ವಸಂತಕುಮಾರ್ ಕತಗಾಲ
ಅಮದಳ್ಳಿ ಜಡಿಗದ್ದಾದಲ್ಲಿ ಗುಡ್ಡದ ಕೆಳಭಾಗದಲ್ಲಿ ಸಾಲಾಗಿ ಮನೆ ನಿರ್ಮಿಸಿಕೊಂಡಿದ್ದಾರೆ. ಗುಡ್ಡದಲ್ಲಿ ಬೃಹತ್ ಕಲ್ಲು ಬಂಡೆಗಳೂ ಇವೆ. ಈ ಗುಡ್ಡ ಕುಸಿಯುವ ಭೀತಿ ಇವರನ್ನು ಕಾಳಜಿ ಕೇಂದ್ರದತ್ತ ಎಳೆದುತಂದಿದೆ.
ಅದೂ ಜು.16ರಂದು ಅಂಕೋಲಾ ತಾಲೂಕಿನ ಶಿರೂರಿನಲ್ಲಿ ಗುಡ್ಡ ಕುಸಿದು 11 ಜನರು ಸಮಾಧಿಯಾದ ಘಟನೆ ಇಡಿ ಜಿಲ್ಲೆಯನ್ನು ತಲ್ಲಣಗೊಳಿಸಿತು. ಸಹಜವಾಗಿ ಗುಡ್ಡದ ಕೆಳಭಾಗದಲ್ಲಿ ಇರುವವರೆಲ್ಲ ಬೆಚ್ಚಿಬಿದ್ದರು. ಅದರಲ್ಲೂ ಅಮದಳ್ಳಿ ಜಡಿಗದ್ದಾದಲ್ಲಿ ಗುಡ್ಡ ಕೊರೆದು ರಸ್ತೆಯನ್ನು ಮಾಡಿರುವುದು ಗುಡ್ಡದ ಬುಡದಲ್ಲೇ ಮನೆ ಇದ್ದವರಿಗೆ ಮನೆಯಲ್ಲೇ ಮಲಗಿದರೂ ನಿದ್ದೆ ಬಾರದ ಪರಿಸ್ಥಿತಿ. ಮುಂಜಾಗರೂಕತಾ ಕ್ರಮವಾಗಿ ಜು. 24ರಂದು ಅಮದಳ್ಳಿ ಜಡಿಗದ್ದಾದ 20-22 ಕುಟುಂಬಗಳನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಯಿತು. ಅಂದಿನಿಂದ ಇಂದಿನ ತನಕ ಮುಂದೇನು ಎಂದು ತಿಳಿಯದೆ ಇವರು ಕಾಳಜಿ ಕೇಂದ್ರದಲ್ಲೇ ವಾಸಿಸುವಂತಾಗಿದೆ.ಹಾಗೋ ಹೀಗೂ ಮಾಡಿ ಸ್ವಂತದ್ದಾದ ಸೂರು ನಿರ್ಮಿಸಿಕೊಂಡರೂ ನಿರಾತಂಕವಾಗಿ ವಾಸ ಮಾಡಲು ಸಾಧ್ಯವಾಗುತ್ತಿಲ್ಲ. ಗಂಜಿ ಬೇಯಿಸಲು, ನಿಶ್ಚಿಂತೆಯಿಂದ ನಿದ್ದೆ ಮಾಡಲು ಸಾಧ್ಯವಾಗುತ್ತಿಲ್ಲ.
ಈ ನಡುವೆ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಕೆ. ಹಾಗೂ ತಹಸೀಲ್ದಾರ ಎನ್.ಎಫ್. ನೊರೋನಾ ಪ್ರಯತ್ನದಿಂದ ಗುಡ್ಡ ಕುಸಿಯುವ ಸಾಧ್ಯತೆ ಇದೆಯೇ. ಇಲ್ಲವೇ ಎನ್ನುವ ಬಗ್ಗೆ ಗ್ರಾಮ ಪಂಚಾಯಿತಿ, ನೌಕಾನೆಲೆ, ಅರಣ್ಯ ಇಲಾಖೆ, ಎಂಜಿನಿಯರಿಂಗ್ ವಿಭಾಗಗಳಿಂದ ಸಂಯುಕ್ತವಾಗಿ ಸಮೀಕ್ಷೆ ನಡೆದಿದೆ. ಈ ಸಮೀಕ್ಷಾ ವರದಿಯ ಮೇಲೆ ಇವರ ಭವಿಷ್ಯ ಅವಲಂಬಿಸಿದೆ. ಸಮೀಕ್ಷೆ
ಎನ್.ಎಫ್. ನೊರೋನ್ನಾ, ತಹಸೀಲ್ದಾರ್