ಕನ್ನಡಪ್ರಭವಾರ್ತೆ ಚಳ್ಳಕೆರೆ
ಅವರು, ತಾಲೂಕು ಮಟ್ಟದ ಖೋ-ಖೋ, ವಾಲಿಬಾಲ್, ಕಬಡ್ಡಿ ಪಂದ್ಯಗಳಲ್ಲಿ ವಿಜೇತರಾದ ಆಟಗಾರರನ್ನು ಅಭಿನಂದಿಸಿ ಮಾತನಾಡಿದರು.
ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಬಾಪೂಜಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಮೂರು ಪಂದ್ಯಗಳಲ್ಲಿ ಜಯಗಳಿಸುವ ಮೂಲಕ ಕ್ರೀಡಾ ಕ್ಷೇತ್ರದಲ್ಲೂ ಬಾಪೂಜಿ ವಿದ್ಯಾಸಂಸ್ಥೆ ಶಕ್ತಿಶಾಲಿಯಾಗಿ ಬೆಳೆಯಲು ಸಹಕರಿಸಿದ್ದಾರೆ. ಎಲ್ಲಾ ಆಟಗಳಲ್ಲೂ ಬಾಪೂಜಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಆಟಗಾರರು ಪ್ರಥಮ ಸ್ಥಾನದಲ್ಲಿ ವಿಜೇತರಾಗಿ ಪ್ರಶಸ್ತಿ ಪಡೆದಿದ್ದಾರೆ. ಮುಂದಿನ ದಿನಗಳಲ್ಲೂ ಸಹ ನಮ್ಮ ಸಂಸ್ಥೆಯ ಆಟಗಾರರು ಇದೇ ರೀತಿ ಉತ್ತಮ ಆಟವನ್ನು ಎಲ್ಲಾ ವಿಭಾಗದಲ್ಲಿ ತಂದುಕೊಡಲಿ ಎಂದು ಪ್ರಾರ್ಥಿಸುವೆ ಎಂದರು.ಪ್ರಾಂಶುಪಾಲ ಸತೀಶ್ ಚಂದ್ರರೆಡ್ಡಿ, ದೈಹಿಕ ಶಿಕ್ಷಕರಾದ ಜಯಶೀಲರೆಡ್ಡಿ, ಉಪನ್ಯಾಸಕರಾದ ಈರಣ್ಣ, ಜಗದೀಶ್, ಅಶ್ವಥ್ರೆಡ್ಡಿ, ಸಾದ್ದಿಕ್, ಉಮೇಶ್ ಮುಂತಾದವರು ವಿಜಯ ಸಾಧಿಸಿದ ಕ್ರೀಡಾಪಟುಗಳ ಸಾಧನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ರೇಖಾ, ಮುರುಳಿ, ನಾಗರಾಜು, ರಘು, ಶಬ್ಬಿರ್, ಚಂದ್ರಶೇಖರ್, ಮಹಲಿಂಗಪ್ಪ, ಚಂದ್ರಣ್ಣ, ರಾಜೇಶ್, ಸಿದ್ದಿಕ್, ಪಂಕಜಾಕ್ಷಿ, ಸಂತೋಷ್, ಪಾಂಡುರಂಗಪ್ಪ, ಕದರಪ್ಪ, ಪಾಪಣ್ಣ ಮುಂತಾದವರು ಉಪಸ್ಥಿತರಿದ್ದರು.