ಫಕೃದ್ದೀನ್ ಎಂ.ಎನ್.
ಚಳಿಗಾಲ, ಮಳೆಗಾಲದಲ್ಲಿ ಹೊಲಗಳಲ್ಲಿ ಎಲ್ಲಿ ನೋಡಿದರಲ್ಲಿ ಕೆರೆ, ಕಟ್ಟೆಗಳಲ್ಲಿ ನೀರು ಸಂಗ್ರಹವಾಗಿರುತ್ತಿತ್ತು. ಆದರೆ, ಈ ಬಾರಿ ಬಿಸಿಲಿನ ಪ್ರಖರತೆ ಹೆಚ್ಚಾಗಿರುವ ಕಾರಣ ನೀರಿನ ಮೂಲಗಳೆಲ್ಲ ಒಣಗಿ ಹೋಗಿದ್ದು, ಕಾಡಲ್ಲಿ ನೆಲೆಸಿದ್ದ ಮಂಗಗಳು ಗ್ರಾಮಗಳತ್ತ ಲಗ್ಗೆಯಿಡುತ್ತಿರುವುದು ನವಲಗುಂದ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹಳ್ಳಿಕೇರಿ ಗ್ರಾಮಸ್ಥರಿಗೆ ದೊಡ್ಡ ತಲೆ ನೋವಾಗಿ ಪರಿಣಿಮಿಸಿದೆ.
ಗ್ರಾಮದ ಹೊರವಲಯದಲ್ಲಿರುವ ಬೆಟ್ಟದಲ್ಲಿ ಮತ್ತು ಅರಣ್ಯಗಳಲ್ಲಿ ಸದಾಕಾಲ ಇರುತ್ತಿದ್ದ ಕೋತಿಗಳ ಹಿಂಡು ಆಹಾರ ಮತ್ತು ನೀರಿನ ಕೊರತೆಯಿಂದಾಗಿ ಗ್ರಾಮೀಣ ಪ್ರದೇಶಗಳ ಕಡೆಗೆ ವಲಸೆ ಬರುತ್ತಿವೆ. ಮನೆಯ ಮುಂಭಾಗ, ಒಣಗಲು ಹಾಕಿರುವ ಬಟ್ಟೆಗಳನ್ನು ಕಿತ್ತು ಹಾಕುವುದು, ಅವುಗಳ ಮೇಲೆ ಮಲಮೂತ್ರ ವಿಸರ್ಜನೆ ಮಾಡುವುದು, ಮನೆಯೊಳಗೆ ಪ್ರವೇಶಿಸಿ ಹಣ್ಣು ಮತ್ತು ಆಹಾರ ಪದಾರ್ಥಗಳನ್ನು ಎತ್ತಿಕೊಂಡು ಹೋಗುವುದು ಒಂದೆಡೆಯಾದರೆ ಇದನ್ನು ತಡೆಯಲು ಹೋಗುವ ಜನರ ಮೇಲೆ ಮಂಗಗಳು ಮುಗಿ ಬೀಳುವ ಮೂಲಕ ಜನರಲ್ಲಿ ಭಯದ ವಾತಾವರಣ ಸೃಷ್ಟಿಸಿವೆ.ಮನೆಯ ಮುಂದೆ ನಿಲ್ಲಿಸಿದ ದ್ವಿಚಕ್ರ ವಾಹನ, ಕಾರ್, ಟ್ರ್ಯಾಕ್ಟರ್ ಸೇರಿದಂತೆ ಇತರೆ ವಾಹನಗಳ ಮೇಲೆ ಕುಳಿತು ಆಸನ ಕಿತ್ತು ಹಾಕುವುದು, ಗ್ರಾಮದಲ್ಲಿ ಅಳವಡಿಸಲಾಗಿರುವ ಕೇಬಲ್ ವೈರ್ಗಳನ್ನು ಕಿತ್ತು ಹಾಕುತ್ತಿದ್ದು, ಇವುಗಳ ನಿಯಂತ್ರಣಕ್ಕೆ ಹರಸಾಹಸ ಪಡುವಂತಾಗಿದೆ. ಅಷ್ಟೇ ಅಲ್ಲದೇ ಅಂಗಡಿ ಮತ್ತು ತಳ್ಳುವ ಗಾಡಿಗಳಲ್ಲಿನ ಹಣ್ಣು, ತಿಂಡಿ ತಿನಿಸುಗಳನ್ನು ಕಿತ್ತುಕೊಂಡು ಹೋಗುತ್ತಿರುವುದರಿಂದ ವ್ಯಾಪಾರಸ್ಥರು ಇನ್ನಿಲ್ಲದ ತೊಂದರೆ ಅನುಭವಿಸುವಂತಾಗಿದೆ.
ಕೋತಿಗಳ ಸೆರೆ
ಗುರುನಾಥ ಜೋಗಿ, ಪಿಡಿಒ200ಕ್ಕೂ ಅಧಿಕ
- ಪ್ರಭು ಕಮ್ಮಾರ, ಹಳ್ಳಿಕೇರಿ ಗ್ರಾಮಸ್ಥ