ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಪಟ್ಟಣದ ಹೌಸಿಂಗ್ ಬೋರ್ಡ್ ಬಡಾವಣೆಯ ಬುದ್ಧ, ಬಸವ, ಅಂಬೇಡ್ಕರ್ ಯೋಗ ಕೇಂದ್ರದಲ್ಲಿ ಆಯೋಜಿಸಿದ್ದ ಗುರುಪೂರ್ಣಿಮೆ ಕಾರ್ಯಕ್ರಮದಲ್ಲಿ ಯೋಗ ಗುರು ಅಲ್ಲಮಪ್ರಭು ಅವರನ್ನು ಅಭಿನಂದಿಸಿ ಮಾತನಾಡಿದರು.
ತಂದೆ ತಾಯಿ ಮೊದಲ ಗುರು. ಅಕ್ಷರ ಕಲಿಸಿದವರು ಎರಡನೇ ಗುರು. ಹಾಗೇಯೇ ಆಧ್ಯಾತ್ಮಿಕ ಶಿಕ್ಷಣ ನೀಡಿ ಯೋಗ ಧ್ಯಾನ ಪ್ರಾಣಾಯಾಮ ಕಲಿಸಿದ ಆರೋಗ್ಯವನ್ನು ನೀಡಿದ ಗುರುವೂ ಸಹ ಎಲ್ಲ ಗುರುಗಳಂತೆಯೇ ಶ್ರೇಷ್ಠ ಗುರು ಎಂದರು.ಬುದ್ಧ, ಬಸವ, ಅಂಬೇಡ್ಕರ್ ಅವರು ಜಗತ್ತಿನ ಜೀವಿಗಳ ಸುಖ ಶಾಂತಿ ನೆಮ್ಮದಿಗಾಗಿ ದುಡಿದ ಮಹನೀಯರು. ಇಂತಹ ಪುಣ್ಯಾತ್ಮರ ಹೆಸರಿಟ್ಟು ನಮ್ಮ ಆರೋಗ್ಯ ಕಾಪಾಡಿಕೊಳ್ಳಲು ಯೋಗ ಕಲಿಸುವ ಮೂಲಕ ಸನ್ಮಾರ್ಗ ತೋರುತ್ತಿರುವ ಅಲ್ಲಮಪ್ರಭು ಯೋಗ ಗುರು ಅವರಿಗೆ ಸನ್ಮಾನ ಔಚಿತ್ಯ ಪೂರ್ಣ ಎಂದರು.
ತಾಲೂಕು ಒಕ್ಕಲಿಗರ ಸಂಘದ ಉಪಾಧ್ಯಕ್ಷ ಬೋರೇಗೌಡರು ಮಾತಾನಾಡಿದರು. ಕಾರ್ಯಕ್ರಮದಲ್ಲಿ ಶಿಕ್ಷಕರಾದ ಕೊಡಗಹಳ್ಳಿ ಪ್ರಕಾಶ್, ಕೆಂಬಾರೆಗೌಡ, ಕೆಎಸ್ಆರ್ಸಿ ವಿಶ್ವನಾಥ್, ಗಿರೀಶ್ ಕಿಕ್ಕೇರಿ, ಪೋಸ್ಟ್ ಕೃಷ್ಣೇಗೌಡ, ಕೆಇಬಿ ಶಿವಣ್ಣ, ಆನಂದ್, ಸುಲೋಚನಾ, ಕರುಣಾ ಕೊಣನೂರು, ವಸಂತರಾಜು, ಭೈರಾಪುರ ಶಂಕರ್, ಐಸಿಎಲ್ ಇಂದ್ರಕುಮಾರ್, ಕಾವೇರಿ ಟೈಲರ್ ವಾಸು, ರಾಧಾ ಇದ್ದರು.
ಕೆ.ಆರ್.ಪೇಟೆ:ಆತ್ಮ ಯೋಜನೆಯಡಿ ರಾಜ್ಯ, ಜಿಲ್ಲಾ ಹಾಗೂ ತಾಲೂಕು ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿ ಹಾಗೂ ಶ್ರೇಷ್ಠ ಆಸಕ್ತ ಗುಂಪುಗಳಿಗೆ ಪ್ರಶಸ್ತಿ ನೀಡಲು ಆಸಕ್ತ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.
ರೈತರ ಗುಂಪುಗಳಿಗೆ 2024-25ನೇ ಸಾಲಿನ ಶ್ರೇಷ್ಠ ಆಸಕ್ತ ಗುಂಪು ಪ್ರಶಸ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಜಿಲ್ಲೆಗೆ 5 ರೈತರ/ರೈತ ಮಹಿಳೆ ಗುಂಪುಗಳಿಗೆ ತಲಾ 20ಸಾವಿರ ರು. ನಗದು ಹಾಗೂ ಪ್ರಶಸ್ತಿ ನೀಡಲಾಗುವುದು ಎಂದು ತಿಳಿಸಿದ್ದಾರೆ.ಆಸಕ್ತ ರೈತರು ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಭರ್ತಿ ಮಾಡಿದ ಅರ್ಜಿಗಳನ್ನು ಹೋಬಳಿಯ ರೈತ ಸಂಪರ್ಕ ಕೇಂದ್ರಗಳ ಮೂಲಕ ಆಗಸ್ಟ್ 23ರ ಸಂಜೆ 5 ಗಂಟೆಯೊಳಗೆ ತಲುಪಿಸುವಂತೆ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಎಚ್.ಜೆ.ಸಂತೋಷ್ ಕುಮಾರ್ ತಿಳಿಸಿದ್ದಾರೆ.