ಸೋಮವಾರಪೇಟೆ: ತಾಲೂಕಿನ ಗರ್ವಾಲೆ ಗ್ರಾಮದ ಗೀಜಿಗಂಡ ಸಂತೋಷ್ ಎಂಬವರ ಕಾಫಿ ತೋಟಕ್ಕೆ ಆಕಸ್ಮಿಕ ಬೆಂಕಿ ತಗಲಿ ನಷ್ಟವಾದ ಘಟನೆ ಶನಿವಾರ ಸಂಜೆ ನಡೆದಿದೆ.
-----------------
ಇಂದು ಕೊತ್ನಳ್ಳಿ ಶ್ರೀ ಭೈರವಲಿಂಗೇಶ್ವರ ದೇವಳ ಪ್ರತಿಷ್ಠಾಪನಾ ಮಹೋತ್ಸವಸೋಮವಾರಪೇಟೆ: ತಾಲೂಕಿನ ಕೊತ್ನಳ್ಳಿ ಗ್ರಾಮದಲ್ಲಿರುವ ಶ್ರೀ ಭೈರವಲಿಂಗೇಶ್ವರ ಮತ್ತು ವನದುರ್ಗಾ ದೇವಸ್ಥಾನದ ಪ್ರತಿಷ್ಠಾಪನಾ ಮಹೋತ್ಸವ ಸೋಮವಾರ ನಡೆಯಲಿದೆ. ಪ್ರತಿಷ್ಠಾಪನಾ ಮಹೋತ್ಸವ ಅಂಗವಾಗಿ ಈಗಾಗಲೇ ದೇವಾಲಯದಲ್ಲಿ ಗಣಪತಿ ಹೋಮ, ಪುಣ್ಯಹ, ಋತ್ವಗ್ವರಣ ವಾಸ್ತು, ರಾಕ್ಷೋಘ್ನ ಹೋಮ, ವಾಸ್ತು ಪೂಜೆ, ದಿಕ್ ಬಲಿ, ಬಿಂಬಶುದ್ಧಿ, ಅಧಿವಾಸ ಹೋಮ, ಶಯ್ಯದಿಕಲ್ಪ ನೆರವೇರಿವೆ. ಸೋಮವಾರ ಬೆಳಗ್ಗೆ 5 ಗಂಟೆಯಿಂದ ಪ್ರತಿಷ್ಠಾಪನಾ ಹೋಮ, ಕುಂಭ ಲಗ್ನದ ಶುಭಾಂಶದಲ್ಲಿ ಶ್ರೀ ವನದುರ್ಗಾ-ಭೈರವಲಿಂಗೇಶ್ವರ ಸ್ವಾಮಿಯ ಪ್ರತಿಷ್ಠೆ, ಕಲಾಕಳಸ ಪ್ರತಿಷ್ಠೆ, ಕಲಾ ತತ್ವಾದಿ ಹೋಮ, ಕಲಾ ಕಲಶಾಭಿಷೇಕ, ಮಹಾಮಂಗಳಾರತಿ ನೆರವೇರಲಿದೆ.