- ಶೃಂಗೇರಿ ವಿವಿಧೆಡೆ ಸಂಪರ್ಕ ಮುಖ್ಯ ರಸ್ತೆಗಳು । ಗ್ರಾಮೀಣ ರಸ್ತೆಗಳೂ ಹೊಂಡಗುಂಡಿಗಳಿಂದ ತುಂಬಿವೆ । ಮಳೆಗಾಲ ಕಳೆದರೂ ಡಾಂಬಾರಿಕರಣ ಭಾಗ್ಯಗಳ ಗ್ಯಾರಂಟಿಯಿಲ್ಲ
ಕನ್ನಡಪ್ರಭ ವಾರ್ತೆ ಶೃಂಗೇರಿ
ಪ್ರಮುಖ ಪ್ರವಾಸಿ ಕೇಂದ್ರಗಳಲ್ಲಿ ಒಂದಾದ ಶೃಂಗೇರಿಗೆ ಪ್ರತಿನಿತ್ಯ ರಾಜ್ಯ ಸೇರಿದಂತೆ ದೇಶ, ವಿದೇಶಗಳಿಂದಲೂ ಶ್ರೀ ಶಂಕರರ ಪುಣ್ಯಭೂಮಿಯಲ್ಲಿ ಶಾರದಾಂಬೆ ದರ್ಶನ, ಶ್ರೀಗಳ ಆಶೀರ್ವಾದ ಪಡೆಯಲು ಪ್ರವಾಸಿಗರು ಆಗಮಿಸುತ್ತಾರೆ.ಮಂಗಳೂರು, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು, ಸಾಗರ, ಬೆಂಗಳೂರು, ಮೈಸೂರು, ಧರ್ಮಸ್ಥಳ, ಕೊಲ್ಲೂರು ಸೇರಿದಂತೆ ವಿವಿದೆಡೆ ಸಂಪರ್ಕ ಕಲ್ಪಿಸುವ ಕೇಂದ್ರ ಬಿಂದುವೂ ಆದ ಶೃಂಗೇರಿಯಲ್ಲಿ ಸಂಪರ್ಕ ರಸ್ತೆ ಸಂಪೂರ್ಣ ಹದಗೆಟ್ಟು, ಡಾಂಬರು ಕಾಣದೆ ಹೊಂಡಗುಂಡಿಗಳದೇ ಸಾಮ್ರಾಜ್ಯವಾಗಿದೆ.
ಶೃಂಗೇರಿ ಆಗುಂಬೆ, ತೀರ್ಥಹಳ್ಳಿ ಸಂಪರ್ಕ ರಸ್ತೆ ರಾಜ್ಯ ಹೆದ್ದಾರಿಯಾಗಿದ್ದು ಶೃಂಗೇರಿಯಿಂದ ಬೇಗಾರುವರೆಗೂ ಗುಂಡಿಗಳಿಂದ ಹದಗೆಟ್ಟಿದೆ. ಅಲ್ಲಲ್ಲಿ ಹೊಂಡಗಳಿದ್ದು ಮಳೆ ಬಂದರೆ ಇವುಗಳಲ್ಲಿ ನೀರು ತುಂಬಿತ್ತದೆ. ಇದರಿಂದ ಸಾಕಷ್ಟು ರಸ್ತೆ ಅಪಘಾತ ಗಳಿಗೂ ಕಾರಣವಾಗುತ್ತಿವೆ. ಕೆಲ ದಿನಗಳ ಹಿಂದೆ ಬೇಗಾರು ಬಳಿ ಲಾರಿಯೊಂದು ಗುಂಡಿ ತಪ್ಪಿಸಲು ಹೋಗಿ ಕಂದಕಕ್ಕೆ ಉರುಳಿ ಬಿದ್ದಿತ್ತು ಎಂಬುದನ್ನು ಮರೆಯುವಂತಿಲ್ಲ.
ಶೃಂಗೇರಿ ಚಿಕ್ಕಮಗಳೂರು ಸಂಪರ್ಕ ಕಲ್ಪಿಸುವ ಜಯಪುರ, ಬಾಳೆಹೊನ್ನೂರು ರಸ್ತೆ ಮೆಣಸೆ ಬಳಿ ಸಂಪೂರ್ಣವಾಗಿ ಟಾರ್ಕಿತ್ತು ಬಂದು ಗುಂಡಿಗಳೇ ರಸ್ತೆಯಲ್ಲೆಲ್ಲಾ ಇದೆ. ಸೇತುವೆ ಮೇಲೂ ಹೊಂಡಗಳಿದ್ದು ಮಳೆ ಬಂದರೆ ಇಲ್ಲಿ ಸಂಚರಿಸುವವರು ಎಷ್ಟು ಎಚ್ಚರಿಕೆ ವಹಿಸಿದರು ಸಾಲದಾಗುತ್ತದೆ. ಈ ಹೊಂಡಗಳಿಗೆ ಮಣ್ಣು, ಎಂ ಸ್ಯಾಂಡ್ ಗಳನ್ನು ತುಂಬಿದ್ದರೂ ಮಳೆ ರಭಸಕ್ಕೆ ಎಲ್ಲವೂ ಕೊಚ್ಚಿ ಹೋಗಿ ನಿತ್ಯ ಹೊಂಡಗುಂಡಿಗಳ ನರಕ ದರ್ಶನವಾಗುತ್ತಿದೆ.
ಮಳೆಗಾಲ ಕಳೆದು ಬಿಸಿಲು ಆರಂಭಗೊಂಡಿದ್ದರೂ ರಸ್ತೆಗಳಿಗೆ ಡಾಂಬರು ಹಾಕಲು ಇಲಾಖೆಯಾಗಲೀ, ಸರ್ಕಾರವಾಗಲೀ ಮುಂದಾಗುತ್ತಿಲ್ಲ. ಪದೇ ಪದೇ ಅಪಘಾತಗಳು ಸಂಭವಿಸುತ್ತಾ ಜೀವಗಳು ಬಲಿಯಾಗುತ್ತಿವೆ. ಕೆಲವೆಡೆ ಹೊಂಡಗಳಿಂದ ತುಂಬಿದ್ದು ರಸ್ತೆಯೇ ಕಾಣುತ್ತಿಲ್ಲ. ಆದರೂ ಸಂಬಂಧಿತರು ಮಾತ್ರ ಇತ್ತ ಚಿತ್ತ ಹರಿಸಿಲ್ಲ.
--
ಈ ವರ್ಷ ಭಾರೀ ಮಳೆಯಿಂದ ರಸ್ತೆಗಳು ಸಂಪೂರ್ಣ ಹಾಳಾಗಿದೆ. ಹೊಂಡಗುಂಡಿಗಳಿಂದ ಕೂಡಿದ ಹದಗೆಟ್ಟ ರಸ್ತೆಯಲ್ಲಿ ಓಡಾಡಬೇಕಾಗಿರುವುದು ದುರಾದೃಷ್ಟಕರ. ಮಳೆ ಗಾಲ ಮುಗಿದರೂ ಸರ್ಕಾರ ರಸ್ತೆ ದುರಸ್ತಿಗೆ ಮುಂದಾಗದಿರುವುದು ನಿರ್ಲಕ್ಷವೇ ಸರಿ. ಇನ್ನಾದರೂ ಸರ್ಕಾರ ಗಂಬೀರವಾಗಿ ಪರಿಗಣಿಸಬೇಕು.
--
ಡಾಂಬರೀಕರಣ ಭಾಗ್ಯದ ಗ್ಯಾರಂಟಿ ನೀಡಿರಸ್ತೆಗಳು ಸಂಪರ್ಕ ಸಾಧನಗಳ ಕೇಂದ್ರ ಬಿಂದು. ಸರ್ಕಾರ ರಸ್ತೆ ಅಭಿವೃದ್ಧಿಗೆ ಪ್ರಾಮುಖ್ಯತೆ ನೀಡದಿರುವುದು ಸರ್ಕಾರದ ವೈಫಲ್ಯತೆ ಎದ್ದು ಕಾಣುತ್ತದೆ. ರಾಜ್ಯದಲ್ಲಿ ಲೋಕೋಪಯೋಗಿ ಇಲಾಖೆ ಇದ್ದು ಇಲ್ಲದಂತಾಗಿದೆ. ಸರ್ಕಾರ ಇನ್ನಾದರೂ ಡಾಂಬರು ಹಾಕಿಸಬೇಕಿದೆ.
ರಾಜೇಶ್ಮೇಘಳ ಬೈಲು-ಗ್ರಾಮಸ್ಥ.
--9 ಶ್ರೀ ಚಿತ್ರ 1-
ಶೃಂಗೇರಿ ಆಗುಂಬೆ ಉಡುಪಿ ಮಣಿಪಾಲ್ ಸಂಪರ್ಕ ರಾಜ್ಯ ಹೆದ್ಜಾರಿ ಹೊಂಡಗುಂಡಿಗಳಿಂದ ಸಂಪೂರ್ಣ ಹದಗೆಟ್ಟಿರುವುದು.9 ಶ್ರೀ ಚಿತ್ರ 2-
ಶೃಂಗೇರಿ ಚಿಕ್ಕಮಗಳೂರು ಸಂಪರ್ಕ ರಾಜ್ಯ ಹೆದ್ದಾರಿ ಮೆಣಸೆ ಬಳಿ ಹೊಂಡಗುಂಡಿಗಳಿಂದ ಕೂಡಿ ಸಂಪೂರ್ಣ ಹದಗೆಟ್ಟಿರುವುದು.9 ಶ್ರೀ ಚಿತ್ರ 3-ಸುಬ್ರಮಣ್ಯ ಶಿರೂರು.9 ಶ್ರೀ ಚಿತ್ರ 4-ರಾಜೇಶ್ ಮೇಘಳ ಬೈಲು.