ಎಸ್.ಎಂ.ಸಯ್ಯದ್ ಗಜೇಂದ್ರಗಡ
ಕಾಮಣ್ಣನ ಮಕ್ಕಳು ಏನನ್ನು ಕದ್ದರು, ಕುಳ್ಳು, ಕಟ್ಟಿಗೆ ಕದ್ದರು ಎಂದು ಹೇಳುತ್ತಾ ಗಲ್ಲಿಗಲ್ಲಿಗಳಲ್ಲಿ ರಾತ್ರಿಯಿಡಿ ಕಳುವು ಮಾಡುವುದು ಹಬ್ಬದ ವಿಶೇಷ. ಹೋಳಿ ಹಬ್ಬದ ವೈಶಿಷ್ಟ್ಯತೆ ಎಂದರೆ ಶಿವನ ತಪ್ಪಸ್ಸನ್ನು ಮನ್ಮಥ ಭಂಗಗೊಳಿಸಿದ ಎನ್ನುವ ಕಾರಣಕ್ಕೆ ಶಿವನ ಸಿಟ್ಟಿಗೆ ಮನ್ಮಥ ಸುಟ್ಟು ಭಸ್ಮವಾದ. ಪರ್ವತ ರಾಜನ ಮಗಳಾದ ಪಾರ್ವತಿಯನ್ನು ವರಿಸಿ ಅದೇ ಮಾರ್ಗವಾಗಿ ಶಿವನು ಬರುವಾಗ ರತಿಯು ಮನ್ಮಥನ ಚಿತಾ ಭಸ್ಮದ ಮುಂದೆ ಅಳುತ್ತಾ ಕುಳಿತಿದ್ದನ್ನು ಕಂಡ ಶಿವನು ರತಿಗೆ ನಿನ್ನ ಪತಿಯ ದೇಹ ದಹಿಸಿದೆಯೇ ಹೊರತು, ಆತ್ಮಕ್ಕಲ್ಲ. ಹೀಗಾಗಿ ಪ್ರತಿವರ್ಷ ಹೋಳಿ ಹಬ್ಬದ ದಿನ ನಿನ್ನ ಪತಿ ಸಾಕಾರ ರೂಪ ಧರಿಸುತ್ತಾನೆ. ನೀನು ಸುಮಂಗಲೆ ಆಗಿರುವೆ ಎಂದು ಹರಸುತ್ತಾನೆ ಎನ್ನುವ ಪ್ರತೀತಿ ಹಿನ್ನೆಲೆಯಲ್ಲಿ ಹೋಳಿ ಹಬ್ಬ ಆಚರಿಸಲಾಗುತ್ತಿದೆ.
ಹೋಳಿ ಹಬ್ಬದಲ್ಲಿ ಚಿಕ್ಕಮಕ್ಕಳು, ಯುವಕರು ತಂಡ ತಂಡವಾಗಿ ಹಲಗೆ ಬಾರಿಸುತ್ತಾ, ಕೃತಕ ಶವ ಮಾಡಿ ಅವರ ಹೆಸರಿನಲ್ಲಿ ಓಣಿಗಳಲ್ಲಿ ಅಳುತ್ತಾ ಬಾಯಿ, ಬಾಯಿ ಬಡೆದುಕೊಂಡು, ಕಾಮಣ್ಣನನ್ನು ಸುಡಲು ಕಟ್ಟಿಗೆ, ಕುಳ್ಳು ಸಂಗ್ರಹಿಸುವರು. ಹುಣ್ಣಿಮೆ ದಿನದ ಸಂಜೆ ಪಟ್ಟಣದ ಅನೇಕ ಬಡಾವಣೆಗಳಲ್ಲಿ ರತಿ, ಕಾಮಣ್ಣರ ಮೂರ್ತಿ ಪ್ರತಿಷ್ಠಾಪಿಸಿದ ಮರುದಿನ ಜೋಡೆತ್ತಿನ ಬಂಡಿಯಲ್ಲಿಟ್ಟು ಮೆರವಣಿಗೆ ನಡೆಸುತ್ತಾರೆ. ಮತ್ತೊಂದು ಬಂಡೆಯಲ್ಲಿ ಕೃತಕ ಶವವನ್ನಿಟ್ಟು ಹತ್ತು ಬೀಗರು, ಕುಲದವರು ಬಂದರು ಎಂದು ಜೋರಾಗಿ ಅತ್ತು ಕರೆದು, ಬಾಯಿ ಬಡೆದುಕೊಳ್ಳುತ್ತಾ, ಪ್ರಮುಖ ಬೀದಿಗಳಲ್ಲಿ ಜನರನ್ನು ಮನರಂಜಿಸಿ ರಾತ್ರಿ ಕಾಮದಹನ ಮಾಡುವುದು ವಾಡಿಕೆ. ಮರುದಿನ ಬೆಳಗ್ಗೆ ರಂಗು ರಂಗಿನ ಬಣ್ಣದ ಓಕುಳಿ ಆಡಿ ಸಂಭ್ರಮಿಸುವುದು ಹೋಳಿ ಹಬ್ಬದ ವಿಶೇಷ.ಇಲ್ಲಿ ಹೋಳಿ ಹಬ್ಬವಿಲ್ಲ;