ಸ್ತ್ರೀ ಲೋಕದ ಸಂಪತ್ತು ಜಾನಪದ: ಮುಗಳಿ ಲಕ್ಷ್ಮಿದೇವಮ್ಮ

KannadaprabhaNewsNetwork |  
Published : Dec 13, 2025, 01:45 AM IST
12 ಬೀರೂರು 1ಬೀರೂರಿನ ಗುರುಭವನದಲ್ಲಿ ಶುಕ್ರವಾರ ಬೀರೂರು ಶೈಕ್ಷಣಿಕ ವಲಯದ ಶಿಕ್ಷಕರ ಸಂಘ ಏರ್ಪಡಿಸಿದ್ದ ಜನಪದ ಸಂವಾದ ಮತ್ತು ಸಹಪಠ್ಯ ಚಟುವಟಿಕೆಗಳ ಸ್ಪರ್ಧಾ ಕಾರ್ಯಕ್ರಮವನ್ನು ಕೇಂದ್ರ ಸಂಗೀತ ನಾಟಕ ಅಕಾಡೆಮಿ ಮತ್ತು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಮುಗಳಿ ಲಕ್ಷ್ಮಿದೇವಮ್ಮ ಉದ್ಘಾಟಿಸಿದರು. ಬಿಇಒ ಚೋಪ್ದಾರ್, ಬಿ.ಜೆ.ಜಗದೀಶ್, ಉಮಾಕಾಂತ್, ಬಸಪ್ಪ, ಶೇಖರಪ್ಪ ಸೇರಿದಂತೆ ಮತ್ತಿತರಿದ್ದರು. | Kannada Prabha

ಸಾರಾಂಶ

ಬೀರೂರು.ಗ್ರಾಮೀಣ ಭಾಗದ ಸೃಜನಶೀಲತೆಯ ಹೆಮ್ಮೆ ಮತ್ತು ಸಾಂಸ್ಕೃತಿಕ ಪರಂಪರೆಯ ಹೆಗ್ಗುರುತು ಜಾನಪದ ಕಲೆಗಳು. ಅವುಗಳು ಸ್ತ್ರೀ ಲೋಕದ ಸಂಪತ್ತಾಗಿದ್ದು, ಇವುಗಳು ಇಂದಿನ ದಿನಮಾನಗಳಲ್ಲಿ ನಶಿಸಿ ಹೋಗುತ್ತಿರುವುದು ನೋವು ತಂದಿದೆ ಎಂದು ಕೇಂದ್ರ ಸಂಗೀತ ನಾಟಕ ಅಕಾಡೆಮಿ ಮತ್ತು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಮುಗಳಿ ಲಕ್ಷ್ಮಿದೇವಮ್ಮ ತಿಳಿಸಿದರು.

ಗುರುಭವನದಲ್ಲಿ ಬೀರೂರು ಶೈಕ್ಷಣಿಕ ವಲಯದ ಶಿಕ್ಷಕರಿಗೆ ಜನಪದ ಸಂವಾದ, ಸಹಪಠ್ಯ ಚಟುವಟಿಕೆಗಳ ಸ್ಪರ್ಧೆ

ಕನ್ನಡಪ್ರಭ ವಾರ್ತೆ, ಬೀರೂರು.ಗ್ರಾಮೀಣ ಭಾಗದ ಸೃಜನಶೀಲತೆಯ ಹೆಮ್ಮೆ ಮತ್ತು ಸಾಂಸ್ಕೃತಿಕ ಪರಂಪರೆಯ ಹೆಗ್ಗುರುತು ಜಾನಪದ ಕಲೆಗಳು. ಅವುಗಳು ಸ್ತ್ರೀ ಲೋಕದ ಸಂಪತ್ತಾಗಿದ್ದು, ಇವುಗಳು ಇಂದಿನ ದಿನಮಾನಗಳಲ್ಲಿ ನಶಿಸಿ ಹೋಗುತ್ತಿರುವುದು ನೋವು ತಂದಿದೆ ಎಂದು ಕೇಂದ್ರ ಸಂಗೀತ ನಾಟಕ ಅಕಾಡೆಮಿ ಮತ್ತು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಮುಗಳಿ ಲಕ್ಷ್ಮಿದೇವಮ್ಮ ತಿಳಿಸಿದರು.ಪಟ್ಟಣದ ಗುರುಭವನದಲ್ಲಿ ಶುಕ್ರವಾರ ಬೀರೂರು ಶೈಕ್ಷಣಿಕ ವಲಯದ ಶಿಕ್ಷಕರ ಸಂಘ ಏರ್ಪಡಿಸಿದ್ದ ಜನಪದ ಸಂವಾದ ಮತ್ತು ಸಹಪಠ್ಯ ಚಟುವಟಿಕೆಗಳ ಸ್ಪರ್ಧಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಜನಪದ ಎಂದರೆ ವಿಷಯಗಳ ಕುರಿತು ಜನಸಾಮಾನ್ಯರ ನಡುವೆ ನಡೆಯುವ ಮಾತುಕತೆ, ವಿನಿಮಯ ಅಥವಾ ಸಂವಹನ, ಇದು ಕಥೆಗಳು, ಹಾಡುಗಳು, ನಂಬಿಕೆ ಗಳು, ಆಚರಣೆಗಳು ಮತ್ತು ಹಳ್ಳಿಯ ಜೀವನದ ಮೌಖಿಕ ಪರಂಪರೆ ಹಂಚಿಕೊಳ್ಳುವ ಒಂದು ರೂಪವಾಗಿದೆ. ಇದು ಹಳ್ಳಿಯ ಜನರ ದೈನಂದಿನ ಕೆಲಸಗಳು, ಹಬ್ಬಗಳು, ಸಂಪ್ರದಾಯಗಳು ಮತ್ತು ಅನುಭವ ಹಾಡುಗಳು ಮತ್ತು ಕಥೆಗಳ ಮೂಲಕ ತಲೆಮಾರುಗಳಿಂದ ತಲೆಮಾರಿಗೂ ಹರಡಿಸುವ ವಿಧಾನವಾಗಿದೆ. ಇಲ್ಲಿ ಜನರು ತಮ್ಮದೇ ಶೈಲಿಯಲ್ಲಿ ಹಾಡುಗಳನ್ನು ಕಟ್ಟಿ ಹೇಳುತ್ತಾರೆ. ಕಲೆಯನ್ನು ಯಾರು ಅರ್ಥಪೂರ್ಣವಾಗಿ ಗೌರವಿಸುತ್ತಾರೋ ಅಂಥವರಿಗೆ ಎಂದಾದರೊಂದು ದಿನ ಕಲೆಗೆ ಬೆಲೆ ದೊರೆತು ಈ ಸಮಾಜದಲ್ಲಿ ಗೌರವಕ್ಕೊಕೋಳಪಡುತ್ತಾರೆ ಎಂದರು.

ಯಾವ ಕೆಲಸವನ್ನು ಮಾಡಬೇಕಾದರೂ ಸಹ ಆಸಕ್ತಿ ಮತ್ತು ಶಿಸ್ತಿನಿಂದ ಮಾಡಬೇಕು. ಶಿಕ್ಷಕರೆಂದರೆ ವಿದ್ಯೆಗೆ ಜನ್ಮದಾತರು. ಶಿಕ್ಷಕರು ಮೂಲ ಶಿಕ್ಷಣದ ಗುರಿ ಮರೆಯಬಾರದು. ಪೋಷಕರ ಖಾಸಗಿ ಶಾಲೆಗಳ ವ್ಯಾಮೋಹದಿಂದ ಸರ್ಕಾರಿ ಶಾಲೆಗಳು ಮುಚ್ಚುತ್ತಿರುವುದು ವಿಪರ್ಯಾಸ. ಗ್ರಾಮೀಣ ಭಾಗದ ನನ್ನಂತವರನ್ನು ಸಹ ಕಲೆ ಮೂಲಕ ಗುರುತಿಸಿರುವುದು ಹೆಮ್ಮೆ ತಂದಿದೆ ಎಂದರು.ಪ್ರೌಢಶಾಲೆ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಸಿ.ಉಮಕಾಂತ್ ಮಾತನಾಡಿ, ಶಿಕ್ಷಕರು ಪಠ್ಯದ ವಿಷಯಗಳ ಜೊತೆಗೆ ಪತ್ಯೇತರ ಚಟುವಟಿಕೆಗಳನ್ನು ಬೋಧಿಸಬೇಕು. ಸಹಪಠ್ಯ ಚಟುವಟಿಕೆಗಳು ಕಲಿಕೆಗೆ ಪೂರಕ. ಪ್ರತಿಭಾವಂತ ಮಕ್ಕಳನ್ನು ಗುರ್ತಿಸಿ, ಅವರಿಗೆ ಮತ್ತಷ್ಟು ಕಲಿಕೆಗೆ ಅವಕಾಶ ನೀಡಬಹುದು ಎಂದರು.ಜಿಲ್ಲಾ ಪ್ರಾಥಮಿಕ ಶಿಕ್ಷಕರ ಸಂಘದ ಉಪಾಧ್ಯಕ್ಷ ಬಿ.ಜೆ.ಜಗದೀಶ್ ಮಾತನಾಡಿ, ಶಿಕ್ಷಕರು ಪಠ್ಯ ವಿಷಯದ ಜೊತೆಗೆ ಪತ್ಯೇತರ ಚಟುವಟಿಕೆಗಳನ್ನು ಕಲಿಯಬೇಕು. ಶಿಕ್ಷಕರನ್ನು ಉತ್ತೇಜಿಸಲು ಇಂತಹ ಚಟುವಟಿಕೆ ಸಹಕಾರಿ. ಶಿಕ್ಷಕರಲ್ಲಿನ ಪ್ರತಿಭೆಗಳನ್ನು ಹೊರ ಹೊಮ್ಮಿಸಲು ಶಾಲಾ ಶಿಕ್ಷಣ ಇಲಾಖೆ ಸಹ ಪಠ್ಯ ಚಟುವಟಿಕೆಗಳ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ಪ್ರತಿಯೊಬ್ಬರು ಭಾಗಿ ಯಾಗಬೇಕು ಎಂದು ಕರೆ ನೀಡಿದರು.ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಸಪ್ಪ ಮಾತನಾಡಿ, ಶಿಕ್ಷಕರಲ್ಲಿ ಪ್ರತಿಭಾನ್ವಿತ ಆಸಕ್ತಿ ಉಳ್ಳ ಶಿಕ್ಷಕರಿಗೆ ಈ ಸಹ ಪಠ್ಯೇತರ ಚಟುವಟಿಕೆಗಳ ಸ್ಪರ್ಧಾ ಕಾರ್ಯಕ್ರಮ ಉತ್ತಮ ವೇದಿಕೆಯಾಗಿದ್ದು, ಇದರ ಸದುಪಯೋಗಪಡೆಯಿರಿ ಎಂದರು.ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎನ್.ಬಿ.ಮಂಜುನಾಥ್ ಮಾತನಾಡಿ, ಜಾನಪದ ಸಾಹಿತ್ಯವನ್ನು ಜೀವಂತವಾಗಿ ಉಳಿಸಿ ಬೆಳೆಸುವ ಕಾರ್ಯ ಮಾಡುತ್ತಿರುವ ತಾಲೂಕಿನ ಮಗುಳಿ ಲಕ್ಷ್ಮಿದೇವಮ್ಮನವರ ಕಾರ್ಯ ಶ್ಲಾಘನೀಯ. ಶಿಕ್ಷಕರು ಮಕ್ಕಳಿಗೆ ಜಾನಪದ ಕಲೆ ಹೇಳಿಕೊಡಬೇಕೆಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಇಒ ಚೋಪ್ದಾರ್ ವಹಿಸಿದ್ದರು, ಬಿಆರ್ ಸಿ ಶೇಖರಪ್ಪ, ಮುರಳಿಧರ್, ಪ್ರಶಾಂತ್, ಮರುಳಸಿದ್ದಪ್ಪ ಮಾತನಾಡಿದರು.ವೇದಿಕೆಯಲ್ಲಿ ಮೋಹನ್ ರಾಜ್, ಆರ್.ಟಿ.ಅಶೋಕ್, ಸಿದ್ದಪ್ಪ, ಮಹಾದೇವ್, ಯಮುನ, ಗೀತಾ, ಮೈಲಾರಪ್ಪ, ಉಮಾ ಮಹೇಶ್, ಶಶಿಕುಮಾರ್, ಕುಸುಮಾ, ರವಿಕುಮಾರ್, ಜಯದೇವಪ್ಪ, ಕವಿತಾ ಆನಂದ್, ಗಂಗಪ್ಪ, ಸುರೇಶ್ ಗವಾಯಿ ಸೇರಿದಂತೆ ನೂರಾರು ಶಿಕ್ಷಕರು ಪಾಲ್ಗೊಂಡಿದ್ದರು.12 ಬೀರೂರು 1ಬೀರೂರಿನ ಗುರುಭವನದಲ್ಲಿ ಶುಕ್ರವಾರ ಬೀರೂರು ಶೈಕ್ಷಣಿಕ ವಲಯದ ಶಿಕ್ಷಕರ ಸಂಘ ಹಮ್ಮಿಕೊಂಡಿದ್ದ ಜನಪದ ಸಂವಾದ ಮತ್ತು ಸಹಪಠ್ಯ ಚಟುವಟಿಕೆಗಳ ಸ್ಪರ್ಧಾ ಕಾರ್ಯಕ್ರಮವನ್ನು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಮುಗಳಿ ಲಕ್ಷ್ಮಿದೇವಮ್ಮ ಉದ್ಘಾಟಿಸಿದರು. ಬಿಇಒ ಚೋಪ್ದಾರ್, ಬಿ.ಜೆ.ಜಗದೀಶ್, ಉಮಾಕಾಂತ್, ಬಸಪ್ಪ, ಶೇಖರಪ್ಪ ಸೇರಿದಂತೆ ಮತ್ತಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಧಿವೇಶನ ಮುಗಿದ ಬಳಿಕ ಡಿಕೆಶಿಗೆ ಶುಭಸುದ್ದಿ : ಇಕ್ಬಾಲ್
ಬೆಳಗಾವೀಲೂ ‘ಕೈ’ ಡಿನ್ನರ್‌ ಸಭೆಗೆ ಬಿವೈವಿ ಕಿಡಿ