ಅಂಬೇಡ್ಕರ್ , ಬಸವಣ್ಣ, ಬುದ್ಧರ ಆದರ್ಶಗಳು ದಾರಿ ದೀಪ: ನಿರ್ಮಲಾನಂದನಾಥ ಸ್ವಾಮೀಜಿ

KannadaprabhaNewsNetwork |  
Published : Aug 03, 2025, 01:30 AM IST
2ಕೆಎಂಎನ್ ಡಿ20 | Kannada Prabha

ಸಾರಾಂಶ

ಬಡತನದಿಂದ ಬೆಳೆದ ಡಾ.ಬಿ.ಆರ್.ಅಂಬೇಡ್ಕರ್, ಮಧ್ಯಮ ವರ್ಗದಿಂದ ಬಂದು ಇಡೀ ಸಮಾಜಕ್ಕೆ ಬದಲಾವಣೆ ಕ್ರಾಂತಿ ತಂದ ಬಸವಣ್ಣ ಹಾಗೂ ತಮ್ಮ ಸಿರಿವಂತಿಕೆ ತೊರೆದು ಸತ್ಯದ ಅನ್ವೇಷಣೆ ಮೂಲಕ ವಿಶ್ವಕ್ಕೆ ಜ್ಞಾನದ ಬೆಳಕಿನ ಹಾದಿ ತೋರಿದ ಬುದ್ಧರು ಪ್ರಸ್ತುತದ ಯುವಪೀಳಿಗೆಗೆ ಆದರ್ಶವಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಡಾ.ಬಿ.ಅರ್.ಅಂಬೇಡ್ಕರ್, ಜಗಜ್ಯೋತಿ ಬಸವಣ್ಣ ಹಾಗೂ ಬುದ್ಧರ ಆದರ್ಶ ನಡೆಗಳು ಭವಿಷ್ಯದ ವಿದ್ಯಾರ್ಥಿಗಳಿಗೆ ದಾರಿ ದೀಪವಾಗಿವೆ ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದರು.

ಪಟ್ಟಣದ ಭಗವಾನ್ ಬುದ್ಧ ಶಿಕ್ಷಣ ಸಂಸ್ಥೆ ಆವರಣದಲ್ಲಿ ಬುದ್ಧ, ಬಸವ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಗಳ ಅನಾವರಣ ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಬಡತನದಿಂದ ಬೆಳೆದ ಡಾ.ಬಿ.ಆರ್.ಅಂಬೇಡ್ಕರ್, ಮಧ್ಯಮ ವರ್ಗದಿಂದ ಬಂದು ಇಡೀ ಸಮಾಜಕ್ಕೆ ಬದಲಾವಣೆ ಕ್ರಾಂತಿ ತಂದ ಬಸವಣ್ಣ ಹಾಗೂ ತಮ್ಮ ಸಿರಿವಂತಿಕೆ ತೊರೆದು ಸತ್ಯದ ಅನ್ವೇಷಣೆ ಮೂಲಕ ವಿಶ್ವಕ್ಕೆ ಜ್ಞಾನದ ಬೆಳಕಿನ ಹಾದಿ ತೋರಿದ ಬುದ್ಧರು ಪ್ರಸ್ತುತದ ಯುವಪೀಳಿಗೆಗೆ ಆದರ್ಶವಾಗಿದ್ದಾರೆ ಎಂದರು.

ದೇಶದ ಇಂತಹ ಅನೇಕ ಮಹನೀಯರ ಬದುಕು ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗುವ ನಿಟ್ಟಿನಲ್ಲಿ ಪ್ರತಿಮೆಗಳು ಅನಾವರಣಗೊಳ್ಳುತ್ತಿರುವ ಜೊತೆಗೆ ಅವರ ತತ್ವಗಳು ಕೂಡ ಜ್ಞಾನವಾಗಬೇಕು. ಆ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತದ ದೃಷ್ಟಿಕೋನ ನಿಜಕ್ಕೂ ಪ್ರಶಂಸನೀಯ ಎಂದು ಬಣ್ಣಿಸಿದರು.

ಪ್ರತಿಮೆಗಳನ್ನು ಅನಾವರಣ ಗೊಳಿಸಿ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಸಮಾಜದಲ್ಲಿನ ಶೋಷಣೆ ಹಾಗೂ ಅವಮಾನಗಳನ್ನು ಮೆಟ್ಟಿನಿಂತು ತಮ್ಮ ಶೈಕ್ಷಣಿಕ ಸಾಧನೆಯಿಂದ ವಿಶ್ವವೇ ಮೆಚ್ಚುವಂಥ ಸಂವಿಧಾನವನ್ನು ಡಾ.ಬಿ.ಆರ್.ಅಂಬೇಡ್ಕರ್ ನೀಡಿದ್ದಾರೆ ಎಂದರು.

ಎಲ್ಲ ವರ್ಗದವರಿಗೆ ಸ್ವಾಭಿಮಾನದ ಬದುಕಿನೊಂದಿಗೆ ಸಮಾನತೆಯ ಅವಕಾಶಗಳನ್ನು ಕಲ್ಪಿಸಿ ಅಂಬೇಡ್ಕರ್, ತಮ್ಮ ವಚನಗಳ ಕ್ರಾಂತಿಯಿಂದ ಸ್ತ್ರೀ ಸಮಾನತೆ ಹಾಗೂ ಸ್ವಾತಂತ್ರ್ಯ ಕ್ಕೆ ಮುನ್ನುಡಿ ಬರೆದ ಬಸವಣ್ಣ ಹಾಗೂ ಜ್ಞಾನದ ಪ್ರತಿರೂಪದ ಬುದ್ಧರ ನಮ್ಮ ಸಮಾಜದ ಬೆಳಕಾಗಿದ್ದಾರೆ ಎಂದು ಶ್ಲಾಘಿಸಿದರು.

ಮಾಜಿ ಸಚಿವ ಎನ್.ಮಹೇಶ್ ಅವರು, ಚಂಕಮನ‌ ಕಾಲೇಜು ಸಂಚಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದರು. ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿನ ಸಾಧಕರನ್ನು ಅಭಿನಂದಿಸಲಾಯಿತು.

ಸಮಾರಂಭದಲ್ಲಿ ಸಂಸ್ಥೆ ಅಧ್ಯಕ್ಷ ಯಮದೂರು ಸಿದ್ದರಾಜು ಅಧ್ಯಕ್ಷತೆ ವಹಿಸಿದರು. ಮೈಸೂರಿನ ಬುದ್ಧ ವಿಹಾರದ ಕಲ್ಯಾಣಸಿರಿ ಬಂತೇಜಿ, ಕನಕಪುರ ದೇಗುಲ ಮಠದ ಚನ್ನಬಸವ ಸ್ವಾಮೀಜಿ, ನಿವೃತ್ತ ಪ್ರಾಧ್ಯಾಪಕ ಎಚ್.ಎಸ್.ಮುದ್ದೇಗೌಡ, ಬಿಜೆಪಿ ಜಿಲ್ಲಾ‌ ಘಟಕದ ಅಧ್ಯಕ್ಷ ಎನ್.ಇಂದ್ರೇಶ್, ಬಿಜೆಪಿ ಮುಖಂಡ ಸಿದ್ದರಾಮಯ್ಯ, ಕಸಾಪ ತಾಲೂಕು ಘಟಕದ ಅಧ್ಯಕ್ಷ ಎಲ್.ಚೇತನ್ ಕುಮಾರ್ ಹಾಗೂ ವಿವಿಧ ಮಠಗಳು ಸ್ವಾಮೀಜಿ ಪಾಲ್ಗೊಂಡಿದ್ದರು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...