ಕನ್ನಡಪ್ರಭ ವಾರ್ತೆ ವಿಜಯಪುರ
ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿವಿಯಲ್ಲಿ ಬುಧವಾರ ಅಹಿಲ್ಯಾಬಾಯಿ ಸ್ನಾತಕೋತ್ತರ ಮಹಿಳಾ ಅಧ್ಯಯನ, ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಲ್ಯಾಣ ಇಲಾಖೆ, ಯಶೋಧರಮ್ಮ ದತ್ತಿ ಪೀಠದ ವತಿಯಿಂದ ಹಮ್ಮಿಕೊಂಡಿದ್ದ ಪಶು ಸಂಗೋಪನೆ ಮತ್ತು ಮಹಿಳೆ ಹಾಗೂ ಭಾರತದಲ್ಲಿ ಮಹಿಳಾ ಚಳುವಳಿಯ ಸಂಕಥನ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಮಹಿಳಾ ಅಧ್ಯಯನ ವಿದ್ಯಾರ್ಥಿನಿಯಾಗಿರುವ ಪ್ರತಿಯೊಬ್ಬರು ದಕ್ಷಿಣ ಏಷ್ಯಾದ ಮಹಿಳಾ ಅಧ್ಯಯನದ ಅಜ್ಜಿ ಎಂದು ಪ್ರಖ್ಯಾತವಾಗಿರುವ ವೀಣಾ ಮುಜುಂವದಾರ ಅವರ ಪರಿಚಯ ಹೊಂದಿರಲೇಬೇಕು ಎಂದು ಸಲಹೆ ನೀಡಿದರು.ಮಹಿಳಾ ಅಧ್ಯಯನ ವಿಭಾಗದ ನಿವೃತ್ತ ಪ್ರಾಧ್ಯಾಪಕಿ ಪ್ರೊ.ಆರ್.ಸುನಂದಮ್ಮ ಮಾತನಾಡಿ, ಪಶುಸಂಗೋಪನೆಯಲ್ಲಿ ಶೇ.80 ರಷ್ಟು ಭಾಗಿಯಾಗಿರುವ ಮಹಿಳೆಯರು ದೇಶದ ಆರ್ಥಿಕತೆ ಹಾಗೂ ಮನೆಯ ಆರ್ಥಿಕತೆಯ ವೃದ್ಧಿಗೆ ಕಾರಣವಾಗಿದ್ದಾರೆ. ಆದರೆ ಇಂದಿಗೂ ಅವರು ತೆರೆಮರೆಯಲ್ಲಿಯೇ ಉಳಿದುಬಿಟ್ಟಿದ್ದಾರೆ ಎಂದರು.