಗೂ ಸದಾಶಿವ ಚನ್ನಪ್ಪನವರ ಅವರನ್ನು ಸನ್ಮಾನಿಸಲಾಯಿತು.

ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಗುರಣ್ಣ ಬಳಗಾನೂರ, ನಗರಸಭೆ ಸದಸ್ಯ ರಾಘವೇಂದ್ರ ಯಳವತ್ತಿ, ಶಕುಂತಲಾ ಅಕ್ಕಿ, ಲಕ್ಷ್ಮೀಬಾಯಿ ಕಾಕಿ, ಮಾಧುಸಾ ಮೆಹರವಾಡೆ, ನೇಕಾರರ ಒಕ್ಕೂಟದ ಅಧ್ಯಕ್ಷ ಅನೀಲ ಗಡ್ಡಿ ಸೇರಿದಂತೆ ಇತರರು ಇದ್ದರು. ಹನಮಂತ ಮಾಚಾ ಸ್ವಾಗತಿಸಿದರು. ನಾರಾಯಣ ಮಾಶಾಳ ಹಾಗೂ ಹೇಮಂತ ದುತ್ತರಗಿ ನಿರೂಪಿಸಿದರು. ಶ್ರೀನಿವಾಸ ಹುಬ್ಬಳ್ಳಿ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮೌನಾನುಷ್ಠಾನದಿಂದ ಆತ್ಮಬಲ ವೃದ್ಧಿ: ಬಸವಲಿಂಗ ಶ್ರೀಗಳು
ಕನ್ನಡ ಶಾಲೆ ಮುಚ್ಚಿದರೆ ಸಂಸ್ಕೃತಿ ನಾಶವಾದಂತೆ: ವಾಸರೆ