ಹುತ್ತೂರು ಕೆರೆ ಕೋಡಿ ಹಳ್ಳದ ರಸ್ತೆ, ಸೇತುವೆ ಕಾಮಗಾರಿ ಕಳಪೆ

KannadaprabhaNewsNetwork |  
Published : Jan 22, 2025, 12:31 AM IST
21ಜಿಪಿಟಿ3ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿ ಬಳಿ ಎಂ.ಸ್ಯಾಂಡ್‌ ಬದಲು ಡಸ್ಟ್‌ ಚಿತ್ರ. | Kannada Prabha

ಸಾರಾಂಶ

ತಾಲೂಕಿನ ತೆರಕಣಾಂಬಿ ಬಳಿಯ ಕಂಪನ ಮಾದೇಶ್ವರ ದೇವಸ್ಥಾನದಿಂದ ಹುತ್ತೂರು ಕೆರೆ ಕೋಡಿ ಹಳ್ಳದ ರಸ್ತೆ ಹಾಗೂ ಮೂರು ಸೇತುವೆ ಕಾಮಗಾರಿ ಕಳಪೆಯಿಂದ ಕೂಡಿದೆ ಎಂದು ಜೆಡಿಎಸ್‌ ತಾಲೂಕು ಅಧ್ಯಕ್ಷ ಕಡಬೂರು ಮಂಜು ಆರೋಪಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆತಾಲೂಕಿನ ತೆರಕಣಾಂಬಿ ಬಳಿಯ ಕಂಪನ ಮಾದೇಶ್ವರ ದೇವಸ್ಥಾನದಿಂದ ಹುತ್ತೂರು ಕೆರೆ ಕೋಡಿ ಹಳ್ಳದ ರಸ್ತೆ ಹಾಗೂ ಮೂರು ಸೇತುವೆ ಕಾಮಗಾರಿ ಕಳಪೆಯಿಂದ ಕೂಡಿದೆ ಎಂದು ಜೆಡಿಎಸ್‌ ತಾಲೂಕು ಅಧ್ಯಕ್ಷ ಕಡಬೂರು ಮಂಜು ಆರೋಪಿಸಿದ್ದಾರೆ.

ರಸ್ತೆ ಕಾಮಗಾರಿ, ಮೂರು ಸೇತುವೆಗೆ ಗುಣಮಟ್ಟದ ಯಾವುದೇ ವಸ್ತುಗಳನ್ನು ಬಳಸುತ್ತಿಲ್ಲ. ಎಂ.ಸ್ಯಾಂಡ್ ಬದಲು ಡಸ್ಟ್ ಬಳಸಿ ಕಾಮಗಾರಿ ನಡೆಸುತ್ತಿದ್ದಾರೆ. ರಸ್ತೆಯಲ್ಲಿ ಕನಿಷ್ಠ ಗುಣ ಮಟ್ಟದ ಮೆಟಲಿಂಗ್ ಕೂಡ ಮಾಡುತ್ತಿಲ್ಲ. ಹಳೆಯ ರಸ್ತೆ ಕಿತ್ತು, ಅಲ್ಲಿದ್ದ ಜಲ್ಲಿಯನ್ನೇ ರೋಲ್ ಮಾಡಿ 30 ಎಂಎಂಗಿಂತಲೂ ಕಡಿಮೆ ಎತ್ತರಕ್ಕೆ ವೆಟ್ ಮಿಕ್ಸ್ ಹಾಕುತ್ತಿದ್ದಾರೆ ಎಂದು ದೂರಿದ್ದಾರೆ.

ಕಳಪೆ ಕಾಮಗಾರಿ ಬಗ್ಗೆ ಗುಂಡ್ಲುಪೇಟೆ ಲೋಕೋಪಯೋಗಿ ಇಲಾಖೆಯ ಎಇಇ ರವಿಕುಮಾರ್ ಅವರ ಗಮನಕ್ಕೆ ತಂದರೂ ಸ್ಥಳ ಪರಿಶೀಲನೆ ಮಾಡಲು ಇದು ನಮಗೆ ಬರುವುದಿಲ್ಲ ಎಂದು ಹೇಳುತ್ತಾರೆ. ಮೇಲ್ವಿಚಾರಣೆ ಮಾತ್ರ ಇರೋದು ಎಂದು ಉಡಾಫೆ ಉತ್ತರ ನೀಡಿದ್ದಾರೆ ಎಂದರು. ಹಣದಾಹಿ ಗುತ್ತಿಗೆದಾರರು ಕಳಪೆ ಕಾಮಗಾರಿ ಮಾಡುತ್ತಿದ್ದು, ಕೂಡಲೇ ಎಸ್ಟಿಮೇಟ್‌ನಂತೆ ಕೆಲಸ ಮಾಡಲು ಅಧಿಕಾರಿಗಳು ಸೂಚಿಸಬೇಕು. ಗುಣಮಟ್ಟದ ರಸ್ತೆ ನಿರ್ಮಾಣ ಮಾಡಲು ಅವಕಾಶ ಮಾಡಬೇಕು ಇಲ್ಲದಿದ್ದಲ್ಲಿ ಕಾಮಗಾರಿಯನ್ನೇ ಮಾಡಲು ಬಿಡುವುದಿಲ್ಲ ಎಂದು ಎಚ್ಚರಿಸಿದ್ದಾರೆ. ಗುತ್ತಿಗೆದಾರರು ಮತ್ತು ಅಧಿಕಾರಿಗಳ ವಿರುದ್ಧ ಹೋರಾಟ ಮಾಡಬೇಕಾದ ಅನಿವಾರ್ಯವಾಗಿದ್ದು, ಗುತ್ತಿಗೆದಾರರ ಜೊತೆ ಯಾರೇ ಶಾಮೀಲಾಗಿದ್ದರೂ ಹೋರಾಟವಂತು ನಿಲ್ಲಿಸುವುದಿಲ್ಲ ಎಂದಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಗವಂತನ ಶಕ್ತಿ ಪಡೆದವರಿಂದ ಡಿಕೆಶಿ ಸಿಎಂ ಆಗುವ ದಿನಾಂಕ ನಿಗದಿ : ಇಕ್ಬಾಲ್
ಜನ ನಂಗೆ ಇನ್ನೊಂದು ಅವಕಾಶ ಕೊಡಲಿ : ಎಚ್ಡಿಕೆ