ರಟ್ಟೀಹಳ್ಳಿ: 12ನೇ ಶತಮಾನದ ಬಸವಣ್ಣನವರ ಸಮಕಾಲೀನರಾದ ಹಡಪದ ಅಪ್ಪಣ್ಣನವರು ವಚನ ಮೂಲಕ ಸಮಾಜದ ಅಂಕು-ಕೊಂಡು ತಿದ್ದುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದು ಪಪಂ ಅಧ್ಯಕ್ಷ ರವೀಂದ್ರ ಮುದಿಯಪ್ಪನವರ ಹೇಳಿದರು.
ಹಡಪದ ಅಪ್ಪಣ್ಣ ಸಮಾಜದ ತಾಲೂಕಾಧ್ಯಕ್ಷ ಹಾಲಸಿದ್ದಪ್ಪ ಕಾಯಕದ ಮಾತನಾಡಿ, ಹಡಪದ ಅಪ್ಪಣ್ಣನವರು ನಮ್ಮ ಸಮಾಜದ ಶ್ರೇಷ್ಠ ಶಿವಶರಣರಾಗಿದ್ದು, ಅವರ ತತ್ವ-ಆದರ್ಶಗಳು ಇಂದಿಗೂ ಅನನ್ಯವಾಗಿದೆ ಎಂದರು.
ಪಪಂ ಮುಖ್ಯಾಧಿಕಾರಿ ಸಂತೋಷ ಚಂದ್ರಕೇರ, ವೀರೇಶ ಕಾಯಕದ, ಕುಮಾರ ಕಾಯಕದ, ಗಣೇಶ ಕಾಯಕದ, ಮಂಜುನಾಥ ಕಾಯಕದ, ನಾಗರಾಜ ಕಟ್ಟಿಮನಿ, ಪ್ರಕಾಶ ಕಾಯಕದ, ಜಯಪ್ಪ ಕಾಯಕದ, ಮಂಜು ಮಾಸೂರ, ಉಜನೆಪ್ಪ ಹೊಸಮನಿ, ಪಪಂ ನೌಕರರಾದ ರಾಜಕುಮಾರ ಹೇಂದ್ರೆ, ಗದಿಗೇಶ ಶಿರ್ಶಿ, ಮಂಜು ಸುಣಗಾರ, ಬಸವರಾಜ ಕವಲೆತ್ತು, ಸಂತೋಷ ಬಿಳಚಿ, ನಿಖೀಲ್ ಅರ್ಕಾಚಾರಿ, ಚಂದನಕುಮಾರ ಇದ್ದರು.ತಹಸೀಲ್ದಾರ ಕಚೇರಿ: ಪಟ್ಟಣದ ತಹಸೀಲ್ದಾರ್ ಕಚೇರಿ ಆವರಣದಲ್ಲಿ ರಾಷ್ಟ್ರೀಯ ಹಬ್ಬಗಳ ಸಮಿತಿ ಅಧ್ಯಕ್ಷೆ, ತಹಸೀಲ್ದಾರ್ ಶ್ವೇತಾ ಅಮರಾವತಿ ಹಾಗೂ ಸಮಾಜದ ಮುಖಂಡರ ಸಹಯೋಗದಲ್ಲಿ ಮಹಾನ್ ಶಿವಶರಣ ಹಡಪದ ಅಪ್ಪಣ್ಣನವರ 892ನೇ ಜಯಂತಿಯನ್ನು ಬುಧವಾರ ವಿಜೃಂಭಣೆಯಿಂದ ಆಚರಿಸಲಾಯಿತು.
ಗ್ರೇಡ್-2 ತಹಸೀಲ್ದಾರ್ ಜೈರಾಮ್, ಸಮಾಜದ ಅಧ್ಯಕ್ಷ ಹಾಲಸಿದ್ದಪ್ಪ ಕಾಯಕದ, ವೀರೇಶ ಕಾಯಕದ, ಕುಮಾರ ಕಾಯಕದ, ಗಣೇಶ ಕಾಯಕದ, ಮಂಜುನಾಥ ಕಾಯಕದ, ನಾಗರಾಜ ಕಟ್ಟಿಮನಿ, ಪ್ರಕಾಶ ಕಾಯಕದ, ಜಯಪ್ಪ ಕಾಯಕದ ಹಾಗೂ ತಹಸೀಲ್ದಾರ್ ಕಚೇರಿ ಸಿಬ್ಬಂದಿ ಇದ್ದರು.