ಮತದಾನ ಹೆಚ್ಚಳದಲ್ಲಿ ಕವಿಗಳ ಪಾತ್ರ ಪ್ರಮುಖ

KannadaprabhaNewsNetwork |  
Published : Apr 26, 2024, 12:49 AM IST
ಕಂಪ್ಲಿಯಲ್ಲಿ ಮತದಾನ ಜಾಗೃತಿ ಗಾಗಿ ಹಮ್ಮಿಕೊಂಡಿದ್ದ ಕವಿಗೋಷ್ಠಿ ಹಾಗೂ ಸಾಂಸ್ಕೃತಿ ಕಾರ್ಯಕ್ರಮ ಜರುಗಿತು  | Kannada Prabha

ಸಾರಾಂಶ

ನಿಸರ್ಗ, ಪ್ರೀತಿ, ಪ್ರೇಮ, ವಿರಹ, ವಿಡಂಬನೆ ಮೊದಲಾದ ಕವಿತೆ ರಚನೆ ಸಾಮಾನ್ಯವಾಗಿದ್ದರೂ, ಚುನಾವಣೆ ಪ್ರಕ್ರಿಯೆ ಮತದಾನ ಕುರಿತು ಕವಿತೆ ರಚನೆ ಕವಿಗಳಿಗೆ ಸವಾಲಾಗಿದೆ.

ಕಂಪ್ಲಿ: ಪಟ್ಟಣದ ಸಾಂಗತ್ರಯ ಸಂಸ್ಕೃತ ಪಾಠಶಾಲೆಯಲ್ಲಿ ತಾಲೂಕು ಸ್ವೀಪ್ ಸಮಿತಿ ವತಿಯಿಂದ ಲೋಕಸಭಾ ಚುನಾವಣೆ ಅಂಗವಾಗಿ ಮತದಾರ ಜಾಗೃತಿಗಾಗಿ ಬುಧವಾರ ಸಂಜೆ ಕವಿಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ತಹಸೀಲ್ದಾರ್ ಶಿವರಾಜ್ ಶಿವಪುರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಸೃಜನಶೀಲ ಕವಿತೆಗಳ ಮೂಲಕ ಮತದಾನ ಹೆಚ್ಚಳಕ್ಕಾಗಿ ಕವಿಗೋಷ್ಠಿ ಹಮ್ಮಿಕೊಂಡಿದೆ. ಮತದಾನ ಹೆಚ್ಚಳದಲ್ಲಿ ಕವಿಗಳ ಪಾತ್ರ ಮಹತ್ವದ್ದಾಗಿದೆ. ಕವಿಗಳು ಚುನಾವಣೆ ಕುರಿತು ಕವಿತೆ ರಚಿಸುವುದು ಹೊಸ ವಿಷಯವೆನಿಸಿದರೂ, ಮತದಾರರ ಜಾಗೃತಿಯಲ್ಲಿ ಕವಿಗಳ ಪಾತ್ರ ಪ್ರಮುಖವಾಗಿದೆ ಎಂದರು.

ನರೇಗಾ ಎಡಿ ಕೆ.ಎಸ್. ಮಲ್ಲನಗೌಡ ಮಾತನಾಡಿ, ನಿಸರ್ಗ, ಪ್ರೀತಿ, ಪ್ರೇಮ, ವಿರಹ, ವಿಡಂಬನೆ ಮೊದಲಾದ ಕವಿತೆ ರಚನೆ ಸಾಮಾನ್ಯವಾಗಿದ್ದರೂ, ಚುನಾವಣೆ ಪ್ರಕ್ರಿಯೆ ಮತದಾನ ಕುರಿತು ಕವಿತೆ ರಚನೆ ಕವಿಗಳಿಗೆ ಸವಾಲಾಗಿದೆ. ಮತದಾರರನ್ನು ಜಾಗೃತಿಗೊಳಿಸುವ ಮೌಲಿಕ ಕವಿತೆಗಳ ರಚನೆ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

ಕವಿಗೋಷ್ಠಿಯಲ್ಲಿ ಜಿ. ಪ್ರಕಾಶ್, ಬಂಗಿ ದೊಡ್ಡ ಮಂಜುನಾಥ, ಎಸ್. ರಾಜು, ರಾಜು ಬಿಲಂಕರ್, ಎಸ್. ಶಾಮಸುಂದರರಾವ್, ಅಶೋಕ ಕುಕನೂರು, ಚಂದ್ರಯ್ಯ ಸೊಪ್ಪಿಮಠ, ಅಂಬಿಗರ ಮಂಜುನಾಥ, ರಮೇಶ ಸುಗ್ಗೇನಹಳ್ಳಿ ಚುನಾವಣೆಗೆ ಸಂಬಂಧಿಸಿದ ಕವಿತೆಗಳನ್ನು ವಾಚಿಸಿದರು.

ಕವಿ ಜಿ. ಪ್ರಕಾಶ್, ಅಂಬಿಗರ ಮಂಜುನಾಥ, ರಾಜು ಬಿಲಂಕರ್, ರಮೇಶ್ ಸುಗ್ಗೇನಹಳ್ಳಿ ವಾಚಿಸಿದ ಕವಿತೆಗಳು ಪ್ರೇಕ್ಷಕರ ಗಮನ ಸೆಳೆದವು.

ರಾಮಸಾಗರದ ಮೆಕಾನಿಕ್ ವಸಂತರಾಜ ಕಹಳೆ, ನೆಲ್ಲೂಡಿಯ ಡಿಇಒ ಅಶೋಕ ಕುಕನೂರು ಚುನಾವಣೆ ಗೀತೆಗಳನ್ನು ಹಾಡಿದರು. ಮೆಟ್ರಿಯ ಚೆನ್ನದಾಸರ ಮಾರೆಪ್ಪ ಮತ್ತು ಸಂಗಡಿಗರು ತತ್ವಪದಗಳನ್ನು ಹಾಡಿದರು. ಕಲಾವಿದ ಭುಜಂಗಾಚಾರ್ ಬಯಲಾಟದ ದೃಶ್ಯಗಳ ಪ್ರದರ್ಶಿಸಿದರು.

ಸ್ವೀಪ್ ಸಮಿತಿ ಅಧ್ಯಕ್ಷ ತಾಪಂ ಇಒ ಆರ್.ಕೆ. ಶ್ರೀಕುಮಾರ್, ಪುರಸಭೆ ಮುಖ್ಯಾಧಿಕಾರಿ ಗೋರೆಬಾಳ್ ರೆಡ್ಡಿರಾಯನಗೌಡ ಹಾಗೂ ಕಂದಾಯ, ತಾಪಂ, ಪುರಸಭೆ ಸಿಬ್ಬಂದಿ ಇದ್ದರು.

PREV

Recommended Stories

3ನೇ ಮಹಡಿಯಿಂದ ಆಯತಪ್ಪಿಬಿದ್ದು ಪಿಯು ವಿದ್ಯಾರ್ಥಿನಿ ಸಾವು
ಜೈಲೊಳಗೆ ಡ್ರಗ್ಸ್ ಸಾಗಿಸಲುಯತ್ನ: ವಾರ್ಡನ್ ಬಂಧನ