ಕಾದು ಕೆಂಡವಾಗಿದ್ದ ಕಲಬುರಗಿ ಕೂಲ್‌ ಕೂಲ್‌

KannadaprabhaNewsNetwork |  
Published : Apr 24, 2025, 12:30 AM IST
ಫೋಟೋ- ಕಲಬುರಗಿ ರೇನ್‌ 1 ಮತ್ತು ಕಲಬುರಗಿ ರೇನ್‌ 3ಕಲಬುರಗಿಯಲ್ಲಿ ಬುಧವಾರ ಸಂಜೆ ಏಕಾಏಕಿ ಸುರಿದ ಮಳೆಯಿಂದಾಗಿ ಬೈಕ್‌ ಸವಾರರು ಪರದಾಡಿದರು. ಬಿಿಲ ಬೇಗೆಯಿಂದ ಕಂಗೆಟ್ಟಿದ್ದವರು ಮಲೆ ಬರಲಿ ಎಂದು ಮಳೆಯಲ್ಲೇ ತೊಯ್ದುತೊಪ್ಪೆಯಾದರೂ ಪರವಾಗಿಲ್ಲವೆಂದು ವಾಹನ ನಡೆಸಿಕೊಂಡು ಹೋದರು. | Kannada Prabha

ಸಾರಾಂಶ

ಕಲಬುರಗಿಯಲ್ಲಿ ಬುಧವಾರ ಸಂಜೆ ಏಕಾಏಕಿ ಸುರಿದ ಮಳೆಯಿಂದಾಗಿ ಬೈಕ್‌ ಸವಾರರು ಪರದಾಡಿದರು. ಬಿಸಿಲ ಬೇಗೆಯಿಂದ ಕಂಗೆಟ್ಟಿದ್ದವರು ಮಲೆ ಬರಲಿ ಎಂದು ಮಳೆಯಲ್ಲೇ ತೊಯ್ದುತೊಪ್ಪೆಯಾದರೂ ಪರವಾಗಿಲ್ಲವೆಂದು ವಾಹನ ನಡೆಸಿಕೊಂಡು ಹೋದರು.

-ಕಳೆದ 3 ದಿನದಿಂದ 44.5 ಡಿಗ್ರಿ ಸೆಲ್ಸಿಯಸ್‌ ತಾಪಮಾನದಿಂದ ಬಸವಳಿದಿತ್ತು ಕಲಬುರಗಿ । ಬುಧವಾರ 1 ಗಂಟೆಕಾಲ ಸುರಿದ ಮಳೆ ಕನ್ನಡಪ್ರಭ ವಾರ್ತೆ ಕಲಬುರಗಿ

ಬುಧವಾರ ಸಂಜೆ ಹೊತ್ತು 1 ಗಂಟೆಗೂ ಅಧಿಕ ಅವಧಿ ಸುರಿದ ಬಿರುಸಿನ ಮಳೆಯಿಂದಾಗಿ ಕಳೆದ ಮೂರು ದಿನದಿಂದ ಕಾದು ಕೆಂಡವಾಗಿದ್ದ ಕಲಬುರಗಿ ನಗರದಲ್ಲಿ ತಂಪು ವಾತಾವರಣ ಮೂಡಿದೆ.

ಸಂಜೆ ಹೊತ್ತು ಏಕಾಏಕಿ ಕಲಬುರಗಿ ಧರೆಗಿಳಿದ ವರುಣ ದೇವ ಬಿಟ್ಟು ಬಿಡದಂತೆ 1 ಗಂಟೆಗೂ ಹೆಚ್ಚಿನ ಅವಧಿ ಬಿರುಸಿನಂದ ಸುರಿದ. ಗುಗುಡು, ಬಿರುಗಾಳಿಯ ಅಬ್ಬರವೂ ಜೋರಾಗಿತ್ತು. ಹೀಗಾಗಿ 1 ಗಂಟೆಗೂ ಅಧಿಕ ಕಾಲ ಸುರಿದ ಮಳೆಯಿಂದಾಗಿ ನಗರದಲ್ಲಿ ತಂಪು ವಾತಾವರಣ ಮೂಡಿದ್ದರಿಂದ ಜನತೆ ನಿಟ್ಟುಸಿರುವ ಬಿಟ್ಟರು. ಕಳೆದ 3 ದಿನದಿಂದಲಂತೂ ಸೆಖೆ, ಹಬಿಸಿಗಾಳಿ, ಉಷ್ಣ ಅಲೆಯಿಂದಾಗಿ ಬಸವಳಿದಿದ್ದ ನಗರವಾಸಿಗಳು ಈ ಮಳೆಯಿಂದಾಗಿ ಕಲಬುರಗಿ ಕೂಲ್‌ ಆಯ್ತು ಎಂದು ಆಡಿಕೊಂಡರು.

ಮಲೆ ಸುರಿದಿದ್ದರಿಂದ ನೀರು ರಸ್ತೆಯಲ್ಲಿ ರಭಸವಾಗಿ ಹರಿದ ಕಾರಣ ರಿಂಗ್‌ ರಸ್ತೆಯ ನಾಗನಹಳ್ಳಿ ಬಳಿ ಕೆಲಹೊತ್ತು ಸಂಚಾರ ಬಂದ್ ಆಗಿತ್ತು. ಇನ್ನು ಕೋರಂಟಿ ಹನುಮಂತ ದೇವರ ಮಂದಿರ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಬರುವ ರೇಲ್ವೆ ಮೇಲ್‌ ಸೇುವೆಯಲ್ಲಿಯೂ ಭಾರಿ ಪ್ರಮಾಣದಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ತೊಂದರೆಯಾಗಿತ್ತು.

ಇದಲ್ಲದೆ ನಗರದ ಹಳೆ ಜೇವರ್ಗಿ ರಸ್ತೆ, ಮಾರುಕಟ್ಟೆ ಪ್ರದೇಶ, ಜನತಾ ಕಾಲೋನಿ, ಶರಣಬಸವೇಶ್ವರ ಕೆರೆ ಸುತ್ತಲಿನ ಪ್ರದೇಶ ಇಲ್ಲೆಲ್ಲಾ ಮಳೆ ನೀರು ಹೆಚ್ಚಿನ ಪ್ರಮಾಣದಲ್ಲಿ ಶೇಖರಗೊಂಡು ಕೆಲಕಾಲ ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿತ್ತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ